Quantcast
Channel: VijayKarnataka
Viewing all articles
Browse latest Browse all 6795

ಭಾರತದಲ್ಲಿ ಸ್ಮಾರ್ಟ್‌ಫೋನ್ ಘಟಕ: ಚೀನಾ ಸರಕಾರದ ರೆಡ್ ಸಿಗ್ನಲ್

$
0
0

ಬೀಜಿಂಗ್: ಚೀನಾ ಮೂಲದ ದೂರ ಸಂಪರ್ಕ ಕಂಪನಿ ಹವಾಯ್ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭಿಸುತ್ತಿದ್ದು, ಇದನ್ನು ಚೀನಾದ ಅಧಿಕೃತ ಮಾಧ್ಯಮ ವಿರೋಧಿಸುತ್ತಿದೆ.

'ಭಾರತದಲ್ಲಿ ಈ ಉತ್ಪಾದನಾ ಘಟಕ ಆರಂಭಿಸಿದಲ್ಲಿ, ಚೀನಾದಲ್ಲಿ ಉದ್ಯೋಗವಕಾಶಗಳು ಕಡಿಮೆಯಾಗಲ್ಲಿದ್ದು, ವಿಶ್ವದ ಎರಡನೇ ದೊಡ್ಡ ಆರ್ಥಿಕ ಆರ್ಥಿಕ ಪ್ರಗತಿ ಕಾಣುತ್ತಿರುವ ಚೀನಾದೊಂದಿಗೆ ಭಾರತದ ಸ್ಪರ್ಧೆ ಹೆಚ್ಚಲಿದೆ,' ಎಂದು ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಸೋಮವಾರ ಹೇಳಿದೆ.

ಸ್ಥಿರ ಸರಕಾರ, ಕಡಿಮೆ ವೇತನಕ್ಕೆ ಕಾರ್ಯನಿರ್ವಹಿಸುವ ಮಾನವ ಸಂಪನ್ಮೂಲ, ಜನಸಂಖ್ಯೆ ಮುಂತಾದ ಕಾರಣಗಳಿಂದ ಭಾರತದಲ್ಲಿಯೇ ಉತ್ಪಾದನಾ ಘಟಕಗಳನ್ನು ಆರಂಭಿಸಲು ಇತರೆ ದೇಶಗಳು ಒಲವು ತೋರುತ್ತಿವೆ. ಅಲ್ಲದೇ ಭಾರತದಲ್ಲಿ ಸ್ಮಾರ್ಟ್‌ಫೋನ್‍‌ಗೆ ಇರುವ ಬೇಡಿಕೆಯನ್ನು ಮನಗೊಂಡು, ಇಲ್ಲಿಯೇ ಉತ್ಪಾದನಾ ಘಟಕವೊಂದನ್ನು ಆರಂಭಿಸಲು ಅನೇಕ ವಿದೇಶಿ ಕಂಪನಿಗಳು ಮುಂದಾಗಿವೆ.

'ಇತ್ತೀಚಿಗೆ ಸ್ಮಾರ್ಟ್‌ಫೋನ್ ಮಾರಾಟಗಾರರು ಮಾರುಕಟ್ಟೆ ವಿಸ್ತರಣಾ ದೃಷ್ಟಿಯಿಂದ ಚೀನಾ ಹೊರತುಪಡಿಸಿ, ಬೇರೆಡೆಯಲ್ಲಿಯೂ ಉತ್ಪಾದನಾ ಘಟಕಗಳನ್ನು ಆರಂಭಿಸುತ್ತಿವೆ. ಇಂಥ ಘಟಕಗಳು ಚೀನಾದಿಂದ ಭಾರತಕ್ಕೆ ಸ್ಥಳಾಂತರವಾದರೆ ಎಷ್ಟು ಚೀನೀಯರಿಗೆ ಕೆಲಸ ಸಿಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವಾದರೂ, ಸಾಕಷ್ಟು ಉದ್ಯೋಗವಕಾಶಗಳಿಂದ ವಂಚಿತರಾಗಲಿದ್ದಾರೆಂಬುವುದು ಮಾತ್ರ ಸ್ಪಷ್ಟ,' ಎಂದು ಪತ್ರಿಕೆಯಲ್ಲಿ ಹೇಳಲಾಗಿದೆ.

'ಭಾರತದಲ್ಲಿ ಚೀನಾ ಕಂಪನಿಗಳು ಹೆಚ್ಚೆಚ್ಚು ಬಂಡವಾಳ ಹೂಡಲು ಮುಂದಾಗುತ್ತಿದ್ದು, ಇದು ಭಾರತ ಹಾಗೂ ಚೀನಾ ನಡುವಿನ ಆರ್ಥಿಕ ಹಾಗೂ ರಾಜಕೀಯ ಗೊಂದಲಗಳಿಗೆ ಕಾರಣವಾಗಬಲ್ಲದು,' ಎಂದು ಪತ್ರಿಕೆಯಲ್ಲಿ ಎಚ್ಚರಿಸಲಾಗಿದೆ.

As China's telecom firm Huawei starts manufacturing in India+ , official media has raised the red flag, warning that Beijing needs to worry about job cuts due to shifting of production bases as economic rivalry increases between India and the world's second largest economy.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>