Quantcast
Channel: VijayKarnataka
Viewing all articles
Browse latest Browse all 6795

ಮೂರು ರೀತಿಯ ಸ್ಮೃತಿ

$
0
0

ನಾವು ಎರಡು ರೀತಿಯ ಜಗತ್ತುಗಳಲ್ಲಿ ಜೀವಿಸುತ್ತೇವೆ. ಒಂದು ಸ್ಮೃತಿಯ ಜಗತ್ತು, ಮತ್ತೊಂದು ನಿಜವಾದ ಜಗತ್ತು. ಸ್ಮೃತಿಯಲ್ಲಿ ಮೂರು ರೀತಿಯ ಸ್ಮೃತಿಗಳಿವೆ. 1) ಒಂದನೆಯ ರೀತಿಯ ಸ್ಮೃತಿಯಲ್ಲಿ ನಿಮಗೆ ನೆನಪಿದೆ ಆದರೆ ಅದರ ಬಗ್ಗೆ ನೀವೇನನ್ನೂ ಮಾಡಲಾರಿರಿ. ನಿಮ್ಮ ಬಾಲ್ಯದ ನೆನಪು ನಿಮಗಿದೆ, ಆದರೆ ಅದನ್ನು ಮತ್ತೆ ಮರಳಿ ಪಡೆಯಲಾರಿರಿ. 2) ಮತ್ತೊಂದು ರೀತಿಯ ಸ್ಮೃತಿ ಎಂದರೆ, ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ಅದನ್ನು ಪಡೆದುಕೊಳ್ಳಲು ಬಹಳ ಪ್ರಯತ್ನ ಪಡುತ್ತೀರಿ. ಒಂದು ವೇಳೆ ನಿಮ್ಮ ಬೀಗದ ಕೈಯನ್ನು ಟೊರೊಂಟೊವಿನಲ್ಲೇ ಮರೆತು ನೀವು ಕೆನಡಾಗೆ ಬಂದು ಬಿಟ್ಟಿದ್ದರೆ, ಮತ್ತೆ ಏಳು ಗಂಟೆಗಳ ಕಾಲ ಗಾಡಿಯನ್ನು ಓಡಿಸಿಕೊಂಡು ಬಂದು ನಿಮ್ಮ ಬೀಗದ ಕೈಯನ್ನು ತೆಗೆದುಕೊಳ್ಳಬೇಕು. ಅದನ್ನು ತಕ್ಷ ಣವೇ ಪಡೆಯಲು ಸಾಧ್ಯವಿಲ್ಲ. ನೆನಪಿಸಿಕೊಂಡರೂ, ಬಹಳ ಪ್ರಯತ್ನ ಪಟ್ಟ ನಂತರ ಮಾತ್ರ ಅದನ್ನು ಪಡೆದುಕೊಳ್ಳುತ್ತೀರಿ. 3) ಮೂರನೆಯ ರೀತಿಯ ಸ್ಮೃತಿ ಎಂದರೆ ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ಅದನ್ನು ತಕ್ಷ ಣವೇ ಪಡೆದುಕೊಳ್ಳುತ್ತೀರಿ. ನಿಮ್ಮ ಕನ್ನಡಕಗಳಿಗಾಗಿ ಹುಡುಕುತ್ತಿರುತ್ತೀರಿ ಮತ್ತು ಯಾರೋ ಬಂದು, ''ನಿನ್ನ ಕನ್ನಡಕ ನಿನ್ನ ತಲೆಯ ಮೇಲೇ ಇದೆಯಲ್ಲ!?'' ಎಂದಾಗ ನೀವು, ''ಓ ಹೌದು, ಅದು ಅಲ್ಲೇ ಇದೆ'' ಎಂದು ನೆನಪಿಸಿಕೊಳ್ಳುತ್ತೀರಿ. ಇಲ್ಲಿ ನೆನಪಿಸಿಕೊಂಡ ತಕ್ಷ ಣವೇ ಸಿಕ್ಕು ಬಿಡುತ್ತದೆ. ಅದನ್ನು ಪಡೆದುಕೊಳ್ಳಲು ಪ್ರಾಯಾಸ ಪಡಬೇಕಿಲ್ಲ. ಆಧ್ಯಾತ್ಮಿಕ ಪಯಣವು ಮೂರನೆಯ ರೀತಿಯ ಸ್ಮೃತಿ. ಅದನ್ನು ತಿಳಿದುಕೊಳ್ಳುವುದು, ಪಡೆದುಕೊಳ್ಳುವುದು, ಎಲ್ಲವೂ ಒಮ್ಮೆಲೇ ಆಗಿಬಿಡುತ್ತದೆ. ನೀವು ಮಾಡಬೇಕಾದದ್ದೆಂದರೆ ಆ ಸಂಬಂಧವನ್ನು ಅನುಭವಿಸುವುದು. ಆ ಸಂಬಂಧವನ್ನು ಅನುಭವಿಸುವುದು ಎಂದರೆ ನಿಜ ಜಗತ್ತಿಗೆ ನಮ್ಮನ್ನು ಸೇರಿಸುವ ಆ ಸ್ಮೃತಿ. ನಾವು ಜೀವಿಸುವ ಕಾಲ್ಪನಿಕ ಸ್ಮೃತಿಗಳ ಜಗತ್ತಿನಿಂದ ನಿಜವಾದ ಜಗತ್ತಿಗೆ ತೆರಳುವುದು. ಆ ಸಂಬಂಧವನ್ನು ಹೇಗೆ ಅನುಭವಿಸುವುದು? ಇಲ್ಲೇ ಗುರು ತತ್ವದ ಪಾತ್ರ ಬರುವುದು, ಏಕೆಂದರೆ ಆ ಸಂಬಂಧ ಉಂಟಾಗುವುದು ಗುರುವಿನಿಂದ ಮಾತ್ರ.

