Quantcast
Channel: VijayKarnataka
Viewing all articles
Browse latest Browse all 6795

ಅಕ್ಟೋಬರ್‌ನಿಂದ ಕಾಳಧನಿಕರ ವಿರುದ್ಧ ಕಠಿಣ ಕ್ರಮ

$
0
0

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ

ಕಪ್ಪು ಹಣವನ್ನು ಘೋಷಿಸಲು ನಿಗದಿಯಾಗಿರುವ ವಿಶೇಷ ಯೋಜನೆ ಸೆ.30ಕ್ಕೆ ಅಂತ್ಯವಾಗಲಿದ್ದು, ಅಕ್ಟೋಬರ್‌ನಿಂದ ಕಾಳ ಧನಿಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರಕಾರ ಸಜ್ಜಾಗಿದೆ.

ಕಾಳಧನಿಕರಿಗೆ ದಂಡ ಪಾವತಿಯೊಂದಿಗೆ ತಮ್ಮ ಅಕ್ರಮ ಆಸ್ತಿಯನ್ನು ಸಕ್ರಮಗೊಳಿಸಲು ಸರಕಾರ ಅವಕಾಶ ನೀಡಿತ್ತು. ಇದು ಕಡೆಯ ಅವಕಾಶವಾಗಿದ್ದು, ಸೆ.30ರೊಳಗೆ ಕಪ್ಪು ಹಣ ಘೋಷಿಸುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಕಾಳಧನಿಕರಿಗೆ ಎಚ್ಚರಿಕೆ ನೀಡಿದೆ.

ಕಪ್ಪು ಹಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಕುರಿತಾಗಿ ಸಿಬಿಡಿಟಿ ನಾನಾ ಮೂಲಗಳಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದೆ. ನಿಗದಿತ ಅವಧಿಯೊಳಗೆ ಕಪ್ಪು ಹಣ ಘೋಷಿಸದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲು ಈ ಮಾಹಿತಿಯನ್ನು ಸಿಬಿಡಿಟಿ ಬಳಸಿಕೊಳ್ಳಲಿದೆ.

ಕಪ್ಪು ಹಣ ಘೋಷಣೆ ಯೋಜನೆಯು ಜೂನ್‌ 1ರಿಂದ ಆರಂಭವಾಗಿದ್ದು, ಸೆಪ್ಟೆಂಬರ್‌ಗೆ 30ಕ್ಕೆ ಅಂತ್ಯಗೊಳ್ಳುತ್ತಿದೆ. ಈ ಅವಧಿಯಲ್ಲಿ ತಮ್ಮ ಕಾಳಧನ ಪ್ರಕಟಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರಕಾರ ಭರವಸೆ ನೀಡಿದ್ದು, ಶೇ.45ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದೆ.

''ಆಧುನಿಕ ತಂತ್ರಜ್ಞಾನ ಮತ್ತು ತನ್ನದೇ ಮೂಲಗಳಿಂದ ಕಾಳಧನಿಕರ ಆಸ್ತಿ ಮಾಹಿತಿಯನ್ನು ಸರಕಾರ ಕ್ರೋಡೀಕರಿಸಿದೆ. ಕಾಳಧನವನ್ನು ಸ್ವಯಂ ಘೋಷಣೆ ಮಾಡಿ, ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ವಿಶೇಷ ಯೋಜನೆಯ ಮೂಲಕ ಕಡೆಯ ಅವಕಾಶವನ್ನು ಸರಕಾರ ನೀಡಲಿದೆ,'' ಎಂದು ತಮ್ಮ ಬಜೆಟ್‌ ಭಾಷಣದಲ್ಲಿ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದರು.

ವಿದೇಶಿ ಕಪ್ಪು ಹಣ ಯೋಜನೆಯ ಅಡಿಯಲ್ಲಿ 4,164 ಕೋಟಿ ರೂ. ಮೌಲ್ಯದ ಆಸ್ತಿಯನ್ನು 648 ಮಂದಿ ಘೋಷಿಸಿದ್ದರು. ಇದರಿಂದಾಗಿ 2,476 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು.

ಬಚ್ಚಿಡಲು ಸಾಧ್ಯವಿಲ್ಲ...

ಬೇನಾಮಿ ಆಸ್ತಿ ಕಾನೂನನ್ನು ಮೋದಿ ಸರಕಾರ ಜಾರಿಗೊಳಿಸಿದ್ದು, ಅದು ಪರಿಣಾಮಕಾರಿಯಾಗಿ ಸದ್ಯದಲ್ಲೇ ಅನುಷ್ಠಾನಗೊಳ್ಳಲಿದೆ. ಆನಂತರ ಕಾಳಧನಿಕರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಸಂಶಯಾಸ್ಪದ ವ್ಯವಹಾರಗಳಿಗೆ ಸಂಬಂಧಿಸಿದಂತೆ 7ಲಕ್ಷ ಮಂದಿಗೆ ನೋಟಿಸ್‌ ಕಳಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

2018ರಿಂದ ಬಹುತೇಕ ದೇಶಗಳು ಕಾಳಧನದ ಮಾಹಿತಿಯನ್ನು ಹಂಚಿಕೊಳ್ಳಲಿವೆ. ಹೀಗಾಗಿ ವಿದೇಶಗಳಲ್ಲಿ ಕಾಳಧನ ಅಡಗಿಸಿ ಇಡುವುದು ಬಹಳಷ್ಟು ಕಷ್ಟವಾಗಲಿದೆ.

ನಗದು ಹಣಕಾಸು ವ್ಯವಹಾರಗಳನ್ನು ಬದಿಗೆ ತಳ್ಳುತ್ತಿರುವ ಕೇಂದ್ರ ಸರಕಾರವು ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡಿದ್ದು, ಕಾಳಧನದ ಹರಿವು ಮತ್ತು ಬಳಕೆ ತ್ರಾಸದಾಯಕ.

ಅಕ್ರಮ ಆಸ್ತಿ ಘೋಷಿಸುವುದು ಹೇಗೆ?

ಕಾಳಧನ ಘೋಷಿಸುವವರ ಮಾಹಿತಿಯನ್ನು ಸೆಂಟ್ರಲ್‌ ಪ್ರೊಸೆಸಿಂಗ್‌ ಸೆಂಟರ್‌ ನೇರವಾಗಿ ನಿಭಾಯಿಸಲಿದ್ದು, ಇದನ್ನು ತೆರಿಗೆ ಅಧಿಕಾರಿಗಳ ಜತೆ ಹಂಚಿಕೊಳ್ಳುವುದಿಲ್ಲ. ಹೀಗಾಗಿ, ಕಾಳಧನಿಕರು ತಮ್ಮ ಅಕ್ರಮ ಆಸ್ತಿಯನ್ನು ವಿಶೇಷ ಯೋಜನೆಯನ್ವಯ ಘೋಷಿಸಬಹುದು. ಹಣದ ಮೂಲ ಮತ್ತಿತರ ವಿವರಗಳನ್ನು ಕೇಳದೇ, ದಂಡ ಮತ್ತು ತೆರಿಗೆ ವಿಧಿಸಿ ಉಳಿದ ಹಣವನ್ನು ಸರಕಾರವು ಸಕ್ರಮಗೊಳಿಸುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>