Quantcast
Channel: VijayKarnataka
Viewing all articles
Browse latest Browse all 6795

ಸಾಹಸಕ್ಕೆ ಮುಂದಾದ ಪ್ರಜ್ವಲ್‌

$
0
0

ಠಾಕ್ರೆ ಸಿನಿಮಾಗಾಗಿ ಪ್ರಜ್ವಲ್‌ ದೇವರಾಜ್‌ ರಿಸ್ಕ್‌ ತಗೆದುಕೊಳ್ಳಲು ಮುಂದಾಗಿದ್ದಾರೆ. ಬರೋಬ್ಬರಿ ನೂರಾ ಹತ್ತು ಕೇಜಿ ತೂಗಬೇಕಾಗದ ಅನಿವಾರ‍್ಯತೆಗೆ ಅವರು ಸಿಲುಕಿಕೊಂಡಿದ್ದಾರೆ.

ಪಾತ್ರಕ್ಕಾಗಿ ನಾಯಕರು ಸಖತ್‌ ರಿಸ್ಕ್‌ ತಗೆದುಕೊಳ್ಳುತ್ತಿದ್ದಾರೆ. ಅಂಥ ಹೀರೋಗಳ ಸಾಲಿಗೆ ಪ್ರಜ್ವಲ್‌ ದೇವರಾಜ್‌ ಹೊಸದಾಗಿ ಸೇರ್ಪಡೆ ಆಗಲಿದ್ದಾರೆ. ಸದ್ಯ ಇವರು ಠಾಕ್ರೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಆ ಚಿತ್ರದ ಪಾತ್ರಕ್ಕಾಗಿ ನೂರಾ ಹತ್ತು ಕೇಜಿ ತೂಗಬೇಕಾಗಿದೆ. ಹೀಗಾಗಿ ತೂಕ ಹೆಚ್ಚಿಸಿಕೊಳ್ಳಲು ಮೂರ್ನಾಲ್ಕು ತಿಂಗಳಗಳ ಕಾಲ ಅವರು ಕಸರತ್ತು ನಡೆಸಿದ್ದಾರೆ.

ಈ ಪ್ರಮಾಣದಲ್ಲಿ ತೂಕ ಹೆಚ್ಚಿಸಿಕೊಳ್ಳಲು ಕಾರಣವೇನು ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಅವರಿಂದ ಉತ್ತರವಿಲ್ಲ. ಅದೊಂದು ವಿಭಿನ್ನ ಪಾತ್ರ ಆಗಿದ್ದರಿಂದ ತೂಕ ಹೆಚ್ಚಿಸಿಕೊಳ್ಳಲು ಒಪ್ಪಿಕೊಂಡಿದ್ದಾರಂತೆ. ಜತೆಗೆ ದೇಹವನ್ನೂ ಹುರಿಗೊಳಿಸಿಕೊಳ್ಳುತ್ತಿದ್ದಾರೆ.

'ಪ್ರಜ್ವಲ್‌ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಸದ್ಯ ಏನೂ ಹೇಳಲಾರೆ. ಈವರೆಗೂ ಅವರು ಮಾಡದೇ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಅದೊಂದು ಪವರ್‌ಫುಲ್‌ ಕ್ಯಾರೆಕ್ಟರ್‌ ಆಗಿರುವುದರಿಂದ ಕಸರತ್ತು ಮಾಡುವುದು ಅನಿವಾರ‍್ಯ. ಅವರು ಕೂಡ ಅಷ್ಟೇ ಶ್ರದ್ಧೆಯಿಂದ ತಯಾರಿ ನಡೆಸಿದ್ದಾರೆ' ಅಂತಾರೆ ನಿರ್ದೇಶಕರು.

ಈ ಸಿನಿಮಾದಲ್ಲಿ ಇನ್ನೂ ಹಲವು ವಿಶೇಷತೆಗಳಿವೆ. ಇದೇ ಮೊದಲ ಬಾರಿಗೆ ಪ್ರಜ್ವಲ್‌ ಮತ್ತು ರವಿಚಂದ್ರನ್‌ ಒಟ್ಟಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಕೂಡ ಡಿಫರೆಂಟ್‌ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರಂತೆ.

ಟೈಟಲ್‌ನಿಂದಾಗಿ ಸಿನಿಮಾ ಈಗಾಗಲೇ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ಒಂದು ಹಂತದಲ್ಲಿ ವಿವಾದಕ್ಕೂ ಕಾರಣವಾಗಿದೆ. ಆದರೆ, ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ಬಿಟ್ಟುಕೊಡುತ್ತಿಲ್ಲ ಸಿನಿಮಾ ತಂಡ.

'ಠಾಕ್ರೆ ಅಂದಾಕ್ಷಣ ಶಿವಸೈನ್ಯದ ಮುಖಂಡರತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ. ಆದರೆ, ಅವರಿಗೂ ನಮ್ಮ ಸಿನಿಮಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ, ನಾಡು ನುಡಿಯ ಹೋರಾಟಕ್ಕೂ ನಮ್ಮ ಠಾಕ್ರೆಗೂ ಸಂಬಂಧವಿದೆ. ಹೀಗಾಗಿಯೇ ನವೆಂಬರ್‌ 1 ರಂದು ಚಿತ್ರಕ್ಕೆ ಮುಹೂರ್ತ ಮಾಡುತ್ತಿದ್ದೇವೆ. ಉಳಿದಂತೆ ಯಾವ ವಿಷಯವನ್ನೂ ಹೇಳುವಂತಿಲ್ಲ. ಎಲ್ಲವನ್ನೂ ಸಿನಿಮಾದಲ್ಲೇ ನೋಡಿ' ಅನ್ನುವುದು ನಿರ್ದೇಶಕರ ಮಾತು.

ರಾಜಾಹುಲಿ ಮತ್ತು ಜಾನ್‌ ಜಾನಿ ಜನಾರ್ದನ್‌ ಸಿನಿಮಾ ಖ್ಯಾತಿಯ ಗುರು ದೇಶಪಾಂಡೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್‌ ಕೆಲಸ ಮುಗಿದಿದ್ದು, ಮುಂದಿನ ತಿಂಗಳಿಂದ ಶೂಟಿಂಗ್‌ ಶುರುವಾಗಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>