ನೀವು ಬೆಂಗಳೂರಿನಲ್ಲಿದ್ದು, ಒಮ್ಮೆ ಅದನ್ನು ತಿಳಿದುಕೊಂಡರೆ ಸಾಕು. ಪದೇ ಪದೇ ಪ್ರಾಯಾಸಪಟ್ಟು ಬೆಂಗಳೂರಿನಲ್ಲಿ ಇದ್ದೀರೆಂದು ನೆನಪಿಸಿಕೊಳ್ಳುತ್ತಲಿರಬೇಕಿಲ್ಲ. ಅದೇ ರೀತಿಯಾಗಿ, ಸಂಬಂಧ ಅನುಭವಿಸಿದ ತಕ್ಷ ಣವೇ ಕಾಲ್ಪನಿಕವಾದ ಸ್ಮೃತಿಯ ಮೋಡಗಳಿಂದ ವಾಸ್ತವ ಜಗತ್ತಿಗೆ ಬಂದು ಬಿಡುತ್ತೀರಿ. ಅದೇ, ''ಓ'' ಎಂಬ ಆಶ್ಚರ್ಯಕರವಾದ, ವಿಸ್ಮಯಕಾರಕವಾದ ಸ್ಥಿತಿ.

ಜ್ಞಾನದೊಡನೆ, ಗುರುವಿನೊಡನೆ ಸಂಬಂಧವನ್ನು ಬೆಳೆಸಿಕೊಂಡಾಗ ಚಿಂತಿಸುವ ಅವಶ್ಯಕತೆಯೇ ಇಲ್ಲ. ಚಿಂತೆ, ಆತಂಕ ಅಥವಾ ನಕಾರಾತ್ಮಕವಾದ ಭಾವನೆಗಳಿರಲು ಹೇಗೆ ಸಾಧ್ಯ? ಸಾಧ್ಯವೇ ಇಲ್ಲ! ಎಲ್ಲವೂ ಮಾಯವಾಗಿಬಿಡುತ್ತವೆ. ವಿಶಿಷ್ಟವಾಗಿ ಗುರು ಹುಣ್ಣೆಮೆಯಂದು ಈ ಸಂಬಂಧವನ್ನು ಅನುಭವಿಸಿ, ''ನಾನು ಸಂಬಂಧಪಟ್ಟಿದೆ, ದೈವದೊಡನೆ ಒಂದಾಗಿದ್ದೇನೆ'' ಎಂದು ಸಂತಸದಿಂದಿರುವುದು. ಇದರಿಂದ ತಕ್ಷ ಣವೇ ಸಂಭ್ರಮ, ಸಂತೋಷ ಉಂಟಾಗುತ್ತದೆ. ಸಂಭ್ರಮಿಸಲು ತಯಾರಿ ಮಾಡಿಕೊಳ್ಳಬೇಕಿಲ್ಲ. ಓರ್ವ ಕಡುಬಡವನು ತಾನೇ ರಾಜಕುಮಾರ ಎಂದು ಅರಿತುಕೊಂಡಂತೆ. ತಾನು ರಾಜಕುಮಾರನೆಂದು ಮರೆತು ಕಷ್ಟದಲ್ಲಿ ಸಿಲುಕಿ ಬಳಲುತ್ತಿದ್ದವನಿಗೆ ಯಾರೋ ಬಂದು, ''ಹೇ, ನೀನೇ ರಾಜಕುಮಾರ'' ಎಂದು ಎಬ್ಬಿಸಿದಂತೆ. ಒಂದೇ ವಾಕ್ಯದಿಂದ ಅವನಿಗೆ ನೆನಪು ಬಂದು ರಾಜ್ಯವನ್ನು ತಕ್ಷ ಣವೇ ಮರಳಿ ಪಡೆಯುತ್ತಾನೆ. ಅಲ್ಲಿ ಪ್ರಯತ್ನವೇ ಇಲ್ಲ.

ನಿಮ್ಮ ಮನಸ್ಸಿಗೆ ಸದಾ ಶ್ರಮಪಡುವುದೇ ಒಂದು ಅಭ್ಯಾಸವಾಗಿಬಿಟ್ಟಿದೆ. ಮನಸ್ಸನ್ನು ಶಾಂತಗೊಳಿಸಿ, ಪ್ರಯತ್ನ ಮಾಡಲು ಏನೂ ಇಲ್ಲ ಎಂಬ ಅರಿವನ್ನು ಮನಸ್ಸಿಗೆ ಮೂಡಿಸಬೇಕು. ''ನಾನು ಸಂಬಂಧಪಟ್ಟಿದೇನೆ'' ಎಂದು ನೇರವಾದ ಸಂಬಂಧವನ್ನು ಗುರುತಿಸಬೇಕಷ್ಟೆ. ಎಲ್ಲವೂ ಆದಂತೆಯೆ!

* ಶ್ರೀ ಶ್ರೀ ರವಿಶಂಕರ್‌


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>