Quantcast
Channel: VijayKarnataka
Viewing all articles
Browse latest Browse all 6795

ಕೇರಳ ಸಲಫಿಗಳಿಗೆ ಶ್ರೀಲಂಕಾ ಇಸ್ಲಾಂ ಜ್ಞಾನತಾಣ

$
0
0

ಕೋಯಿಕ್ಕೋಡ್: ಈಗ ಶ್ರೀಲಂಕಾವು ಮಲಯಾಳಿ ಸಲಫಿಗಳಿಗೆ ಅಚ್ಚುಮೆಚ್ಚಿನ ಇಸ್ಲಾಂ ಜ್ಞಾನತಾಣವಾಗಿದೆ. ಕೇರಳದಲ್ಲಿ ಸರಿಯಾಗಿ ಇಸ್ಲಾಮ್‌ ಜ್ಞಾನ ದೊರೆಯುತ್ತಿಲ್ಲ ಎಂಬುದು ಈ ಯುವಕರ ನಂಬಿಕೆ.

ಧಾರ್ಮಿಕ ಅಧ್ಯಯನಕ್ಕಾಗಿ ಶ್ರೀಲಂಕಾದಲ್ಲಿರುವ ಹದೀಸ್ ಸೆಂಟರ್‌ಗೆ ತೆರಳಿರುವುದಾಗಿ ಐಸಿಸ್‌ಗೆ ಸೇರಿದ್ದಾರೆ ಎಂದು ಶಂಕಿಸಲಾಗಿರುವ ಕೇರಳದ ಮೂವರು ಯುವಕರು ಪೋಷಕರಿಗೆ ತಿಳಿಸಿದ್ದಾರೆ. ಕಾಸರಗೋಡಿನ ಅಬ್ದುಲ್ ರಷೀದ್ ಅಬ್ದುಲ್ಲಾ,ಹಫಿಸುದ್ದೀನ್, ಪಾಲಕ್ಕಾಡ್‌ನ ಎಜ್ಹ್ಜಾ ಎಂಬ ಯುವಕರು ಪೋಷಕರಿಗೆ ಈ ವಿಷಯ ತಿಳಿಸಿದ್ದರೂ ಇವರೆಲ್ಲ ಶ್ರೀಲಂಕಾ ಹದೀಸ್ ಸೆಂಟರ್ ತಲುಪಿರುವುದು ಗುಪ್ತಚರ ಇಲಾಖೆಗೆ ಇನ್ನೂ ದೃಢಪಟ್ಟಿಲ್ಲ.

ಈ ಮೊದಲು ಯೆಮೆನ್ ಕೇರಳ ಅಲಫಿ ಯುವಕರಿಗೆ ಆಕರ್ಷಣೀಯವಾಗಿತ್ತು. ಮೂರು ವರ್ಷದ ಹಿಂದೆ ಮಲಪ್ಪುರಂ ನಿಂದ ಕನಿಷ್ಠ 12 ಮಂದಿ ಯೆಮೆನ್‌ 'ಲೈಟ್‌ಹೌಸ್‌ ಇಸ್ಲಾಂ' ಎಂಬ ಅಭಿಮಾನದೊಂದಿಗೆ ಯೆಮೆನ್‌ಗೆ ತೆರಳಿದ್ದರು.
ಇತ್ತೀಚೆಗೆ ಉಗ್ರವಾದಿ ಸಲಫಿಗಳಿಗೆ ಶ್ರೀಲಂಕಾ ಬಹಳಷ್ಟು ಪ್ರಿಯವಾಗಿದೆ. ಎರಡು ವರ್ಷದ ಹಿಂದೆ ಪ್ರವಾಸಿ ವೀಸಾದಲ್ಲಿ ಬಂದು ನಿಲಂಬೂರಿನಲ್ಲಿ ಇಸ್ಲಾಂ ತರಗತಿ ನಡೆಸುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣ ದಾಖಲಿಸಿರಲಿಲ್ಲ. ಸಲ್ಮಾನ್ ಎಂಬಾತ ಯೆಮೆನ್‌ನ ದಮ್ಮಾಜ್‌ಗೆ ಹೋಗಿದ್ದು, ಅಲ್ಲಿ ಹೌತಿ ಬಂಡುಕೋರರು ಆತನನ್ನು ಅಪಹರಿಸಿ ಬಳಿಕ ಬಿಡುಗಡೆಗೊಳಿಸಿದ್ದರು ಎಂದು ಗುಪ್ತದಳ ಅಧಿಕಾರಿ ವಿವರಿಸಿದ್ದಾರೆ.

ದಮ್ಮಾಜ್‌ ಸಲಫಿಗಳು ನಿಲಂಬೂರಿನಲ್ಲಿ ಸ್ವಂತ ಕೇಂದ್ರ ತೆರೆಯಲು ಪ್ರಯತ್ನಿಸಿದ್ದು, ನಾನಾ ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ.ಈಗ ದೇಶ ತೊರೆದಿರುವವವರು ಕೇರಳದಲ್ಲಿರುವ ದಮ್ಮಾಜ್ ಸಲಫಿ ಗುಂಪಿನ ಸದಸ್ಯರಾಗಿದ್ದರೇ ಎಂಬುದು ಇನ್ನೂ ಖಚಿತಗೊಂಡಿಲ್ಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>