Quantcast
Channel: VijayKarnataka
Viewing all articles
Browse latest Browse all 6795

ನಮ್ಗೇ ನೀರಿಲ್ಲ... ಅವ್ರಿಗೆ ಹೆಂಗೆ ಬಿಡದು?

$
0
0

ರಾಜ್ಯಾದ್ಯಂತ ಕಾವೇರಿ ಕಾವು ಹೆಚ್ಚುತ್ತಿದೆ. ರೈತರು ಆತಂಕದಲ್ಲಿದ್ದಾರೆ. ಮಂಡ್ಯ ಸುತ್ತಮುತ್ತಲ ಹಳ್ಳಿಗಳಲ್ಲಿ ಹರಿಯಬೇಕಾದ ಕಾವೇರಿ ಕೈತಪ್ಪಿಹೋಗುತ್ತಿರುವುದಕ್ಕೆ ಜನ ಕಂಗಾಲಾಗಿದ್ದಾರೆ. 'ತಿಥಿ' ಚಿತ್ರದಲ್ಲಿ ನಟಿಸಿರುವ ಪ್ರಮುಖ ನಟರೆಲ್ಲರೂ ಈ ಪ್ರಾಂತ್ಯದವರೇ. ಅಷ್ಟೇ ಅಲ್ಲ ಮೂಲತಃ ರೈತರು. ಅವರ ಒಡಲಾಳದ ಮಾತುಗಳು ಇಲ್ಲಿವೆ.

- ಪದ್ಮಾ ಶಿವಮೊಗ್ಗ

ಕೆಲಸದಲ್ಲಿರುವವರು ಪಡೆಯುವಂತೆ ರೈತರಿಗೆ ತಿಂಗಳ ಸಂಬಳ ಬರೋಲ್ಲ. ವರ್ಷಕ್ಕೆ ಒಮ್ಮೆ ಬೆಳೆ ಬಂದರೆ ಮಾತ್ರ ವರಮಾನ. ಮಂಡ್ಯ, ಪಾಂಡವಪುರ ಮತ್ತಿತರ ಹಳ್ಳಿಗಳಿಗೆ ಕಳೆದ ವರ್ಷ ಕೂಡ ವ್ಯವಸಾಯಕ್ಕೆ ನೀರು ಕೊಟ್ಟಿಲ್ಲ. ಈಗಾಗಲೇ ಬತ್ತ, ಕಬ್ಬು ಬಿತ್ತನೆ ಮಾಡಿರುವ ರೈತರು ನೀರಿಲ್ಲ ಅಂದ್ರೆ ಏನು ಮಾಡಬೇಕು? ಸಾಲ ಮಾಡಿ ಬಿತ್ತನೆ ಮಾಡಿರುತ್ತಾರೆ. ರೈತರು ರೊಚ್ಚಿಗೇಳದೆ ಇನ್ನೇನು ಮಾಡುತ್ತಾರೆ? ಇವರಿಗಿಂತ ಮೊದಲು ಅಧಿಧಿಕಾರಿಗಳು ಅನ್ಯಾಯವಾಗದಂತೆ ಹೋರಾಟ ಮಾಡಬೇಕಿತ್ತು. ಆದರೆ, ಅದಾಗಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳದೆ ಇನ್ನೇನು ಮಾಡುತ್ತಾರೆ? ಸೂಕ್ತ ಪರಿಹಾರ ಕಂಡುಕೊಳ್ಳಲೇಬೇಕು.

