Quantcast
Channel: VijayKarnataka
Viewing all articles
Browse latest Browse all 6795

ಬರ್ತ್‌ಡೇಗೆ ನಾಗಾರ್ಜುನ ಸ್ಟ್ಯಾಂಪ್‌

$
0
0

ತೆಲುಗು ನಟ ನಾಗಾರ್ಜುನ ತಮ್ಮ 56ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಅವರ ಇಬ್ಬರು ತಾರಾಪುತ್ರರಾದ ನಾಗ ಚೈತನ್ಯ ಮತ್ತು ಅಖಿಲ್‌, ತಂದೆಯ ಹೆಸರಿನಲ್ಲಿ ಸ್ಟ್ಯಾಂಪ್‌ ಮುದ್ರಿಸಿ ಅಚ್ಚರಿ ಮೂಡಿಸಿದ್ದಾರೆ.

ನಿನ್ನೆ ಮಧ್ಯಾಹ್ನ 12ಕ್ಕೆ ನಾಗಾರ್ಜುನ ಅವರ ಚಿತ್ರವಿರುವ ಹತ್ತು ಸಾವಿರ ಸ್ಟ್ಯಾಂಪ್‌ಗಳು ಬಿಡುಗಡೆಯಾಗಿವೆ. ತಮ್ಮ ನೆಚ್ಚಿನ ಹೀರೋನ ಸ್ಟ್ಯಾಂಪ್‌ ಜತೆ ಸೆಲ್ಫಿ ತೆಗೆದುಕೊಂಡ ಅಭಿಮಾನಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅಂದಹಾಗೆ ನಾಗಾರ್ಜುನ ತಮ್ಮ ಸಹನಿರ್ಮಾಣದಲ್ಲಿ ತಯಾರಾಗುತ್ತಿರುವ 'ನಿರ್ಮಲಾ ಕಾನ್ವೆಂಟ್‌'ಗೆ ಹಾಡೊಂದನ್ನು ಹಾಡಿದ್ದಾರೆ. ಮೈಕ್‌ ಹಿಡಿದು ಹಾಡುವ ಸ್ಟೈಲ್‌ನಲ್ಲಿಯ ಅವರ ಚಿತ್ರವನ್ನೇ ಸ್ಟ್ಯಾಂಪ್‌ ಮೇಲೆ ಮುದ್ರಿಸಲಾಗಿದೆ. ಗಾಯಕ ನಾಗಾರ್ಜುನ ಮತ್ತು ಸುಂದರ ತಾಜ್‌ಮಹಲಿರುವ ಸ್ಟ್ಯಾಂಪ್‌ ಆಕರ್ಷಕವಾಗಿದೆ. 'ಇದು ನನ್ನ ಜೀವನದ ಬಹುದೊಡ್ಡ ಅಚ್ಚರಿ. ನನ್ನನ್ನು ಗಾಯಕನನ್ನಾಗಿ ಒಪ್ಪಿಕೊಂಡ ಅಭಿಮಾನಿಗಳು ಮತ್ತು ಉದ್ಯಮದವರಿಗೆ ಆಭಾರಿಯಾಗಿದ್ದೇನೆ' ಎಂದಿದ್ದಾರೆ ನಾಗ್‌. ಮತ್ತೊಂದೆಡೆ ಅವರ ಪುತ್ರರಾದ ನಾಗಚೈತನ್ಯ ಮತ್ತು ಅಖಿಲ್‌, 'ವೈವಿಧ್ಯಮಯ ಪಾತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಗಾರ್ಜುನ ಅವರಿಗೆ ಸಲ್ಲಿಸಿರುವ ಚಿಕ್ಕ ಗೌರವವಿದು. ತೆಲುಗು ಚಿತ್ರರಂಗದ ಶ್ರೀಮಂತ ಚಿತ್ರಸಾಹಿತ್ಯ ಮತ್ತು ಸಂಗೀತದ ಕುರುಹು ಆಗಿಯೂ ಇದನ್ನು ಹೊರತರಲಾಗಿದೆ' ಎಂದಿದ್ದಾರೆ.

ಬರ್ತ್‌ಡೇ ಆಚರಿಸಿಕೊಂಡ ಸುರದ್ರೂಪಿ ಹೀರೋ ನಾಗಾರ್ಜುನ ಅವರದ್ದು ತೆಲುಗು ಚಿತ್ರರಂಗದೊಂದಿಗೆ ಮೂರು ದಶಕಗಳ ನಂಟು. ಮೇರು ನಟ ಎ.ನಾಗೇಶ್ವರರಾವ್‌ ಅವರ ಪುತ್ರ ಎನ್ನುವ ವಿಸಿಟಿಂಗ್‌ ಕಾರ್ಡ್‌ನ ಹೊರತಾಗಿ ಅವರು ತಮ್ಮದೇ ಆದ ವರ್ಚಸ್ಸು ಗಳಿಸಿದವರು. 'ಮಾಸ್‌', 'ಡಾನ್‌', 'ರಗಡ'ನಂತಹ ಆ್ಯಕ್ಷ ನ್‌-ಮಸಾಲಾ ಸಿನಿಮಾಗಳಲ್ಲಿ ನಟಿಸಿರುವ ಅವರು 'ಶಿರಡಿ ಸಾಯಿ', 'ಶ್ರೀ ರಾಮದಾಸು'ನಂತರ ಭಕ್ತಿ ಪ್ರಧಾನ ಸಿನಿಮಾಗಳಲ್ಲಿಯೂ ಅಭಿಮಾನಿಗಳನ್ನು ಸೆಳೆದಿದ್ದಾರೆ. ವಯಸ್ಸಿಗೆ ಹೊಂದುವಂತಹ ಪಾತ್ರಗಳಲ್ಲಿ ನಟಿಸುತ್ತಲೇ ತಮ್ಮ ಇಮೇಜು ಕಾಪಾಡಿಕೊಂಡು ಎಲ್ಲ ವರ್ಗದ ಪ್ರೇಕ್ಷ ಕರಿಗೂ ಇಷ್ಟವಾಗಿದ್ದಾರೆ ಎನ್ನುವ ಹೆಗ್ಗಳಿಕೆ ಅವರದು. ಸದ್ಯ 'ಓಂ ನಮೋ ವೆಂಕಟೇಶಾಯ' ಭಕ್ತಿ ಪ್ರಧಾನ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಅವರು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿದ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>