Quantcast
Channel: VijayKarnataka
Viewing all articles
Browse latest Browse all 6795

ಬ್ಲ್ಯಾಕ್‌ ಬೆಲ್ಟ್‌ ಸಿಪಾಯಿ

$
0
0

ಪದ್ಮಾ ಶಿವಮೊಗ್ಗ

ಇತ್ತೀಚೆಗೆ ಹೊಸಬರು ಹೆಚ್ಚಾಗಿ ಚಿತ್ರ ನಿರ್ಮಾಣದತ್ತ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿಂದೆ ಇದೇ ಹಾದಿಯಲ್ಲಿ ತಯಾರಾದ ಚಿತ್ರ ಲೂಸಿಯಾ. ಈ ಚಿತ್ರಕ್ಕೆ ಹಣ ಹೂಡಿದ್ದವರಲ್ಲಿ ಸಿದ್ಧಾರ್ಥ್‌ ಮಹೇಶ್‌ ಕೂಡ ಒಬ್ಬರು. ಈಗೀವರು ಸಿಪಾಯಿ ಸಿನಿಮಾದ ಮೂಲಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ , ಲೂಸಿಯಾ ಚಿತ್ರದಲ್ಲಿ ಕೆಲಸ ಮಾಡಿದ್ದ ಅನೇಕ ತಂತ್ರಜ್ಞರು ಮತ್ತು ನಟರು ಈ ಚಿತ್ರದಲ್ಲೂ ಮುಂದುವರೆದಿದ್ದಾರೆ. ಲೂಸಿಯಾಗೆ ಸಹಾಯಕರಾಗಿ ಕೆಲಸ ಮಾಡಿದ್ದ ರಜತ್‌ ಮಹೀ, ಸಿಪಾಯಿ ಮೂಲಕ ಮೊದಲ ಬಾರಿ ಆ್ಯಕ್ಷನ್‌ ಕಟ್‌ ಹೇಳಿದ್ದರೆ, ನಾಯಕಿ ಶ್ರುತಿ ಹರಿಹರನ್‌ ಈ ಚಿತ್ರಕ್ಕೂ ನಾಯಕಿ.

ಲವ್‌, ಆ್ಯಕ್ಷನ್‌ ಚಿತ್ರ ಇದಾಗಿದ್ದು, ಸಮಾಜದ ಒಳಿತಿಗಾಗಿ ಹೋರಾಡುವ ಪತ್ರಕರ್ತನ ಕತೆ ಇಲ್ಲಿದೆ. ಸಿದ್ಧಾರ್ಥ ಪತ್ರಕರ್ತನಾಗಿ ಅಭಿನಯಿಸಿದ್ದಾರೆ. ಅಲ್ಲದೇ, ಕರಾಟೆ ಕರಾಮತ್ತೂ ತೋರಿದ್ದಾರೆ. ಪತ್ರಕರ್ತನ ಪಾತ್ರಕ್ಕೂ ಕರಾಟೆಗೂ ಏನು ಸಂಬಂಧ ಅಂತ ಅನ್ನಿಸಬಹುದು. ಸಿದ್ಧಾರ್ಥ ಮೂಲತಃ ಕರಾಟೆ ಪಟು. ಬ್ಲ್ಯಾಕ್‌ ಬೆಲ್ಟ್‌ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ವಿದೇಶಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚು ಪದಕವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಅವರ ಕರಾಟೆ ಸ್ಟೈಲ್‌ ಅನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇದಕ್ಕಾಗಿ ಚಿತ್ರದ ಕತೆಯಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ ನಿರ್ದೇಶಕರು.

ಈ ಚಿತ್ರಕ್ಕೆ ಸಿದ್ಧಾರ್ಥ ಬಂಡವಾಳ ಹೂಡಿದ್ದೇ ಒಂದು ಇಂಟ್ರಸ್ಟಿಂಗ್‌ ಸಂಗತಿ. ಪ್ರೇಮಕತೆಯನ್ನು ಬರೆದುಕೊಂಡಿದ್ದ ನಿರ್ದೇಶಕರು ನಿರ್ಮಾಪಕರಿಗಾಗಿ ಹುಡುಕುತ್ತಿದ್ದರಂತೆ. ಆಗ ನೆನಪಾಗಿದ್ದೆ ಸಿದ್ಧಾರ್ಥ. ಕತೆ ಕೇಳಿ ಥ್ರಿಲ್‌ ಆಗಿ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದರಂತೆ. ಹೀಗೆ ಸಿನಿಮಾ ತಯಾರಿಕೆಯ ಕೆಲಸ ಶುರುವಾಗಿದೆ.

ನಾಯಕ ಸಿದ್ಧಾರ್ಥ ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಸಿನಿಮಾ ತಂತ್ರಗಾರಿಕೆಯನ್ನೂ ಕಲಿತಿದ್ದಾರೆ. ಆದರೆ, ನಟರಾಗುವುದು ಅವರ ಕನಸು. ಅದರ ಪ್ರತಿಫಲವೇ ಸಿಪಾಯಿ ಸಿನಿಮಾ. ಇದಕ್ಕಾಗಿ ರಂಗ ತರಬೇತಿಯನ್ನೂ ಪಡೆದಿದ್ದಾರೆ.

ಲೂಸಿಯಾ ಚಿತ್ರದ ಸಮಯದಲ್ಲೇ ತಮ್ಮ ಮುಂದಿನ ಸಿನಿಮಾದಲ್ಲಿ ಪಾತ್ರ ಕೊಡುವುದಾಗಿ ಶ್ರುತಿ ಹರಿಹರನ್‌ಗೆ ಹೇಳಿದ್ದರಂತೆ ನಿರ್ದೇಶಕ ರಜತ್‌. ಚೊಚ್ಚಲ ನಿರ್ದೇಶನದ ಸಿಪಾಯಿ ಚಿತ್ರದಲ್ಲೇ ಕೊಟ್ಟ ಮಾತಿನ್ನು ನಿರ್ದೇಶಕರು ಉಳಿಸಿಕೊಂಡಿದ್ದಾರೆ.

'ಸಿದ್ಧಾರ್ಥ ಅಕ್ರಮವೊಂದನ್ನು ಬಯಲಿಗೆಳೆಯುವ ಪತ್ರಕರ್ತನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬೋಧನೆ ಮಾಡುವುದು ನಮ್ಮ ಉದ್ದೇಶವಲ್ಲ. ಪತ್ರಕರ್ತ ಎದುರಿಸುವ ಸವಾಲುಗಳನ್ನೂ ಚಿತ್ರದಲ್ಲಿ ತೋರಿಸಿದ್ದೇವೆ,' ಎಂದು ನಿರ್ದೇಶಕ ರಜತ್‌ಮಯೀ


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)



<script src="https://jsc.adskeeper.com/r/s/rssing.com.1596347.js" async> </script>