Quantcast
Channel: VijayKarnataka
Viewing all articles
Browse latest Browse all 6795

ದರೋಡೆಗೆ ಮೊದಲು ಗುಂಡು ಪಾರ್ಟಿ ಮಾಡಿದ ಖದೀಮರು

$
0
0

ವಡೋದರ: ಮಂಜಲ್‌ಪುರ್‌ ಪ್ರದೇಶದ ಎರಡು ಮನೆಗಳಿಗೆ ಭಾನುವಾರ ರಾತ್ರಿ ಕನ್ನ ಹಾಕಿದ ಖದೀಮರು 3.84 ಲಕ್ಷ ರೂ.ಗೂ ಅಧಿಕ ಮೌಲ್ಯದ ನಗದು , ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ನಗದು, ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗುವುದು ಮಾಮೂಲು, ಆದರೆ ಇವರು ಕನ್ನ ಹಾಕಿದ ಮನೆಯಲ್ಲಿ ಟಿವಿ ನೋಡಿ, ಮದ್ಯ ಸೇವಿಸಿ ಮನೆಯಲ್ಲಿದ್ದ ಡ್ರೈಫ್ರೂಟ್ಸ್‌ ತಿಂದಿದ್ದಾರೆ. ಮೂವರು ಕಳ್ಳರು ಮನೆಯೊಳಗೆ ನುಗ್ಗಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಆಶಿಶ್‌ ಮೋದಿ ಎಂಬುವವರ ಮನೆಯೊಳಗೆ ನುಗ್ಗಿದ ಕಳ್ಳರು ನಗದು ಹಾಗೂ 1.44 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿಸಿದ್ದಾರೆ. ನಂತರ ಅದೇ ಪ್ರದೇಶದ ಹೇಮಾ ಪಟೇಲ್‌ ಎಂಬುವವರ ಮನೆಗೆ ಲಗ್ಗೆ ಇಟ್ಟಿದ್ದಾರೆ. ಆ ಮನೆಯಲ್ಲಿ ದರೋಡೆಕೋರರು ಗುಂಡು ಪಾರ್ಟಿ ಮಾಡಿ, ಆಹಾರ ಸೇವಿಸಿದ್ದಾರೆ.

'ಮದ್ಯ ಸೇವಿಸಿದ್ದ ಗ್ಲಾಸ್‌ ಮನೆಯಲ್ಲಿ ಪತ್ತೆಯಾಗಿದೆ, ನಮ್ಮ ಮನೆಯಲ್ಲಿ ಮದ್ಯ ಇರಲಿಲ್ಲ. ಅವರೇ ಅದನ್ನು ತಂದಿರಬಹುದು ಎಂದು ಮನೆ ಮಾಲೀಕರು ತಿಳಿಸಿದ್ದಾರೆ,'ಎಂದು ಮಂಜಲ್‌ಪುರ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಆರ್.ಹೆಚ್‌. ಜಡೇಜಾ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>