Quantcast
Channel: VijayKarnataka
Viewing all articles
Browse latest Browse all 6795

ಬರ್ತ್‌ಡೇಗೆ ಬಂದ ಅಂಬಿ, ಕಿಟ್ಟಿ

$
0
0

ಮಹೇಶ್‌ ಸುಖಧರೆ ನಿರ್ದೇಶನದ 'ಹ್ಯಾಪಿ ಬರ್ತ್‌ಡೇ' ಚಿತ್ರದಲ್ಲಿ ಅಂಬರೀಷ ಮತ್ತು ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೆಸ್ಟ್‌ ಅಪಿರಿಯನ್ಸ್‌ ಆಗಿದ್ದರೂ ಸಿನಿಮಾದ ಪ್ರಮುಖ ಘಟ್ಟದಲ್ಲಿ ಈ ಪಾತ್ರಗಳು ಬರಲಿವೆಯಂತೆ.

- ಶರಣು ಹುಲ್ಲೂರು

ಇದೇ ಶುಕ್ರವಾರ (ಆ.26) ತೆರೆ ಕಾಣುತ್ತಿರುವ 'ಹ್ಯಾಪಿ ಬರ್ತ್‌ಡೇ' ಸಿನಿಮಾದಲ್ಲಿ ಅಂಬರೀಷ ಮತ್ತು ಶ್ರೀನಗರ ಕಿಟ್ಟಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೆಸ್ಟ್‌ ಅಪಿರಿಯನ್ಸ್‌ ಆಗಿದ್ದರೂ ಈ ಪಾತ್ರಗಳಿಗೆ ತಮ್ಮದೇ ಆದ ಮಹತ್ವವಿದೆಯಂತೆ.

ಹೀಗಾಗಿ ಹೆಸರಾಂತ ಕಲಾವಿದರನ್ನೇ ಈ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಅಂತಾರೆ ನಿರ್ದೇಶಕ ಮಹೇಶ್‌ ಸುಖಧರೆ. 'ಅಂಬರೀಷ ಮತ್ತು ಶ್ರೀನಗರ ಕಿಟ್ಟಿ ಯಾವ ಪಾತ್ರ ನಿರ್ವಹಿಸಿದ್ದಾರೆ ಅಂತ ಈಗಲೇ ಹೇಳಲಾರೆ. ಕತೆಯ ಪ್ರಮುಖ ಘಟ್ಟಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆಂದಷ್ಟೇ ಹೇಳಬಲ್ಲೆ' ಎನ್ನುತ್ತಾರೆ ನಿರ್ದೇಶಕರು.

ಲವಲವಿಕೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಅಂಬರೀಷ ಸಚಿವರಾಗಿ ನಟಿಸಿದ್ದಾರೆ. ಮೈಸೂರು ದಸರಾದಲ್ಲಿ ನಡೆಯುವ ಕಾರ‍್ಯಕ್ರಮವೊಂದರ ದೃಶ್ಯದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿಯ ಪಾತ್ರವು ವಿಭಿನ್ನವಾಗಿದ್ದು, ಚಿತ್ರಕತೆಯಲ್ಲಿ ಇವರು ಆಗಾಗ್ಗೆ ಎಂಟ್ರಿ ಕೊಡುತ್ತಾರಂತೆ.

ಹಲವು ಕಾರಣಗಳಿಂದಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಮೂಲಕ ಸಚಿನ್‌ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಸಂಸ್ಕೃತಿ ಶೆಣೈ ಕೂಡ ಕನ್ನಡ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

ವಿ.ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಹಿಟ್‌ ಆಗಿದ್ದು, ಎರಡೇ ದಿನಕ್ಕೆ ಯೂಟ್ಯೂಬ್‌ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಹಾಡು ನೋಡಿ ಲೈಕ್‌ ಮಾಡಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>