- ಈರೇಗೌಡ, ತಿಥಿ ಕತೆಗಾರ

ರೈತರ ಹಿತ ಕಾಯಬೇಕು

ಕಾವೇರಿ ಕಟ್ಟೆಯಲ್ಲಿ ಈಗಾಗಲೇ ನೀರು 90 ಅಡಿಗೆ ಬಂದಿದೆ, ಮೈಸೂರು ಮಂಡ್ಯ, ಬೆಂಗಳೂರಿಗೆ ಕುಡಿಯೋದಕ್ಕೆ ನೀರು ಸಿಗುವುದು ಕಷ್ಟದಲ್ಲಿರುವಾಗ ಇವರು ಬೆಳೆಗೆ ನೀರು ಎಲ್ಲಿಂದ ಕೊಡುತ್ತಾರೆ? ನೀರಾವರಿ ಸಚಿವರು ಹೇಳವ್ರೆ ಕೋರ್ಟ್‌ ಆದೇಶ ಬದಲಾಯಿಸಲು ಆಗುವುದಿಲ್ಲ ಅಂತಾ... ಇವರ ಬೇಜವಾಬ್ದಾರಿತನದಿಂದ ಈಗ ನಮಗೆ ನಷ್ಟವಾಗಿದೆ. ತಮಿಳುನಾಡಿನವರು ಕೋರ್ಟ್‌ಗೆ ಹೋಗಿ ಆದೇಶ ಬರುವವವರೆಗೂ ಇವರೇನು ಮಾಡುತ್ತಿದ್ದರು? ಇವರು ಕೋರ್ಟ್‌ನಲ್ಲಿ ಕಾವೇರಿ ನದಿಯಲ್ಲಿ ಇಷ್ಟು ನೀರಿದೆ ಎಂದು ಒಂದು ಅರ್ಜಿ ಸಲ್ಲಿಸಬೇಕಿತ್ತು. ಅಯಮ್ಮ ಎಲ್ಲ ಆದೇಶ ತಂದಾದ ಮೇಲೆ ನೀರಿಗೆ ಅಡ್ಡಗಟ್ಟುತ್ತೇವೆ ಎಂದರೆ ಆಗುವ ಕೆಲಸವೇ? ಸಿಎಂ ಸಿದ್ದರಾಮಯ್ಯ ಅವರು ಧೈರ್ಯ ಮಾಡಿ ಮುಂದುವರಿದಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಈಗ ನೀರು ಬಿಟ್ಟರು ಅದು ಕೊನೆ ತಲುಪಬೇಕಾದರೆ ಒಂದು ವಾರ ಬೇಕು ಅಷ್ಟೊಂದು ನೀರು ಈಗ ಇಲ್ಲ. ನೀರು ಎತ್ತಿದ ಮೇಲೆ ಅದು ಕೊನೆಯವರೆಗೂ ತಲುಪುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಕುಡಿಯಲು ನೀರು ಅಭಾವವಿದೆ, ಈ ಬಾರಿ ಬೆಳೆ ಮಾಡಬೇಡಿ ಎಂದು ಸರಕಾರ ಹೇಳಿದ್ದರೆ ನಾವ್ಯಾರು ಬಿತ್ತನೆ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯನವರು ರೈತರ ಹಿತ ಕಾಯಬೇಕು.

- ತಮ್ಮಣ್ಣ, ನಟ

ಯಾವುದೇ ಕಾರಣಕ್ಕೂ ನೀರು ಬಿಡಕ್ಕಿಲ್ಲಾ

ಕಾವೇರಿ ನೀರು ನಮ್ದು. ನಮಗೆ ಕುಡಿಯಕ್ಕೂ ನೀರಿಲ್ಲ. ಅವ್ರಿಗೆ ಕೊಡೋದು ನ್ಯಾಯ ಅಲ್ಲ. ಕೆರೆ ಕಟ್ಟೇಲಿ ನೀರಿಲ್ಲ. ನಮ್ಮ ಭಾಗದ ರೈತರೆಲ್ಲಾ ಆತ್ಮಹತ್ಯೆ ಮಾಡಿಕೊಳ್ತಿದಾರೆ. ಸಾಲ ಸೋಲ ಮಾಡಿ ಬೆಳೆ ಬೆಳೀಬೇಕು. ಹಾಗಾಗಿ ನೀರು ಕೋಡೋದಕ್ಕೆ ಆಗದೇ ಇಲ್ಲ. ನಮಗೆ ಸಮಸ್ಯೆ ಇರುವಾಗ ಬೇರೆಯವರಿಗೆ ಒಳ್ಳೆದು ಮಾಡಕ್ಕೆ ಹೋಗಬಾರದು. ಇದಕ್ಕಾಗಿ ಸರಕಾರ ಕೂಡಾ ಹೋರಾಟ ಮಾಡ್ಬೇಕು. ನಾವು ಶಕ್ತಿ ಇರುವಷ್ಟು ಹೋರಾಟ ಮಾಡ್ಬೇಕು. ನಾನು ಎಲ್ಲಿಗೆ ಬೇಕಾದರೂ ಬರ್ತೇನೆ. ಸಿದ್ದರಾಮಯ್ಯನವರೇ, ಬಂದು ನೋಡಿ ನಮ್ಮ ಕಷ್ಟ ಎಷ್ಟಿದೆ ಎಂದು. ಕಾವೇರಿ ನಮ್ಮೋಳು ನೀರು ಯಾವುದೇ ಕಾರಣಕ್ಕೂ ಬಿಡಕ್ಕಿಲ್ಲಾ.

