Quantcast
Channel: VijayKarnataka
Viewing all articles
Browse latest Browse all 6795

ಮುಕೇಶ್‌ ಅಂಬಾನಿ ಸತತ 9ನೇ ವರ್ಷ ನಂ.1 ಶ್ರೀಮಂತ

$
0
0

* ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಸಂಪತ್ತು 1.52 ಲಕ್ಷ ಕೋಟಿ ರೂ.

* ಎರಡನೇ ಸ್ಥಾನದಲ್ಲಿ ದಿಲೀಪ್‌ ಸಾಂಘ್ವಿ

* ನಾಲ್ಕಕ್ಕೆ ಇಳಿದ ಅಜೀಂ ಪ್ರೇಮ್‌ಜಿ

* ಆಚಾರ್ಯ ಬಾಲಕೃಷ್ಣ 48ನೇ ಸಿರಿವಂತ


ಸಿಂಗಾಪುರ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಫೋರ್ಬ್ಸ್‌ ಪಟ್ಟಿಯಲ್ಲಿ ಸತತ 9ನೇ ವರ್ಷಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅಗ್ರ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಸನ್‌ ಫಾರ್ಮಾ ಮುಖ್ಯಸ್ಥ ದಿಲೀಪ್‌ ಸಾಂಘ್ವಿ ಇದ್ದಾರೆ. ಅಚ್ಚರಿಯೆಂದರೆ ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ ಅವರು 250 ಕೋಟಿ ಡಾಲರ್‌ ಸಂಪತ್ತಿನೊಂದಿಗೆ, 48ನೇ ರಾರ‍ಯಂಕ್‌ ಗಳಿಸಿ ಫೋರ್ಬ್ಸ್‌ ಪಟ್ಟಿಯನ್ನು ಪ್ರವೇಶಿಸಿದ್ದಾರೆ.

ಮುಕೇಶ್‌ ಅಂಬಾನಿಯವರ ಸಂಪತ್ತು 2270 ಕೋಟಿ ಡಾಲರ್‌ಗೆ (1.52 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ದಿಲೀಪ್‌ ಸಾಂಘ್ವಿ ಸಂಪತ್ತು 1690 ಕೋಟಿ ಡಾಲರ್‌ (1.13 ಲಕ್ಷ ಕೋಟಿ ರೂ.) ಇದೆ. ಫೋರ್ಬ್ಸ್‌ನ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ವಿಪ್ರೊ ಮುಖ್ಸಸ್ಥ ಅಜೀಂ ಪ್ರೇಮ್‌ಜೀ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದು, ಹಿಂದೂಜಾ ಕುಟುಂಬ ಮೂರನೇ ಸ್ಥಾನಕ್ಕೆ ಏರಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರ ಶೇ.21ರಷ್ಟು ವೃದ್ಧಿಸಿರುವುದರಿಂದ ಮುಕೇಶ್‌ ಅಂಬಾನಿಯವರ ಸಿರಿಯೂ ಹೆಚ್ಚಳವಾಗಿದೆ. ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಅವರಿಗೆ 35ನೇ ಸ್ಥಾನವಿದೆ. ಮುಕೇಶ್‌ ಅಂಬಾನಿಯವರ ಕಿರಿಯ ಸೋದರ ಅನಿಲ್‌ ಅಂಬಾನಿಯವರು 32ನೇ ರಾರ‍ಯಂಕ್‌ನಲ್ಲಿದ್ದು, 340 ಕೋಟಿ ಡಾಲರ್‌ ಸಂಪತ್ತಿನೊಂದಿಗೆ 32ನೇ ಸ್ಥಾನದಲ್ಲಿದ್ದಾರೆ. ಸಾಂಘ್ವಿ ಅವರೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

English summary: Industrialist Mukesh Ambani was on Thursday named India's richest person for a ninth year in a row with a sharp increase in networth to $22.7 billion, while Sun Pharma's Dilip Shanghvi was ranked a distant second with a wealth of $16.9 billion. The Hinduja Family moved up to the third position ($15.2 billion) on the annual Forbes list of India's 100 Richest People.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>