Quantcast
Channel: VijayKarnataka
Viewing all articles
Browse latest Browse all 6795

ಕಲ್ಪನ 2 ಚಿತ್ರ ವಿಮರ್ಶೆ: ಹೆದರಿಸುತ್ತಲೇ ನಗಿಸುವ ಕಲ್ಪನ

$
0
0

ಕನ್ನಡ ಚಿತ್ರ
* ಪದ್ಮಿನಿ ಎಸ್. ಜೈನ್

ದೆವ್ವದ ಸಿನಿಮಾ ಎಂದಾಕ್ಷಣ ಒಂದು ಕಾಡೊಳಗಿನ ಭೂತ ಬಂಗಲೆ, ಅಲ್ಲೊಂದು ಅತೃಪ್ತ ಹೆಣ್ಣಿನ ಆತ್ಮ. ಅಲ್ಲಿಗೆ ಅಚಾನಕ್ ಆಗಿ ಹೋಗಿ ಸಿಕ್ಕಾಕಿಕೊಂಡವರನ್ನು ಆ ಆತ್ಮ ಕಾಡುತ್ತದೆ ಎಂಬುದು ಸಾಮಾನ್ಯ ಯೋಚನೆ. ಆದರೆ 'ಕಲ್ಪನ 2' ಚಿತ್ರ ಇದಕ್ಕಿಂತ ಕೊಂಚ ಭಿನ್ನ. ಟಿಆರ್‌ಪಿಗಾಗಿ ಹೋರಾಡುವ ಟಿವಿ ಚಾನಲ್‌ಗಳ ನಡುವಿನ ಶೀತಲ ಸಮರದ ಮೂಲಕ ಆರಂಭವಾಗುವ ಕತೆ ಮುಂದಕ್ಕೆ ಹಾರರ್ ತಿರುವು ಪಡೆದುಕೊಳ್ಳುತ್ತದೆ. ಮೊದಲಾರ್ಧ ಭಾಗ ಸಂಪೂರ್ಣ ಹಾಸ್ಯ ಅನಿಸಿದರೆ, ನಂತರ ಕ್ಷಣ ಕ್ಷಣ ದೆವ್ವದ ದರ್ಶನ.

ತಮಿಳಿನ 'ಕಾಂಚನಾ' ಕನ್ನಡದಲ್ಲಿ 'ಕಲ್ಪನ' ಆಗಿ ಹಿಟ್‌ಲಿಸ್ಟ್ ಸೇರಿಕೊಂಡಿತ್ತು. ಅದರ ಸರಣಿ ಈಗ 'ಕಲ್ಪನ 2' ಹೆಸರಿನಲ್ಲಿ ಬಂದಿದೆ. ಮೂಲ ಕತೆಗೂ ಕನ್ನಡ ರಿಮೇಕ್‌ಗೂ ಏನೂ ಬದಲಾವಣೆಗಳಿಲ್ಲ. ತಮಿಳಿನಲ್ಲಿ ಹೇಗಿದೆಯೋ ಹಾಗೆಯೇ ಭಟ್ಟಿ ಇಳಿಸಿದ್ದಾರಷ್ಟೇ. ಹಾಗಾಗಿ ಈಗಾಗಲೇ ಕಾಂಚನಾ 2 ಚಿತ್ರವನ್ನು ವೀಕ್ಷಿಸಿದವರು ಈ ಚಿತ್ರದಲ್ಲಿ ನೋಡುವಂಥದ್ದೇನೂ ಇಲ್ಲ. ಟಿವಿ ಟಿಪೋರ್ಟರ್ ಆಗಿ ಆವಂತಿಕಾ ಶೆಟ್ಟಿ ತಮ್ಮ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಉಪೇಂದ್ರ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು ಮೆಚ್ಚಿಸಿದ್ದಾರೆ. ಪ್ರಿಯಾಮಣಿ ಇಷ್ಟ ಆಗುತ್ತಾರಾದರೂ ತಮಿಳಿನ ಕಾಂಚನಾಳಾಗಿ ನಿತ್ಯಾ ಮೆನನ್‌ರನ್ನು ಕಂಡವರಿಗೆ ಪ್ರಿಯಾ ಸಪ್ಪೆ ಅನಿಸುತ್ತಾರೆ.

ಚಿತ್ರದಲ್ಲಿ ಹಾರರ್ ಎಫೆಕ್ಟ್‌ಗಳನ್ನು ಕೊಡುತ್ತಲೇ ಪ್ರೇಕ್ಷಕರನ್ನು ನಗಿಸಿದ್ದು ಪ್ಲಸ್ ಪಾಯಿಂಟ್. ದೆವ್ವದ ಮುಖ ನೋಡುತ್ತಾ ಪ್ರೇಕ್ಷಕ ಬೆವತುಕೊಂಡರೆ, ದೆವ್ವವನ್ನು ಕಂಡ ಪಾತ್ರಧಾರಿಗಳ ವರ್ತನೆ ನಗಿಸುತ್ತದೆ.

ದ್ವಿತಿಯಾರ್ಧದ 'ಜಡೆ ಶಿವ'ನಾಗಿ ಉಪ್ಪಿ ಡಿಫರೆಂಟ್ ಆಗಿ ಕಾಣಿಸುತ್ತಾರೆ. ಆದರೆ ಉಪ್ಪಿ ಹಾಗೂ ಆವಂತಿಕಾ ಶೆಟ್ಟಿ ಕೆಮಿಸ್ಟ್ರಿ ಇನ್ನೂ ಚೆನ್ನಾಗಿ ತೋರಿಸಬಹುದಿತ್ತು. ಮೆಲೋಡಿ ಹಾಡುಗಳಿಗಿಂತ ಅಬ್ಬರದ ಸಂಗೀತದ ಮೊರೆ ಹೋಗಿರುವ ಕಾರಣ ಚಿತ್ರದ ತುಂಬ ಸದ್ದೋ ಸದ್ದು. ಕನ್ನಡದ ಪ್ರೇಕ್ಷಕ ಫೈಟ್, ಹಾಡುಗಳಿಂದ ದೂರವಾಗಿ ಹೊಸದೇನನ್ನೋ ಬಯಸುತ್ತಿರುವ ಹೊತ್ತಿನಲ್ಲಿ ಮತ್ತದೇ ಹೀರೋಯಿಸಂ ತೋರಿಸುವ ಹಾಡು, ಬಿಡಲ್ಡಪ್‌ಗಳು ಸಾಂಗ್ಸ್, ಬಿಲ್ಡ್ ಅಪ್‌ಗಳು ಅಯ್ಯೋ ಅನಿಸುತ್ತವೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>