Quantcast
Channel: VijayKarnataka
Viewing all articles
Browse latest Browse all 6795

ನಿಷ್ಕ್ರಿಯ ಖಾತೆಗಳ ಹಣ ಸದ್ಯಕ್ಕೆ ಮುಟ್ಟಲ್ಲ

$
0
0

ಜನಪರ ಯೋಜನೆಗೆ ನಿಷ್ಕ್ರಿಯ ಖಾತೆಗಳ ಹಣ ಬಳಕೆ ಕುರಿತು ಕೇಂದ್ರದ ಪ್ರತಿಕ್ರಿಯೆ

ಹೊಸದಿಲ್ಲಿ: ಅಂಚೆ ಇಲಾಖೆಯಲ್ಲಿನ ನಿಷ್ಕ್ರಿಯ ಖಾತೆಗಳಲ್ಲಿರುವ ಹಣವನ್ನು ಸಮಾಜ ಕಲ್ಯಾಣ ಯೋಜನೆಗೆ ಬಳಸುವ ಪ್ರಸ್ತಾಪ ಸದ್ಯಕ್ಕೆ ಸರಕಾರದ ಮುಂದಿಲ್ಲ ಎಂದು ಲೋಕಸಭೆಯಲ್ಲಿ ದೂರ ಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಈ ವಿಷಯವನ್ನು ಸರಕಾರ ಪರಿಗಣಿಸುವ ಅವಕಾಶಗಳೂ ಇವೆ ಎಂದಿದ್ದಾರೆ.

ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪಿಎಫ್‌ ನಿಷ್ಕ್ರಿಯ ಖಾತೆಗಳಲ್ಲಿನ ಹಣ ಬಳಸುವ ಸರಕಾರದ ತೀರ್ಮಾನಕ್ಕೆ ಮಂಗಳವಾರ ನಡೆದ ಇಪಿಎಫ್‌ಒ ಟ್ರಸ್ಟಿಗಳ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಾರ್ಮಿಕ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗವನ್ನೂ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸದ್ಯಕ್ಕೆ ಅಂಥ ಪ್ರಸ್ತಾವನೆಯಿಲ್ಲ ಎಂದಿದ್ದಾರೆ.

ಖಾಸಗಿ ಬ್ಯಾಂಕ್‌ಗಳ ವಿರುದ್ಧ ಕೆಂಡ:

''ಐಸಿಐಸಿಐ, ಕೋಟಕ್‌ ಮಹೀಂದ್ರಾ, ಯಸ್‌ ಮತ್ತು ಎಕ್ಸಿಸ್‌ನಂಥ ಖಾಸಗಿ ವಲಯದ ಬ್ಯಾಂಕ್‌ಗಳು ಲಾಭ ಗಳಿಕೆಗೆ ಸಂಘಟಿತ ವ್ಯವಸ್ಥೆ ರೂಪಿಸಿಕೊಂಡಿವೆ. ಜನ ಧನ ಯೋಜನೆಯಂಥ ಜನಪರ ಯೋಜನೆಗಳ ಜಾರಿಗೆ ಆಸಕ್ತಿ ತೋರುತ್ತಿಲ್ಲ. ಸಾಮಾನ್ಯ ಜನರಿಗೆ ನೆರವಾಗದೇ ಹೋದರೆ, ಇಂಥ ಬ್ಯಾಂಕ್‌ಗಳನ್ನು ಸರಕಾರವು ರಾಷ್ಟ್ರೀಕರಣ ಮಾಡಬೇಕು,'' ಎಂದು ಬಿಜೆಪಿ ಸಂಸದ ಚಿಂತಾಮಣ ಮಾಲ್ವಿಯಾ ಒತ್ತಾಯಿಸಿದರು.

