Quantcast
Channel: VijayKarnataka
Viewing all articles
Browse latest Browse all 6795

ತೆರೆಯ ಮೇಲಿನ ಧೋನಿಗೆ ಫಿದಾ ರಿಯಲ್ ಧೋನಿ

$
0
0

ತೆರೆಯ ಮೇಲೆ ತಮ್ಮನ್ನು ಸಮರ್ಥವಾಗಿ ಅನುಕರಿಸಿರುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ತಮ್ಮಲ್ಲಿ ಅಚ್ಚರಿ ಮೂಡಿಸಿದ್ದಾರೆ ಎಂದಿದ್ದಾರೆ ಕ್ರಿಕೆಟರ್‌ ಮಹೇಂದ್ರಸಿಂಗ್‌ ಧೋನಿ. ಮೊನ್ನೆಯಷ್ಟೇ ಬಿಡುಗಡೆಯಾದ 'ಎಂ.ಎಸ್‌.ಧೋನಿ : ದಿ ಅನ್‌ಟೋಲ್ಡ್‌ ಸ್ಟೋರಿ' ಹಿಂದಿ ಸಿನಿಮಾ ಟ್ರೇಲರ್‌ಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಯಿಂದ ಧೋನಿ ಥ್ರಿಲ್ಲಾಗಿದ್ದಾರೆ. ತೆರೆಯ ಮೇಲೆ ತಮ್ಮ ಪಾತ್ರವನ್ನು ಸುಶಾಂತ್‌ ಸಿಂಗ್‌ ಸೊಗಸಾಗಿ ನಿಭಾಯಿಸಿದ್ದು, ಅವರನ್ನು ನೋಡುತ್ತಿದ್ದರೆ ತಮಗೆ ಅಚ್ಚರಿಯಾಗುತ್ತದೆ ಎನ್ನುತ್ತಾರೆ ಧೋನಿ.

'ಈ ಪಾತ್ರಕ್ಕಾಗಿ ಸುಶಾಂತ್‌ ತುಂಬಾ ಶ್ರಮ ವಹಿಸಿದ್ದಾರೆ. ಏಳೆಂಟು ತಿಂಗಳುಗಳ ಕಾಲ ಮೈದಾನದಲ್ಲಿ ಕ್ರಿಕೆಟ್‌ ಆಡಿದ್ದು, ದಿನದಲ್ಲಿ ಮೂರು ಗಂಟೆ ಪ್ರಾಕ್ಟೀಸ್‌ ಮಾಡುತ್ತಿದ್ದರಂತೆ. ಇದರಿಂದಾಗಿ ನನ್ನ ಶೈಲಿಯನ್ನು ಸೂಕ್ಷ ್ಮವಾಗಿ ಗಮನಿಸಿ, ಅನುಕರಿಸಲು ಅವರಿಗೆ ಸಾಧ್ಯವಾಗಿದೆ. ನನ್ನ ನಡೆ, ಬಾಡಿ ಲಾಂಗ್ವೇಜ್‌ ಅಭಿವ್ಯಕ್ತಿಯೂ ಪರ್ಫೆಕ್ಟ್ ಆಗಿದೆ. ತೆರೆಯ ಮೇಲೆ ಅವರಲ್ಲಿ ನನ್ನನ್ನು ನಾನು ಕಾಣುವಾಗ ಅಚ್ಚರಿಯಾಗುತ್ತದೆ' ಎನ್ನುವ ಧೋನಿ, ಸಿನಿಮಾಗೆ ಪ್ರೇಕ್ಷ ಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಬಹುದು ಎಂದು ಕಾತರರಿಂದ ಕಾಯುತ್ತಿದ್ದಾರೆ.

ನೀರಜ್‌ ಪಾಂಡೆ ನಿರ್ದೇಶನದಲ್ಲಿ ತಯಾರಾಗಿರುವ ಧೋನಿ ಬಯೋಪಿಕ್‌ ಕಳೆದೆರಡು ವರ್ಷಗಳಿಂದಲೂ ಸುದ್ದಿಯಲ್ಲಿದೆ. ಏಪ್ರಿಲ್‌ನಲ್ಲಿ ತೆರೆಕಂಡಿದ್ದ ಕ್ರಿಕೆಟರ್‌ ಅಜರುದ್ದೀನ್‌ ಬಯೋಪಿಕ್‌ 'ಅಜರ್‌'ಗೆ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಚಿತ್ರದಲ್ಲಿ ತಮ್ಮ ಇಮೇಜಿಗೆ ಕುಂದು ಬರುವಂತಹ ಘಟನೆಗಳಿವೆ ಎಂದು ಇಬ್ಬರು ಹಿರಿಯ ಕ್ರಿಕೆಟಿಗರು ತಕರಾರು ತೆಗೆದಿದ್ದರು. ವಿವಾದಗಳಿಗೆ ಸಿಲುಕಿ ಭರ್ಜರಿ ಸುದ್ದಿಯೊಂದಿಗೆ ತೆರೆಕಂಡರೂ ಚಿತ್ರಕ್ಕೆ ಗೆಲುವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ 'ಧೋನಿ' ಸಿನಿಮಾಗೆ ಮಹತ್ವ ಸಿಕ್ಕಿದೆ. ತಮ್ಮ ಚಿತ್ರದಲ್ಲಿ ಧೋನಿ ಸಾಧನೆಗೆ ಹೆಚ್ಚಿನ ಒತ್ತು ನೀಡಿದ್ದು, ವಿವಾದಗಳಿಗೆ ಅವಕಾಶಗಳಿಲ್ಲ ಎಂದು ಮೊದಲೇ ಸ್ಪಷ್ಟಪಡಿಸುತ್ತಾರೆ ನಿರ್ದೇಶಕ ನೀರಜ್‌ ಪಾಂಡೆ.

ಇನ್ನು ಶೀರ್ಷಿಕೆ ಪಾತ್ರ ನಿರ್ವಹಿಸಿರುವ ಸುಶಾಂತ್‌ ಸಿಂಗ್‌ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವುದಾಗಿ ಹೇಳುತ್ತಾರೆ. 'ನಾನೋರ್ವ ಅಭಿಮಾನಿಯಾಗಿ ಎಂಟು ವರ್ಷಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಕುಟುಂಬದ ಸದಸ್ಯರೊಂದಿಗೆ ಫೋಟೋ ಕೂಡ ತೆಗೆದುಕೊಂಡಿದ್ದಿದೆ. ಧೋನಿ ಬಗ್ಗೆ ತುಂಬಾ ಹೆಮ್ಮೆಯಿದ್ದು, ತೆರೆಯ ಮೇಲೆ ಅವರ ಪಾತ್ರ ನಿರ್ವಹಿಸುವ ಅವಕಾಶ ಅಪೂರ್ವವಾದುದು' ಎಂದು ಸಂಭ್ರಮಿಸುತ್ತಾರೆ. ಕಿಯಾರಾ ಅಡ್ವಾನಿ, ದಿಶಾ ಪಟಾನಿ, ಅನುಪಮ್‌ ಖೇರ್‌, ಭೂಮಿಕಾ ಚಾವ್ಲಾ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಮುಂದಿನ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>