Quantcast
Channel: VijayKarnataka
Viewing all articles
Browse latest Browse all 6795

ಶನಿಯ ಚಂದ್ರನಲ್ಲಿ ಜೀವದ ಕುರುಹು?

$
0
0

ನೀರಿನ ಬದಲು ಇಲ್ಲಿ ಹೈಡ್ರೋಜನ್‌ ಸೈನೆಡ್‌ ಜೀವ ಅಸ್ತಿತ್ವದ ಮೂಲ ಕಣ!

ಲಾಸ್‌ ಏಂಜಲೀಸ್‌: ಭೂಮಿಯಲ್ಲಿ ಜೀವರಾಶಿಯ ಅಸ್ತಿತ್ವಕ್ಕೆ ಮೂಲಾಧಾರ ನೀರು. ನೀರಿಲ್ಲದ ಬದುಕು ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರೆ, ನೀರನ್ನು ಆಧರಿಸಿದ ರಾಸಾಯನಿಕ ಪ್ರಕ್ರಿಯೆಗಳನ್ನು ಮೀರಿ ಬದುಕು ಹುಟ್ಟಿಕೊಳ್ಳಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಚರ್ಚೆ ಆರಂಭಿಸಿದ್ದಾರೆ. ಈ ಚರ್ಚೆಗೆ ಮುನ್ನುಡಿ ಬರೆದಿರುವುದು ಶನಿ ಗ್ರಹದ ಎರಡನೇ ಅತಿ ದೊಡ್ಡ ಉಪಗ್ರಹವಾಗಿರುವ ಟೈಟಾನ್‌!

ಭೂಮಿಯ ನಂತರ ಜೀವ ಸಂಕುಲದ ಸೃಷ್ಟಿ ಮತ್ತು ಉಳಿವಿಗೆ ಒಂದಿಷ್ಟು ಪೂರಕ ವಾತಾವರಣ ಇದೆ ಎಂದಾದರೆ ಅದು ಗುರು ಗ್ರಹದ ಉಪಗ್ರಹವಾದ ಯುರೋಪಾ ಮತ್ತು ಶನಿಯ 'ಚಂದ್ರ'ನಲ್ಲಿ ಎಂದು ಬಹು ಹಿಂದಿನಿಂದಲೇ ನಂಬಲಾಗಿದೆ. ಇದೀಗ ಖಗೋಳ ಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಟೈಟಾನ್‌ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, ಅಲ್ಲಿನ ರಾಸಾಯನಿಕ ಸಮ್ಮಿಶ್ರಣ ಜೀವರಾಶಿಯನ್ನು ಪೋಷಿಸುವ ಶಕ್ತಿಯನ್ನು ಹೊಂದಿದೆ ಎಂಬ ಅಂಶವನ್ನು ಗುರುತಿಸಿದ್ದಾರೆ.

ಟೈಟಾನ್‌ ವಾತಾವರಣದಲ್ಲಿ ಹೇರಳ ಪ್ರಮಾಣದಲ್ಲಿರುವ ಹೈಡ್ರೋಜನ್‌ ಸೈನೆಡ್‌ (ಎಚ್‌ಸಿಎನ್‌)ಜೀವ ಅಸ್ತಿತ್ವದ ಮೂಲ ರಾಸಾಯನಿಕ ಕಣವಾಗುವ ಸಾಧ್ಯತೆಗಳಿವೆ. ಇದು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಪಾಲಿಮರ್‌ಗಳೆಂಬ ದೀರ್ಘ ಸರಪಳಿಯನ್ನು ಸೃಷ್ಟಿಸಬಲ್ಲುದು. ಅದರಲ್ಲೊಂದು ಪಾಲಿಇಮೈನ್‌ ಎಂದು ಈ ಹಿಂದಿನ ಸಂಶೋಧನೆಗಳು ತಿಳಿಸಿದ್ದವು.

ಇದೀಗ ನಾಸಾದ ಕ್ಯಾಸಿನಿ ಮತ್ತು ಹ್ಯೂಗೆನ್ಸ್‌ ಮಿಷನ್‌ಗಳಿಂದ ಪಡೆದ ಮಾಹಿತಿ ಹಾಗೂ ಕಂಪ್ಯೂಟರ್‌ ಮಾಡೆಲ್‌ಗಳನ್ನು ಬಳಸಿ ನಡೆಸಿದ ಅಧ್ಯಯನದಲ್ಲಿ, ಟೈಟಾನ್‌ನಂಥ ಅತಿ ಶೀತ ವಾತಾವರಣದಲ್ಲಿ ಪಾಲಿಇಮೈನ್‌ ಸೂರ್ಯನ ಕಿರಣಗಳನ್ನು ಆವಾಹಿಸಿಕೊಂಡು ಜೀವ ಸೃಷ್ಟಿಯ ವೇಗವರ್ಧಕವಾಗಿ ಕೆಲಸ ಮಾಡಬಲ್ಲುದು ಎಂದು ತಿಳಿದುಬಂದಿದೆ.

ಈ ಬಗೆಗಿನ ಮಾಹಿತಿಗಳು ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಂಚಿಕೆಯಲ್ಲಿ ಪ್ರಕಟವಾಗಿವೆ. ಈ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಟೈಟಾನ್‌ ಮತ್ತು ಭೂಮಿ ನಡುವೆ ಹಲವು ಸಾಮ್ಯತೆಗಳೂ ಇವೆ. ಇಲ್ಲಿ ಸದ್ಯಕ್ಕೆ ಬದುಕಿನ ವಾತಾವರಣ ಇಲ್ಲವಾದರೂ ಭೂಮಿಯಂತೆಯೇ ಸರೋವರ, ನದಿಗಳು ಮತ್ತು ಸಮುದ್ರಗಳಂಥ ರಚನೆಗಳೂ ಇವೆ. ಆದರೆ, ಅಲ್ಲಿ ನೀರಿಲ್ಲ.

ಹೈಡ್ರೋಜನ್‌ ಸೈನೆಡ್‌ ಹುಟ್ಟೋದು ಹೇಗೆ?

ಟೈಟಾನ್‌ ವಾತಾವರಣ ಅತ್ಯಂತ ಶೀತಲ. ಇಲ್ಲಿ ನೀರಿಲ್ಲ. ಬದಲಾಗಿ ದ್ರವರೂಪದ ಮಿಥೇನ್‌ ಮತ್ತು ಇಥೇನ್‌ ತುಂಬಿದೆ. ದಟ್ಟ ಹಳದಿ ವಾತಾವರಣದಲ್ಲಿ ಸಾರಜನಕ ಮತ್ತು ಮಿಥೇನ್‌ ದೊಡ್ಡ ಪ್ರಮಾಣದಲ್ಲಿದೆ. ಈ ವಿಷಕಾರಿ ವಾತಾವರಣಕ್ಕೆ ಸೂರ್ಯನ ಬೆಳಕು ಬಿದ್ದಾಗ ಸೃಷ್ಟಿಯಾಗೋದೇ ಹೈಡ್ರೋಜನ್‌ ಸೈನೆಡ್‌.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>