Quantcast
Channel: VijayKarnataka
Viewing all articles
Browse latest Browse all 6795

ಸ್ಲೋಟಿಸಲಿರುವ ಗೋಲಿ ಸೋಡಾ

$
0
0

ರಘು ಜಯ ನಿರ್ದೇಶನದ 'ಗೋಲಿ ಸೋಡಾ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನಾಥ ಮಕ್ಕಳಲ್ಲಿರುವ ಫೋರ್ಸ್‌ ಸ್ಫೋಟವಾದರೆ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಕಾಲಿವುಡ್‌ನ ಜನಪ್ರಿಯ ನಟ ಮಧುಸೂದನ್‌ ಮತ್ತು ಟಾಲಿವುಡ್‌ನ ವಿಕ್ರಂ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪದ್ಮಾ ಶಿವಮೊಗ್ಗ

------------

ಇದು ವಿಭಿನ್ನ ಕತೆಯ ಚಿತ್ರ. ಅನಾಥ ಮಕ್ಕಳು ದಿಕ್ಕು ದೆಸೆ ಇಲ್ಲದೆ ಬದುಕು ನಡೆಸುತ್ತಿರುವಾಗ ರೌಡಿಗಳ ಕೈಗೆ ಸಿಕ್ಕಿಕೊಳ್ಳುತ್ತಾರೆ. ತಮ್ಮ ಲೈಫ್‌ ಹಾಳು ಮಾಡಲು ಬಂದ ರೌಡಿಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಚಿತ್ರ. ಚಿತ್ರದಲ್ಲಿ ಸೆಂಟಿಮೆಂಟ್‌, ಲವ್‌, ಆ್ಯಕ್ಷನ್‌ ಎಲ್ಲವೂ ಇದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಮೂರು ನೆಗೆಟಿವ್‌ ಪಾತ್ರಗಳಲ್ಲಿ ಜನಪ್ರಿಯ ನಟರು ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಟಾಲಿವುಡ್‌ನ ನಟ ವಿಕ್ರಂ, ಪ್ರಿಯಾಂಕಾ ರಾವ್‌, ನಟಿ ತಾರಾ ನಟಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿಕ್ರಂ ಈಗಾಗಲೇ 'ರುದ್ರಮ ದೇವಿ', 'ರೇಸ ಗುರ್ರಂ' ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕೊಲ್ಲ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿ ಪ್ರವೀಣ್‌ ಕೊಲ್ಲ ಮತ್ತು ಹೇಮಂತ್‌ ಕುಮಾರ್‌ ರಾಚೇನಹಳ್ಳಿ ನಿರ್ಮಾಣ ಮಾಡಿದ್ದಾರೆ.

ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿರುವ ವಿಕ್ರಂ ಎಕ್ಸೈಟ್‌ ಆಗಿದ್ದಾರೆ. 'ಬಹಳ ಖುಷಿಯಾಯ್ತು. ಕನ್ನಡ ನನಗೆ ಸ್ವಲ್ಪವೂ ಬರುತ್ತಿರಲಿಲ್ಲ. ಆದರೂ, ಚಿತ್ರದ ಕತೆ ಹಿಡಿಸಿತು. ಚಿತ್ರದಲ್ಲಿ ಫ್ರೆಶ್‌ ಸ್ಟೋರಿ ಇದೆ. ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ. ಬೇರೆಯದೇ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಮುಂದೆಯೂ ಅವಕಾಶ ಸಿಕ್ಕರೆ ಕನ್ನಡ ಚಿತ್ರದಲ್ಲಿ ನಟಿಸುವೆ' ಎನ್ನುತ್ತಾರೆ ವಿಕ್ರಂ.

