Quantcast
Channel: VijayKarnataka
Viewing all articles
Browse latest Browse all 6795

ಕಡೆಯ ಎಸೆತದಲ್ಲಿ ಎಡವಿದ್ದು ಹೌದು: ಧೋನಿ

$
0
0

ಫೋರ್ಟ್ ಲಾಡರ್‌ಹಿಲ್: ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ಕೇವಲ ಒಂದು ರನ್‌ನಿಂದ ಸೋಲು ಅನುಭವಿಸಿದ್ದು, 'ಕಡೆಯ ಎಸೆತವನ್ನು ಕಾರ್ಯಗತಗೊಳಿಸುವಲ್ಲಿ ತಪ್ಪಾಗಿದೆ,' ಎಂದು ಭಾರತೀಯ ಕ್ರಿಕೆಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಪ್ಪೊಪ್ಪಿಕೊಂಡಿದ್ದಾರೆ.

'ಇದೊಂದು ಅದ್ಭುತ ಆಟ. ಬ್ಯಾಟ್ ಮಾಡುವುದರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುವುದು ಅಸಾಧ್ಯ. ಕಡೆಯ ಎಸೆತದ ಬಗ್ಗೆ ತೆಗೆದುಕೊಂಡ ನಿರ್ಧಾರ ಸರಿಯಾಗಿದ್ದರೂ, ಕಾರ್ಯಗತಗೊಳಿಸುವುದರಲ್ಲಿ ತಪ್ಪಾಯಿತು. ಅಲ್ಲಿಯೇ ಎಡವಿದೆವು,' ಎಂದು ಪಂದ್ಯದ ನಂತರ ದೋನಿ ಹೇಳಿದರು.

ವೆಸ್ಟ್‌ಇಂಡೀಸ್ ಒಡ್ಡಿದ 246 ರನ್ ಗುರಿ ಬೆನ್ನತ್ತಿದ್ದ ಭಾರತ, 244 ರನ್ ಪೂರೈಸಿತ್ತು. ಕಡೆಯ ಎಸೆತವನ್ನು ಚೇಸ್ ಮಾಡಿದ ಧೋನಿ ಅಗತ್ಯವಿದ್ದ ಒಂದು ರನ್ ಪೂರೈಸುವಲ್ಲಿ ವಿಫಲರಾದರು. ಆ ಮೂಲಕ ಟಿ20ಯಲ್ಲಿ ಚೊಚ್ಚಲ ಶತಕ ಹೊಡೆದ ಲೊಕೇಶ್ ರಾಹುಲ್ ಪ್ರಯತ್ನ ವಿಫಲವಾಯಿತು.

ರೋಮಾಂಚಕ ಆಟದಲ್ಲಿ ಭಾರತಕ್ಕೆ ಕಡೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಆದರೆ, ಧೋನಿ ಮಾರ್ಲನ್ ಸ್ಯಾಮುಯೆಲ್ ಎಸೆತಕ್ಕೆ ಔಟ್ ‌ಆದ್ದರಿಂದ ಭಾರತ ಸೋಲುವಂತಾಯಿತು. ಆ ಮೂಲಕ ಟಿ20ಯಲ್ಲಿಯೇ ಅತ್ಯಂತ ಹೆಚ್ಚು ರನ್ ಗುರಿ ಬೆನ್ನತ್ತಿ, ಗೆದ್ದ ದಾಖಲೆ ಮುರಿಯುವಲ್ಲಿ ಧೋನಿ ಪಡೆ ವಿಫಲವಾಯಿತು.


'ಜತೆಯಾಟದಲ್ಲಿ ಸದಾ ಸರಿಯಾಗಿಯೇ ನಿರ್ಧಾರ ತೆಗೆದುಕೊಂಡಿದ್ದು, ರನ್ ರೇಟ್ 12 ಇರುವಂತೆ ನೋಡಿಕೊಂಡಿದ್ದೆವು. ಅದರಲ್ಲಿಯೂ ರಾಹುಲ್ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು. 250 ರನ್ ಗುರಿ ಬೆನ್ನಟ್ಟುವುದು ಸುಲಭವಲ್ಲದ ಕಾರಣ, ಇತರರೂ ಅದ್ಭುತವಾಗಿಯೇ ಆಡಿದ್ದಾರೆ. ಗೆದ್ದಿದ್ದರೆ ಪರಿಪೂರ್ಣ ಎನಿಸುತ್ತಿತ್ತು. ಆದರೆ, ಗೆಲ್ಲಲು ಅಗತ್ಯವಿರುವಷ್ಟು ಶ್ರಮ ಹಾಕಿದ್ದೇವೆ,' ಎಂದು 25 ಎಸೆತಗಳಲ್ಲಿ 43 ರನ್ ಮಾಡಿದ ಧೋನಿ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>