- ಗಡ್ಡಪ್ಪ, ನಟ

ಹೋರಾಟಕ್ಕೆ ಎಲ್ರೂ ಜತೆಗೂಡಿ

ಹೋರಾಟ ಮಾಡನ ಎಲ್ರೂ ಬನ್ನಿ. ಮಂಡ್ಯ ರೈತರೆಲ್ಲಾ ಚೆನ್ನಾಗಿರಬೇಕು. ನಮ್ಮ ಮಂಡ್ಯ ರೈತರು ಚೆನ್ನಾಗಿದ್ದರೆ ಬೆಂಗಳೂರು ಜನ ಚೆನ್ನಾಗಿರದು. ಅನ್ನದಾತರಿಗೆ ನೀರಿಲ್ಲ ಅಂದರೆ ಹೆಂಗೆ? ಸಿದ್ದರಾಮಯ್ಯನೋರು ಅದನ್ನು ಮಾಡಿಸ್ತೀವಿ, ಇದನ್ನು ಮಾಡಿಸ್ತೀವಿ ಅನ್ತಾರೆ... ಆದ್ರೆ ರೈತರಿಗೆ ಇಲ್ಲಿ ನೀರೆ ಇಲ್ಲ. ಮೊದಲು ಇದನ್ನು ಸರಿ ಮಾಡ್ಲಿ. ಆಮೇಲೆ ಉಳಿದಿರೊದ್ರ ಬಗ್ಗೆ ಮಾತಾಡ್ಲಿ. ಓಟು ಕೇಳಕ್ಕೆ ಮಾತ್ರ ಮುಂದಾಗಿ ಬರ್ತಾರೆ. ರೈತರ ಕಷ್ಟಕ್ಕೆ ಮಾತ್ರ ಬರೋದಿಲ್ಲ. ಇವಾಗ ನೀರೇನಾದ್ರು ಬಿಟ್ರೆ ಮಂಡ್ಯ ಭಾಗದಲ್ಲಿ ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ನಮ್ಮ ಹೋರಾಟಕ್ಕೆ ಬೆಂಗಳೂರಿನವರೂ ಜತೆಗೂಡಬೇಕು.

-ಅಭಿ, ನಟ

ನೀರು ಉಳಿಸ್ಕಬೇಕು....

ಇಲ್ಲಿ ನಮಗೆ ನೀರಿಲ್ಲ. ನಾವು ತಮಿಳುನಾಡಿಗೆ ನೀರು ಬಿಡಕ್ಕೆ ಬಿಡಕ್ಕಿಲ್ಲಾ. ಮೊದಲು ನಾವು ಬದುಕಿದ್ರೆ ಬೇರೆಯವರಿಗೆ ಬದುಕಕ್ಕೆ ಸಹಾಯ ಮಾಡ್ಬೊದು. ನಮಗೆ ಕುಡಿಯಕ್ಕೆ ಗುಟುಕು ನೀರಿಲ್ಲ ಅಂತಾಂದ್ರೆ ಅವರಿಗೆಲ್ಲಿಂದ ಬಿಡದು ಹೇಳಿ. ಅದಕ್ಕೆ ನಾವೆಲ್ಲಾ ಹೋರಾಟ ಮಾಡಬೇಕು. ನೀರನ್ನು ಉಳಿಸ್ಕಬೇಕು.

- ಸೆಂಚುರಿ ಗೌಡ, ನಟ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>