Quantcast
Channel: VijayKarnataka
Viewing all articles
Browse latest Browse all 6795

ವಾರಿಯರ್ಸ್‌ಗೆ ಹ್ಯಾಟ್ರಿಕ್‌ ಜಯ

$
0
0

ಸತತ ಮೂರನೇ ಸೋಲುಂಡ ಬಳ್ಳಾರಿ ಟಸ್ಕರ್ಸ್‌

ಮಂಜುನಾಥ ಕೆ. ಜಾಬಗೆರೆ ಹುಬ್ಬಳ್ಳಿ

ಭರ್ಜರಿ ಬ್ಯಾಟಿಂಗ್‌ ನಂತರ ಅಮೋಘ ಬೌಲಿಂಗ್‌ ಪ್ರದರ್ಶಿಸಿದ ಮೈಸೂರು ವಾರಿಯರ್ಸ್‌ ತಂಡ, 5ನೇ ಆವೃತ್ತಿಯ ಕೆಪಿಎಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿತು.

ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2ನೇ ಪಂದ್ಯದಲ್ಲಿ ಮನೀಶ್‌ ಪಾಂಡೆ ಸಾರಥ್ಯದ ಮೈಸೂರು ತಂಡ, ಬಳ್ಳಾರಿ ಟಸ್ಕರ್ಸ್‌ ತಂಡವನ್ನು 13 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಮೈಸೂರು ವಾರಿಯರ್ಸ್‌ ತಂಡ ನಿಗದಿತ 17 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಮಳೆಯ ಕಾರಣ ಓವರ್‌ಗಳ ಸಂಖ್ಯೆಯನ್ನು 17ಕ್ಕೆ ಇಳಿಸಲಾಗಿತ್ತು.

158 ರನ್‌ಗಳ ಕಠಿಣ ಸವಾಲು ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್‌ 17 ಓವರ್‌ಗಳಲ್ಲಿ 6 ವಿಕೆಟ್‌ಗೆ 144 ರನ್‌ ಗಳಿಸಿ ಸತತ 3ನೇ ಸೋಲಿಗೆ ಶರಣಾಯಿತು. ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ರೋಹನ್‌ ಕದಂ 40 ಎಸೆತಗಳಲ್ಲಿ ಸ್ಫೋಟಕ 61 ರನ್‌ ಗಳಿಸಿದರಾದರೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಬಳ್ಳಾರಿ ತಂಡಕ್ಕೆ ಸೋಲು ಎದುರಾಯಿತು.

ಮನೀಶ್‌ ಅಬ್ಬರದ ಅರ್ಧಶತಕ

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಮೈಸೂರು ವಾರಿಯರ್ಸ್‌ ಆರಂಭದಿಂದಲೇ ಅಬ್ಬರದ ಆಟಕ್ಕೆ ಮುಂದಾಯಿತು. ಆರಂಭಿಕರಾದ ಅರ್ಜುನ್‌ ಹೊಯ್ಸಳ (46) ಮತ್ತು ರಾಜೂ ಭಟ್ಕಳ್‌ (16) ಪ್ರಥಮ ವಿಕೆಟ್‌ಗೆ 27 ಎಸೆತಗಳಲ್ಲಿ 41 ರನ್‌ ಸೇರಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ಮನೀಶ್‌ ಪಾಂಡೆ ತಮ್ಮ ಬ್ಯಾಟಿಂಗ್‌ ವೈಭವ ಪ್ರದರ್ಶಿಸಿದರು. ಆಸ್ಪ್ರೇಲಿಯಾ ಪ್ರವಾಸದಿಂದ ಮರಳಿ ಕೆಪಿಎಲ್‌-5ರಲ್ಲಿ ಮೊದಲ ಬಾರಿ ಕಣಕ್ಕಿಳಿದ ಪಾಂಡೆ 28 ರನ್‌ ಗಳಿಸಿದ್ದ ವೇಳೆ ಸಿಕ್ಕ ಜೀವದಾನದ ಪೂರ್ಣ ಲಾಭ ಪಡೆದು 36 ಎಸೆತಗಳಲ್ಲಿ 2 ಸಿಕ್ಸರ್‌, 2 ಬೌಂಡರಿ ಸಹಿತ 52 ರನ್‌ ಸಿಡಿಸಿದರು.