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ''ಬಹುತೇಕ ಖಾಸಗಿ ಬ್ಯಾಂಕ್‌ಗಳು ಶೇ.100ರಷ್ಟು ಇಂಗ್ಲಿಷ್‌ನಲ್ಲಿ ವ್ಯವಹರಿಸುತ್ತವೆ. ರಾಜ್ಯ ಭಾಷೆಗಳಲ್ಲಿ ವ್ಯವಹಾರವನ್ನು ಒದಗಿಸುತ್ತಿಲ್ಲ,'' ಎಂದು ದೂರಿದರು.

ಸಿಪಿಎಂ ಸದಸ್ಯ ಎಂ.ಬಿ.ರಾಜೇಶ್‌ ಅವರು ಮತ್ತೊಂದು ವಿಷಯ ಪ್ರಸ್ತಾಪಿಸಿ, ''ಸ್ಟೇಟ್‌ ಬ್ಯಾಂಕ್‌ ಆಫ್‌ ತಿರುವಂಕೂರ್‌(ಎಸ್‌ಬಿಟಿ) ಅನ್ನು ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದಲ್ಲಿ ವಿಲೀನ ಮಾಡಬಾರದು. ಇದು ಕೇರಳ ಪ್ರಜೆಗಳ ಹಿತಾಸಕ್ತಿಗೆ ವಿರುದ್ಧವಾದುದು,'' ಎಂದರು. ಅವರ ಮಾತಿಗೆ ಕೇರಳದ ಇತರೆ ಪಕ್ಷಗಳ ಸದಸ್ಯರೂ ಧ್ವನಿ ಸೇರಿಸಿದರು. ಎಸ್‌ಬಿಟಿ ವಿಲೀನ ಖಂಡಿಸಿ ಇತ್ತೀಚೆಗಷ್ಟೆ ಕೇರಳದ ವಿಧಾನಸಭೆ ಅವಿರೋಧವಾಗಿ ನಿರ್ಣಯ ಕೈಗೊಂಡಿತ್ತು.

ಬೇನಾಮಿ ವ್ಯವಹಾರ ತಡೆಗೆ ವಿಧೇಯಕ ಅಂಗೀಕಾರ



ಕಪ್ಪು ಹಣವನ್ನು ನಿಯಂತ್ರಸುವ ನಿಟ್ಟಿನಲ್ಲಿ ಮತ್ತೊಂದು ವಿಧೇಯಕವನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು. ಬೇನಾಮಿ ವರ್ಗಾವಣೆಗಳನ್ನು ಹತ್ತಿಕ್ಕಲು ಸಮಗ್ರ ತಿದ್ದುಪಡಿ ವಿಧೆಯಕವನ್ನು ಅನುಮೋದಿಸಲಾಯಿತು. ಬೇನಾಮಿ ವರ್ಗವಣೆ (ನಿಷೇಧ) ತಿದ್ದುಪಡಿ ವಿಧೇಯಕ 2015ಯು ಕಪ್ಪುಹಣವನ್ನು ತಡೆಯುವ ಉದ್ದೇಶ ಹೊಂದಿದ್ದು, ಬೇನಾಮಿ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸಲು ಇದರಲ್ಲಿ ಅವಕಾಶ ಇದೆ.

'' ಹಲವು ಮಂದಿ ತಮ್ಮ ಅಘೋಷಿತ ಆದಾಯವನ್ನು ಯಾರದ್ದೋ ಹೆಸರಿನಲ್ಲಿ ಬೇನಾಮಿ ಪ್ರಾಪರ್ಟಿಗಳಲ್ಲಿ ಹೂಡುತ್ತಾರೆ. ಇಂತಹ ಚಟುವಟಿಕೆಗಳನ್ನು ತಡೆಯಲಾಗುವುದು'' ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಆದರೆ ಧಾರ್ಮಿಕ ಅಥವಾ ಸೇವಾ ಸಂಸ್ಥೆಗಳ ಪ್ರಾಪರ್ಟಿಗಳನ್ನು ಈ ವಿಧೇಯಕದ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>