'ವಿಕ್ರಂ ಚಿಕ್ಕ ವಯಸ್ಸಿನವರಾದರೂ ಫಿಸಿಕಲಿ ಸ್ಟ್ರಾಂಗ್‌. ಈ ಪಾತ್ರಕ್ಕೆ ಪಕ್ಕಾ ಹೊಂದುತ್ತಾರೆ. ಚಿತ್ರದಲ್ಲಿ ಯಾವುದೇ ಸ್ಟಾರ್‌ಗಳಿಲ್ಲದಿದ್ದೂ, ಸೆಂಟಿಮೆಂಟ್‌ ಮತ್ತು ಕಾಮಿಡಿಗಾಗಿ ಚಿತ್ರ ಎಲ್ಲರಿಗೂ ಹಿಡಿಸುತ್ತೆ. ತಾರಾ ಎಕ್ಸ್‌ಟ್ರಾರ್ಡಿನರಿಯಾಗಿ ನಟಿಸಿದ್ದಾರೆ' ಎನ್ನುತ್ತಾರೆ ನಿರ್ದೇಶಕ ರಘುಜಯ. ಕ್ಲೈಮಾಕ್ಸ್‌ ಹೈಲೈಟ್‌. ಶೋಭ್‌ರಾಜ್‌ ಮತ್ತು ಡ್ಯಾನಿ ಕುಟ್ಟಪ್ಪ ಕೂಡಾ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ರಘು ನಟಿಸಿದ್ದು, ಅವರ ಮೊದಲ ಕನ್ನಡ ಚಿತ್ರ ಇದಾಗಿದೆ.

ಚಿತ್ರದಲ್ಲಿ ಹದಿಹರೆಯದ ಲವ್‌ ಇದೆ. ಹೃದಯ ಕಲಕುವ ಕತೆ ಇದೆ. ತಮಿಳಿನಲ್ಲಿ ಸೂಪರ್‌ ಹಿಟ್‌ ಆದ ಚಿತ್ರ 'ಗೋಲಿಸೋಡಾ'. ಕನ್ನಡಕ್ಕೆ ಯಥಾವತ್‌ ರಿಮೇಕ್‌ ಮಾಡಲಾಗಿದೆ. 'ಏನೂ ಬದಲಾಯಿಸುವುದು ಸಾಧ್ಯವಿರಲಿಲ್ಲ. ಯಾಕೆಂದರೆ, ಕಾರ್ಡ್ಸ್ನಲ್ಲಿ ಕಟ್ಟಿದಂತೆ ಕಟ್ಟಿದ್ದರು. ಒಂದು ಕಾರ್ಡ್‌ ತೆಗೆದರೂ ಇಡೀ ಸಿನಿಮಾ ಹಾಳಾಗುತ್ತಿತ್ತು. ಅಷ್ಟು ಚೆನ್ನಾಗಿ ತಮಿಳಿನಲ್ಲಿ ಮಾಡಿದ್ದರು. ಕತೆಯ ಸಂದೇಶ ಜನರಿಗೆ ತಲುಪಿಸುವುದಷ್ಟೇ ನಮ್ಮ ಉದ್ದೇಶ' ಎಂದಿದ್ದಾರೆ ರಘು ಜಯ.

ದಿವ್ಯಾ, ಹೇಮಂತ್‌, ಚಂದನ್‌, ಮೂಟೆ ಮಂಜ ಮತ್ತಿತರರು ನಟಿಸಿದ್ದಾರೆ. ರಾಜೇಶ್‌ ರಾಮನಾಥ್‌ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಾಧುಕೋಕಿಲಾ ಹಿನ್ನೆಲೆ ಸಂಗೀತವಿದೆ. ಟಾಲಿವುಡ್‌ನ ಧಾಮು ಛಾಯಾಗ್ರಹಣ ಮಾಡಿದ್ದಾರೆ.

----

ಚಿಕ್ಕ ಮಕ್ಕಳಿಗೆ ಭಯ ಇರುತ್ತೆ. ದೊಡ್ಡವರಿಗೆ ಜವಾಬ್ದಾರಿ ಇರುತ್ತೆ. ಆದರೆ, ಹದಿಹರೆಯದವರಿಗೆ ಅದ್ಯಾವ್ದೂ ಇರೋಲ್ಲ. ಫೋರ್ಸ್‌ ಇರುತ್ತೆ. ಅಷ್ಟೆ. ಅದು ಸರಿಯಾದ ರೀತಿಯಲ್ಲಿ ಬಳಕೆಯಾಗದಿದ್ದರೆ ಅನಾಹುತ. ಐಡೆಂಟಿಟಿಗಾಗಿ ಹೊಡೆದಾಡುವ ಹುಡುಗರ ಕತೆ ಇಲ್ಲಿದೆ.

-ರಘು ಜಯ, ನಿರ್ದೇಶಕ



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>