5ನೇ ಕ್ರಮಾಂಕದಲ್ಲಿ ಆರ್‌.ಜೊನಾಥನ್‌ ಮೂರು ಭರ್ಜರಿ ಸಿಕ್ಸರ್‌ಗಳೊಂದಿಗೆ 14 ಎಸೆತಗಳಲ್ಲಿ 30 ರನ್‌ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌

ಮೈಸೂರು ವಾರಿಯರ್ಸ್‌: 17 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಅರ್ಜುನ್‌ ಹೊಯ್ಸಳ 46, ಮನೀಶ್‌ ಪಾಂಡೆ 52, ಆರ್‌.ಜೊನಾಥನ್‌ 30; ಪ್ರತೀಕ್‌ ಜೈನ್‌ 30ಕ್ಕೆ2)

ಬಳ್ಳಾರಿ ಟಸ್ಕರ್ಸ್‌: 17 ಓವರ್‌ಗಳಲ್ಲಿ 6 ವಿಕೆಟ್‌ಗೆ 144 (ರೋಹನ್‌ ಕದಂ 61, ಸಿ.ಎ ಕಾರ್ತಿಕ್‌ 30; ಕೆ.ಗೌತಮ್‌ 26ಕ್ಕೆ2, ವಿ.ಕೌಶಿಕ್‌ 21ಕ್ಕೆ2)

ಬುಲ್ಸ್‌ ಗೆಲುವು ಕಸಿದ ವರುಣ

ಬಿಜಾಪುರ ವಿರುದ್ಧ ಸೋಲಿನಿಂದ ಪಾರಾದ ಮಂಗಳೂರು ಯುನೈಟೆಡ್‌

ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಮಳೆಯ ಕಾಟದಿಂದಾಗಿ ಬಿಜಾಪುರ ಬುಲ್ಸ್‌ ತಂಡ 5ನೇ ಆವೃತ್ತಿಯ ಕೆಪಿಎಲ್‌ನಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧ ಗೆಲ್ಲುವ ಸುವರ್ಣಾವಕಾಶವನ್ನು ಕಳೆದುಕೊಂಡಿತು.

ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ವರುಣನ ಅಡ್ಡಿಯಿಂದಾಗಿ ಪಂದ್ಯ ನಿಗದಿತ ಸಮಯಕ್ಕಿಂತ 2 ನಿಮಿಷ ತಡವಾಗಿ ಆರಂಭವಾಯಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಹ್ವಾನ ಪಡೆದ ಮಂಗಳೂರು ಯುನೈಟೆಡ್‌ 9 ಓವರ್‌ಗಳಲ್ಲಿ ಕೇವಲ 45 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿತು ಕುಸಿತ ಕಂಡಿತು. ಈ ವೇಳೆ ಸುರಿದ ಮಳೆ ಆಟ ಮುಂದುವರಿಸಲು ಅವಕಾಶ ನೀಡದ ಕಾರಣ, ಸಂಜೆ 4.20ಕ್ಕೆ ಪಂದ್ಯವನ್ನು ರದ್ದುಪಡಿಸಲಾಯಿತು. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಯಿತು.

