Quantcast
Channel: VijayKarnataka
Viewing all articles
Browse latest Browse all 6795

ಹೈದರಾಬಾದ್‌ ಐಸಿಸ್‌ ಮುಖ್ಯಸ್ಥನ ಬಂಧನ

$
0
0

ಹೈದರಾಬಾದ್‌: ಆಂಧ್ರ ಮತ್ತು ತೆಲಂಗಾಣದಲ್ಲಿ ಇತ್ತೀಚೆಗಷ್ಟೇ ಐಸಿಸ್‌ ಉಗ್ರರ ಬೇಟೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ, ಮಂಗಳವಾರ ಐಸಿಸ್‌ ಸಂಘಟನೆಯ ಹೈದರಾಬಾದ್‌ ಘಟಕದ ಮುಖ್ಯಸ್ಥ ಯಾಸಿನ್‌ ನಿಯಾಮತುಲ್ಲಾ (42) ಮತ್ತು ಆತನ ಬಲಗೈ ಬಂಟ ಅತಾವುಲ್ಲಾ ರೆಹಮಾನ್‌ (30)ನನ್ನು ಬಂಧಿಸಿದೆ.

ಇತ್ತೀಚೆಗೆ ಗುಪ್ತಚರ ಮಾಹಿತಿ ಆಧರಿಸಿ ಮಿಂಚಿನ ಕಾರ‍್ಯಚರಣೆ ನಡೆದ್ದ ಎನ್‌ಐಎ ತಂಡ, ಐವರು ಐಸಿಸ್‌ ಉಗ್ರರನ್ನು ಬಂಧಿಸಿತ್ತು. ಬಂಧಿತ ಉಗ್ರರ ವಿಚಾರಣೆ ನಡೆಸಿ, ರೆಹಮಾನ್‌ ಹಾಗೂ ನಿಯಾಮತುಲ್ಲಾ ಬಗ್ಗೆ ಮಾಹಿತಿ ಕಲೆ ಹಾಕಿ, ಅವರಿಬ್ಬರಿಗಾಗಿ ಜಾಲ ಬೀಸಿತ್ತು. ಐಸಿಸ್‌ ವಿಚಾರಧಾರೆಗಳಿಂದ ಪ್ರೇರಣೆಗೊಂಡಿದ್ದ ರೆಹಮಾನ್‌, ಆಂಧ್ರ ಮತ್ತು ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಅದರ ಸದಸ್ಯರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಎಂಬ ಗಮನಾರ್ಹ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ.

ಸಂಪರ್ಕಕ್ಕೆ ಸ್ಪೆಷಲ್‌ ಸಾಫ್ಟ್‌ವೇರ್‌: ಬಂಧಿತ ನಿಯಾಮತುಲ್ಲಾ, ಅಬು ದರ್ದಾ ಎಂಬ ಹೆಸರಿನಿಂದ ಇರಾಕ್‌ ಮತ್ತು ಸಿರಿಯಾದಲ್ಲಿರುವ ಐಸಿಸ್‌ ನಾಯಕರ ಜತೆ ಸಂಪರ್ಕದಲ್ಲಿದ್ದ. ಇಮೇಲ್‌ ಸಂಭಾಷಣೆಗಳನ್ನು ಗುಪ್ತವಾಗಿರಿಸಲು 'ಟುಟಾನೋಟಾ' ಎಂಬ ವಿಶೇಷ ಸಾಫ್ಟ್‌ವೇರ್‌ ಬಳಸುವಂತೆ ತನ್ನ ತಂಡದ ಸದಸ್ಯರಿಗೆ ಸೂಚಿಸಿದ್ದ. ಇದಕ್ಕೆ ಟೆಕ್ಕಿ ಮೊಹಮ್ಮದ್‌ ಯಾಜಿದಿ ಸಾಥ್‌ ನೀಡಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

'ಟುಟಾ' ಮತ್ತು 'ನೋಟಾ' ಎಂಬ ಲ್ಯಾಟಿನ್‌ ಪದಗಳ ಜೋಡಣೆ ಇದಾಗಿದ್ದು, 'ಸಂದೇಶ ಗುಪ್ತವಾಗಿರಿಸಿ' ಎಂಬುದು ಇದರ ಗೂಢಾರ್ಥ. ಇಂಟರ್‌ನೆಟ್‌ ಪ್ರೊಟೊಕಾಲ್‌ ವಿಳಾಸದ ಜತೆ ಈ ಸಾಫ್ಟ್‌ವೇರ್‌ ಬೆಸೆದುಕೊಳ್ಳದ ಕಾರಣ, ಇಲ್ಲಿ ಸೆಂಡರ್‌ ಮತ್ತು ರಿಸೀವರ್‌ನ ವಿವರಗಳನ್ನು ಪತ್ತೆ ಹೆಚ್ಚುವುದು ಕಡುಕಷ್ಟ ಎನ್ನಲಾಗುತ್ತಿದೆ.

ಎನ್‌ಐಎ ಜೂನ್‌ 29ರಂದು ಹೈದರಾಬಾದ್‌ ನಗರದಲ್ಲಿ ಸರಣಿ ದಾಳಿಯ ಮೂಲಕ ಭೀಕರ ನರಮೇಧಕ್ಕೆ ಸ್ಕೆಚ್‌ ಹಾಕಿದ್ದ ಮೊಹಮ್ಮದ್‌ ಇಬ್ರಾಹಿಂ ಯಾಜಿದಿ, ಹಬೀಬ್‌ ಮೊಹಮ್ಮದ್‌ ಅಲಿಯಾಸ್‌ ಸರ್‌, ಮೊಹಮ್ಮದ್‌ ಇಲಿಯಾಸ್‌ ಯಜ್ನಾದಿ, ಅಬ್ದುಲ್ಲಾ ಬಿಲ್‌ ಅಹ್ಮದ್‌ ಅಲ್‌ ಅಮೋದಿ ಹಾಗೂ ಮುಜಾಫರ್‌ ಹುಸೇನ್‌ ರಿಜ್ವಾನ್‌ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತ್ತು. ಇವರಿಂದ ಯೂರಿಯಾ, ಅಮೋನಿಯಂ ನೈಟ್ರೇಟ್‌, ಮಿನರಲ್‌ ಆ್ಯಸಿಡ್‌, ಹೈಡ್ರೋಜನ್‌ ಪೆರಾಕ್ಸೈಡ್‌ ರಾಸಾಯನಿಕ ಹಾಗೂ ಎರಡು ಸೆಮಿ ಆಟೋಮ್ಯಾಟಿಕ್‌ ಪಿಸ್ತೂಲ್‌, ಟೆಲಿಸ್ಕೋಪಿಕ್‌ ಸೈಟ್‌ ಇರುವ ಏರ್‌ ಗನ್‌, ಶೂಟಿಂಗ್‌ ಪ್ರ್ಯಾಕ್ಟೀಸ್‌ ಟಾರ್ಗೆಟ್‌ ಬೋರ್ಡ್‌, ಆರು ಲ್ಯಾಪ್‌ಟಾಪ್‌, 40 ಮೊಬೈಲ್‌ ಫೋನ್‌, 32 ಸಿಮ್‌ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>