Quantcast
Channel: VijayKarnataka
Viewing all articles
Browse latest Browse all 6795

20 ಯುವ ಸಾಧಕರಿಗೆ ಇನ್ಫಿ ಮೇಕರ್‌ ಪ್ರಶಸ್ತಿ ಘೋಷಣೆ

$
0
0

ತಲಾ 5 ಲಕ್ಷ ರೂ. ನಗದು ಪುರಸ್ಕಾರ

ಆರೋಗ್ಯ, ಇಂಧನ, ಶಿಕ್ಷಣ, ಧ್ವನಿ ಮತ್ತು ಸಂಗೀತ, ಸಾಮಾಜಿಕ ಬದಲಾವಣೆ, ರೊಬೋಟಿಕ್ಸ್‌, ಕಲೆ ಮತ್ತು ವಿನ್ಯಾಸ, ಕೃತಕ ಬುದ್ಮತ್ತೆ, ಎಲೆಕ್ಟ್ರಾನಿಕ್ಸ್‌ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆಗೆ ಗೌರವ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ ಮೊದಲ ಬಾರಿಗೆ ಇನ್ಫಿ ಮೇಕರ್‌ ಪ್ರಶಸ್ತಿಗಳನ್ನು 20 ಮಂದಿಗೆ ಘೋಷಿಸಿದೆ. ಸಮಕಾಲೀನ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವನ್ನು ಶೋಸಬಲ್ಲವರಿಗೆ ಉತ್ತೇಜನ ನೀಡಲು ಇನ್ಫೋಸಿಸ್‌ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ತಲಾ 5 ಲಕ್ಷ ರೂ. ನಗದು ಬಹುಮಾನವಾಗಿದೆ.

ಇನ್ಫೋಸಿಸ್‌ ಪ್ರತಿಷ್ಠಾನವು 2015ರಲ್ಲಿ ಅಮೆರಿಕದಲ್ಲಿ ಈ ಬಗೆಯ ಬಹುಮಾನವನ್ನು ಆರಂಭಿಸಿತ್ತು. ಇದೀಗ ಭಾರತದಲ್ಲೂ ಪ್ರದಾನ ಮಾಡತೊಡಗಿದೆ. ಇದು ಮೇಕ್‌ ಇನ್‌ ಇಂಡಿಯಾಗೆ ಪೂರಕವಾಗಿದೆ ಎಂದು ತಿಳಿಸಿದೆ.

ಆರೋಗ್ಯ, ಇಂಧನ, ಶಿಕ್ಷಣ, ಧ್ವನಿ ಮತ್ತು ಸಂಗೀತ, ಸಾಮಾಜಿಕ ಬದಲಾವಣೆ, ರೊಬೋಟಿಕ್ಸ್‌, ಕಲೆ ಮತ್ತು ವಿನ್ಯಾಸ, ಕೃತಕ ಬುದ್ಮತ್ತೆ, ಎಲೆಕ್ಟ್ರಾನಿಕ್ಸ್‌ ಮುಂತಾದ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವವರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸಾಮಾಜಿಕ ಬದಲಾವಣೆ ಕ್ಷೇತ್ರದಲ್ಲಿ ಅಸಿಸ್ಟ್‌ ಯೂನ ಸೌರಭ್‌ ಅಲಗುಂದಾಡಿ, ಆರೋಗ್ಯ ವಲಯದಲ್ಲಿ ದೀಪಿಕಾ ಗಿರಿ, ವಿ ಕೃಷ್ಣ ಕುಮಾರ್‌, ಇಂಧನ ವಲಯದಲ್ಲಿ ಕೃಷ್ಣನ್‌, ಕೃತಕ ಬುದ್ಮತೆ ವಿಭಾಗದಲ್ಲಿ ಗೋಕುಲ್‌ ಶ್ರೀನಾಥ್‌, ಎಲೆಕ್ಟ್ರಾನಿಕ್ಸ್‌ನಲ್ಲಿ ನಾಗಾರ್ಜುನ ಪಟೌರಿ, ಕೃಷಿ ವಲಯದಲ್ಲಿ ಬೆಂಗಳೂರು ಮೂಲದ ಸ್ಟಾರ್ಟಪ್‌ ಫರ್ಮೆಡಿಶಿಯಸ್‌ನ ನಿತಿನ್‌ ರಾಜು. ಡಿ, ನಿತೀಶ್‌ ಕುಮಾರ್‌ ಮತ್ತು ಸುಬಜಿತ್‌ ಬಿಸ್ವಾಸ್‌ ಮುಂತಾದವರು ಪ್ರಶಸ್ತಿ ಗಳಿಸಿದ್ದಾರೆ.

ಅಂಧ ವಿಕಲಚೇತನರಿಗೆ ವಾಕಿಂಗ್‌ ಸ್ಟಿಕ್‌, ಕೃಷಿಯಲ್ಲಿ ನೀರಿನ ವೈಜ್ಞಾನಿಕ ನಿರ್ವಹಣೆಗೆ ಸಹಕರಿಸುವ ಸಾಧನಗಳು, ಅಗ್ಗದ ವೆಚ್ಚದ ಗಾಳಿ ಯಂತ್ರ,ಹೃದಯ ಬಡಿತದ ಮೇಲೆ ನಿಗಾ ವಹಿಸುವ ಸಾಧನ, ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ವೈದ್ಯಕೀಯ ನೆರವು ಒದಗಿಸುವ ಕ್ಲಿನಿಕ್‌ ಇನ್‌ ಬಾಕ್ಸ್‌, ಕಿವುಡುತನದ ಸಮಸ್ಯೆ ಇರುವವರಿಗೆ ನೆರವಾಗುವ ಸಾಧನ, ಸುಲಭ ನಿರ್ವಹಣೆಯ ಸೈಕಲ್‌ ರಿಕ್ಷಾ ಮುಂತಾದವುಗಳನ್ನು ಆವಿಷ್ಕರಿಸಿದ ಯುವ ಸಂಶೋಧಕರಿಗೆ ಪ್ರಶಸ್ತಿ ಒಲಿದಿದೆ.



Viewing all articles
Browse latest Browse all 6795

Trending Articles


ಪತಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮೃತದೇಹ ಪತ್ತೆ


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಸಿನಿ ಪ್ರೇಕ್ಷಕರ ಗಮನ ಸೆಳೆದ ‘Supplier ಶಂಕರ’


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>