ಮೊದಲ ಎಸೆತದಲ್ಲೇ ಮೊದಲ ವಿಕೆಟ್‌

ಟೂರ್ನಿಯಲ್ಲಿ ಮೊದಲ ಬಾರಿ ಇನಿಂಗ್ಸ್‌ನ ಮೊದಲ ಎಸೆತದಲ್ಲೆ ವೇಗಿ ಅಭಿಮನ್ಯು ಮಿಥುನ್‌ ವಿಕೆಟ್‌ ಉರುಳಿಸಿದರು. ಮಿಥುನ್‌ ಅವರ ಮೊದಲ ಎಸೆತವನ್ನು ಎದುರಿಸಿದ ನಿಶಾಂತ್‌ ಶೇಖಾವತ್‌ ಮೊದಲ ಸ್ಲಿಪ್‌ನಲ್ಲಿದ್ದ ರಾಬಿನ್‌ ಉತ್ತಪ್ಪಗೆ ಕ್ಯಾಚ್‌ ನೀಡಿದರು. ನಂತರ ಶಿಶಿರ್‌ ಭವಾನೆ (6)ಗೆ ಜಹೂರ್‌ ಫರೂಕಿ ಪೆವಿಲಿಯನ್‌ ಹಾದಿ ತೋರಿಸಿದರು.

ಇತ್ತೀಚೆಗಷ್ಟೇ ಆಸ್ಪ್ರೇಲಿಯಾ ಪ್ರವಾಸದಲ್ಲಿ ಭಾರತ 'ಎ' ತಂಡದ ಪರ ಆಡಿದ್ದ ಕರುಣ್‌ ನಾಯರ್‌ ಕೂಡ ಕೇವಲ 6 ರನ್‌ಗೆ ಸೀಮಿತಗೊಂಡರು. 15ಕ್ಕೆ3 ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಯುನೈಟೆಡ್‌ಗೆ ಆಸರೆಯಾಗುವ ಯತ್ನ ನಡೆಸಿದ ವಿಕೆಟ್‌ ಕೀಪರ್‌ ಸಿ.ಎಂ. ಗೌತಮ್‌ 3 ಬೌಂಡರಿ, 1 ಸಿಕ್ಸರ್‌ ಸಿಡಿಸಿದರಾದರೂ ಅವರ ಹೋರಾಟ 18 ರನ್‌ಗೆ ಅಂತ್ಯಗೊಂಡಿತು.

ಹೀಗೆ ಮಂಗಳೂರು ಯುನೈಟೆಡ್‌, ಕೆಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟಾಗುವ ಆತಂಕ ಎದುರಿಸಿತು. ಆದರೆ ನಿಲ್ಲದ ತುಂತುರು ಮಳೆಯಿಂದಾಗಿ ಯುನೈಟೆಡ್‌ ಆ ಅಪಾಯದಿಂದ ಪಾರಾಯಿತು.

ಅಭಿಮನ್ಯು ಮಿಥುನ್‌, ಜಹೂರ್‌ ಫರೂರಿ ಮತ್ತು ಎಂ.ಜಿ ನವೀನ್‌ ತಲಾ ಎರಡು ವಿಕೆಟ್‌ ಪಡೆದು ಮಂಗಳೂರು ಯುನೈಟೆಡ್‌ಗೆ ಮಾರಕವಾಗಿ ಪರಿಣಮಿಸಿದರು.

ಸಂಕ್ಷಿಪ್ತ ಸ್ಕೋರ್‌

ಮಂಗಳೂರು ಯುನೈಟೆಡ್‌: 9 ಓವರ್‌ಗಳಲ್ಲಿ 7 ವಿಕೆಟ್‌ಗೆ 45 (ಸಿ.ಎಂ ಗೌತಮ್‌ 18, ಕರುಣ್‌ ನಾಯರ್‌ 6; ಅಭಿಮನ್ಯು ಮಿಥುನ್‌ 10ಕ್ಕೆ2, ಜಹೂರ್‌ ಫರೂಕಿ 25ಕ್ಕೆ2, ಎಂ.ಜಿ ನವೀನ್‌ 9ಕ್ಕೆ2)

ಇಂದಿನ ಪಂದ್ಯಗಳು

ಬೆಳಗಾವಿ ಪ್ಯಾಂಥರ್ಸ್‌ - ಹುಬ್ಬಳ್ಳಿ ಟೈಗರ್ಸ್‌

1-30ಕ್ಕೆ

ನಮ್ಮ ಶಿವಮೊಗ್ಗ - ಮಂಗಳೂರು ಯುನೈಟೆಡ್‌


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್