Quantcast
Channel: VijayKarnataka
Viewing all articles
Browse latest Browse all 6795

ಮೂವಿ BUZZ: ವರುಣ್‌ ಜತೆ ಜಾಹ್ನವಿ?

$
0
0

ಹಿರಿಯ ನಟಿ ಶ್ರೀದೇವಿ ಮಗಳು ಜಾಹ್ನವಿ, ಬಾಲಿವುಡ್‌ನಲ್ಲಿ ಮೊದಲು ಯಾರ ಜತೆ ನಾಯಕಿಯಾಗಿ ನಟಿಸಬಹುದು ಎಂಬ ಕುರಿತು ಈಗಾಗಲೇ ಅನೇಕ ಚರ್ಚೆಗಳು ನಡೆದಿವೆ.

ಕರಣ್‌ ಜೋಹರ್‌ ಹಾಗೂ ಸಾಜಿದ್‌ ನಡಿಯಾದ್‌ವಾಲಾ ಜಂಟಿ ನಿರ್ಮಾಣದಲ್ಲಿ ತಯಾರಾಗಲಿರುವ 'ಶಿದ್ದತ್‌' ಸಿನಿಮಾದಲ್ಲಿ ಜಾಹ್ನವಿ ನಟಿಸುವ ಸಾಧ್ಯತೆ ಇದೆ ಎಂಬ ವದಂತಿ ಬಾಲಿವುಡ್‌ನಲ್ಲಿ ಸುಳಿದಾಡುತ್ತಿದೆ. ಈ ಇಬ್ಬರೂ ನಿರ್ಮಾಪಕರ ಮಹತ್ವಾಕಾಂಕ್ಷೆಯ ಚಿತ್ರವಿದು.

ಇದರಲ್ಲಿ ವರುಣ್‌ ಧವನ್‌ ನಾಯಕ. ಈ ಯುವ ಹೀರೋಗೆ ಜಾಹ್ನವಿ ನಾಯಕಿಯಾಗಿ ಬಣ್ಣ ಹಚ್ಚುವ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಇದಕ್ಕಿಂತ ಮೊದಲು ಅಲಿಯಾ ಭಟ್‌ ಹಾಗೂ ಅರ್ಜುನ್‌ ಕಪೂರ್‌ ಇದರಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಜಾಹ್ನವಿ ತಮ್ಮ ಮುಗ್ಧ ಸೌಂದರ್ಯದಿಂದ ನಿರ್ಮಾಪಕರ ಗಮನ ಸೆಳೆದಂತಿದೆ. ಸದ್ಯದಲ್ಲೇ ಹಿರೋಯಿನ್‌ ಆಯ್ಕೆ ಅಂತಿಮವಾಗಲಿದೆ.

ಗುಂಟೂರಿನಲ್ಲಿ ಸನ್ನಿ

ತೆಲುಗಿನಲ್ಲಿ 'ಗುಂಟೂರ್‌ ಟಾಕೀಸ್‌ -2' ಹೆಸರಿನ ಸಿನಿಮಾ ನಿರ್ಮಾಣಗೊಳ್ಳುತ್ತಿರುವುದು ತುಂಬ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಇದು ಕಾಮಿಡಿ ಸಿನಿಮಾ ಆಗಿದ್ದು, ಸನ್ನಿ ಲಿಯೋನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಯೆಸ್‌, ಈ ವಿಷಯವನ್ನು ಚಿತ್ರದ ನಿರ್ದೇಶಕ ರಾಜ್‌ ಕುಮಾರ್‌ ಅವರೇ ಬಹಿರಂಗಪಡಿಸಿದ್ದಾರೆ. 'ಸನ್ನಿ ಲಿಯೋನ್‌ ಅಂದಾಕ್ಷಣ ಅವರನ್ನು ಗ್ಲಾಮರ್‌ಗೇ ಸೀಮಿತಗೊಳಿಸುತ್ತೇವೆ ಅಂತ ಅಂದುಕೊಳ್ಳುವುದು ಬೇಡ. ಈ ನಟಿಗೆ ಇಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನೇ ಕೊಟ್ಟಿದ್ದೇವೆ. ಹಂಟರ್‌ ರಾಣಿ ಅಂತ ಈ ಕ್ಯಾರೆಕ್ಟರ್‌ ಹೆಸರು' ಎನ್ನುತ್ತಾರೆ ಈ ನಿರ್ದೇಶಕ.

'ಗ್ಲಾಮರ್‌ ಜತೆಗೆ ಈ ಸಿನಿಮಾದ ಇಂಪಾರ್ಟೆಂಟ್‌ ರೋಲ್‌ ಸಿಕ್ಕಿದ್ದರಿಂದಲೇ ಸನ್ನಿ ಒಪ್ಪಿಕೊಂಡಿದ್ದು. ಅವರ ಗ್ಲಾಮರ್‌ ತೋರಿಸಿ ಪ್ರೇಕ್ಷಕರನ್ನು ಸೆಳೆಯುವ ತಂತ್ರಕ್ಕೆ ನಾವೇನೂ ಜೋತು ಬಿದ್ದಿಲ್ಲ' ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ರಾಜ್‌ಕುಮಾರ್‌.

ಆದರೆ ಈ ಸನ್ನಿ ಅದ್ಹೇಗೆ ಕಾಮಿಡಿ ಪಾತ್ರಕ್ಕೆ ಮ್ಯಾಚ್‌ ಆಗ್ತಾರೆ ಎಂದು ಪ್ರೇಕ್ಷಕರು ಹುಬ್ಬೇರಿಸಿ ಕೇಳುತ್ತಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>