ಧಾರ್ಮಿಕ ಅಧ್ಯಯನಕ್ಕಾಗಿ ಶ್ರೀಲಂಕಾದಲ್ಲಿರುವ ಹದೀಸ್ ಸೆಂಟರ್ಗೆ ತೆರಳಿರುವುದಾಗಿ ಐಸಿಸ್ಗೆ ಸೇರಿದ್ದಾರೆ ಎಂದು ಶಂಕಿಸಲಾಗಿರುವ ಕೇರಳದ ಮೂವರು ಯುವಕರು ಪೋಷಕರಿಗೆ ತಿಳಿಸಿದ್ದಾರೆ. ಕಾಸರಗೋಡಿನ ಅಬ್ದುಲ್ ರಷೀದ್ ಅಬ್ದುಲ್ಲಾ,ಹಫಿಸುದ್ದೀನ್, ಪಾಲಕ್ಕಾಡ್ನ ಎಜ್ಹ್ಜಾ ಎಂಬ ಯುವಕರು ಪೋಷಕರಿಗೆ ಈ ವಿಷಯ ತಿಳಿಸಿದ್ದರೂ ಇವರೆಲ್ಲ ಶ್ರೀಲಂಕಾ ಹದೀಸ್ ಸೆಂಟರ್ ತಲುಪಿರುವುದು ಗುಪ್ತಚರ ಇಲಾಖೆಗೆ ಇನ್ನೂ ದೃಢಪಟ್ಟಿಲ್ಲ.
ಈ ಮೊದಲು ಯೆಮೆನ್ ಕೇರಳ ಅಲಫಿ ಯುವಕರಿಗೆ ಆಕರ್ಷಣೀಯವಾಗಿತ್ತು. ಮೂರು ವರ್ಷದ ಹಿಂದೆ ಮಲಪ್ಪುರಂ ನಿಂದ ಕನಿಷ್ಠ 12 ಮಂದಿ ಯೆಮೆನ್ 'ಲೈಟ್ಹೌಸ್ ಇಸ್ಲಾಂ' ಎಂಬ ಅಭಿಮಾನದೊಂದಿಗೆ ಯೆಮೆನ್ಗೆ ತೆರಳಿದ್ದರು.
ಇತ್ತೀಚೆಗೆ ಉಗ್ರವಾದಿ ಸಲಫಿಗಳಿಗೆ ಶ್ರೀಲಂಕಾ ಬಹಳಷ್ಟು ಪ್ರಿಯವಾಗಿದೆ. ಎರಡು ವರ್ಷದ ಹಿಂದೆ ಪ್ರವಾಸಿ ವೀಸಾದಲ್ಲಿ ಬಂದು ನಿಲಂಬೂರಿನಲ್ಲಿ ಇಸ್ಲಾಂ ತರಗತಿ ನಡೆಸುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣ ದಾಖಲಿಸಿರಲಿಲ್ಲ. ಸಲ್ಮಾನ್ ಎಂಬಾತ ಯೆಮೆನ್ನ ದಮ್ಮಾಜ್ಗೆ ಹೋಗಿದ್ದು, ಅಲ್ಲಿ ಹೌತಿ ಬಂಡುಕೋರರು ಆತನನ್ನು ಅಪಹರಿಸಿ ಬಳಿಕ ಬಿಡುಗಡೆಗೊಳಿಸಿದ್ದರು ಎಂದು ಗುಪ್ತದಳ ಅಧಿಕಾರಿ ವಿವರಿಸಿದ್ದಾರೆ.
ದಮ್ಮಾಜ್ ಸಲಫಿಗಳು ನಿಲಂಬೂರಿನಲ್ಲಿ ಸ್ವಂತ ಕೇಂದ್ರ ತೆರೆಯಲು ಪ್ರಯತ್ನಿಸಿದ್ದು, ನಾನಾ ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ.ಈಗ ದೇಶ ತೊರೆದಿರುವವವರು ಕೇರಳದಲ್ಲಿರುವ ದಮ್ಮಾಜ್ ಸಲಫಿ ಗುಂಪಿನ ಸದಸ್ಯರಾಗಿದ್ದರೇ ಎಂಬುದು ಇನ್ನೂ ಖಚಿತಗೊಂಡಿಲ್ಲ.
ಕೋಯಿಕ್ಕೋಡ್: ಈಗ ಶ್ರೀಲಂಕಾವು ಮಲಯಾಳಿ ಸಲಫಿಗಳಿಗೆ ಅಚ್ಚುಮೆಚ್ಚಿನ ಇಸ್ಲಾಂ ಜ್ಞಾನತಾಣವಾಗಿದೆ. ಕೇರಳದಲ್ಲಿ ಸರಿಯಾಗಿ ಇಸ್ಲಾಮ್ ಜ್ಞಾನ ದೊರೆಯುತ್ತಿಲ್ಲ ಎಂಬುದು ಈ ಯುವಕರ ನಂಬಿಕೆ.