ಟೈಮ್ಸ್ ಕನ್ನಡ ಸಿನಿಮಾ ತಂತ್ರಜ್ಞರ ಪ್ರಶಸ್ತಿ (Times KAFTA) ಪ್ರದಾನ ಸಮಾರಂಭ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು. ತೆರೆಯ ಹಿಂದೆ ದುಡಿದ ತಂತ್ರಜ್ಞರನ್ನು ಗುರುತಿಸಿ ಪ್ರೋತ್ಸಾಹಿಸುವ ಟೈಮ್ಸ್ ಗ್ರೂಪ್ನ ಈ ಮೊದಲ ಹೆಜ್ಜೆಗೆ ಕನ್ನಡ ಚಿತ್ರರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಹದಿಮೂರು ವಿವಿಧ ವಿಭಾಗಗಳು ಮತ್ತು ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಅರ್ಹರಿಗೆ ಪ್ರಶಸ್ತಿ ವಿತರಿಸಲಾಯಿತು. ನಮ್ ಟೀಮ್ (ಪೋಸ್ಟರ್ ವಿನ್ಯಾಸ), ಕೆ.ಎಂ. ಪ್ರಕಾಶ್ ಮತ್ತು ನವೀನ್ ರಾಜ್ (ಸಂಕಲನ), ರಾಜು ಮತ್ತು ನಾಗರಾಜ್ (ಮೇಕಪ್), ಪೀಟರ್ ಹೇನ್ (ಸಾಹಸ ನಿರ್ದೇಶನ), ಸಚಿನಾ ಹೆಗ್ಗಾರ್ (ವಸ್ತ್ರವಿನ್ಯಾಸ), ಇಮ್ರಾನ್ ಸರ್ದಾರಿಯಾ ಮತ್ತು ಹರ್ಷ (ನೃತ್ಯ ನಿರ್ದೇಶನ), ನರೇಶ್ ಕುಮಾರ್ ಮತ್ತು ಮಂಜು ಮಾಂಡವ್ಯ (ಸಂಭಾಷಣೆ), ಹೊಸ್ಮನೆ ಮೂರ್ತಿ ಮತ್ತು ನಾಗರಾಜ್ ಹೊಸೂರು (ಕಲಾ ನಿರ್ದೇಶನ), ಅಜನೀಶ್ ಲೋಕನಾಥ್ (ಹಿನ್ನೆಲೆ ಸಂಗೀತ), ಭುವನ್ ಗೌಡ (ಛಾಯಾಗ್ರಹಣ), ಬಿ.ಎಸ್.ಲಿಂಗದೇವರು (ಚಿತ್ರಕಥೆ - ಅಡಾಪ್ಟೆಡ್), ಸುರೇಂದ್ರನಾಥ್, ರಾಜೇಶ್ ನಟರಂಗ ಮತ್ತು ಸೂರಿ (ಚಿತ್ರಕಥೆ - ಮೂಲ) ಮತ್ತು ಬಿ.ಎಂ.ಗಿರಿರಾಜ್ ಮತ್ತು ಸುರೇಂದ್ರನಾಥ್ (ಕತೆ) ಪ್ರಶಸ್ತಿ ಮನ್ನಣೆಗೆ ಪಾತ್ರರಾದರು. ಕನ್ನಡ ಚಿತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ 'ರಂಗಿತರಂಗ' ತಂಡಕ್ಕೆ ವಿಶೇಷ ಪ್ರಶಸ್ತಿ ಸಂದಾಯವಾಯ್ತು. ಸಂಭ್ರಮ-ಸಡಗರ, ಅದ್ಧೂರಿತನ ಮೇಳೈಸಿದ್ದ ಸಮಾರಂಭದಲ್ಲಿ ಟೈಮ್ಸ್ಗೆ ಕಿಚ್ಚ ಕ್ರಿಯೇಷನ್ಸ್ ಮತ್ತು ಡಿಎಸ್ ಮ್ಯಾಕ್ಸ್ ಪ್ರಸೆಂಟಿಂಗ್ ಸ್ಪಾನ್ಸರ್ಸ್ ಆಗಿದ್ದು, ಹೊಂಬಾಳೆ ಫಿಲ್ಮ್ಸ್ನವರು ಸಹ ಆಯೋಜಕರಾಗಿದ್ದರು. ಹೆಚ್ಚಿನ ವಿವರಕ್ಕೆ ಶುಕ್ರವಾರದ ಸಿನಿ ಲವಲವಿಕೆ ನೋಡಿ.
↧
'ಅವಳಿಗೆ' ಮೂರು Times KAFTA ಪ್ರಶಸ್ತಿ
↧