Quantcast
Channel: VijayKarnataka
Viewing all articles
Browse latest Browse all 6795

ಜಾಕೀರ್‌ ನಾಯ್ಕ್‌ ವಿರುದ್ಧ ಕ್ರಮ: ವೆಂಕಯ್ಯ ಸುಳಿವು

$
0
0

ಮುಂಬಯಿ: ಬಾಂಗ್ಲಾದೇಶದ ಆರ್ಟಿಸನ್‌ ಬೇಕರಿಯಲ್ಲಿ ನರಮೇಧ ನಡೆಸಿದ ಐಸಿಸ್‌ ಉಗ್ರರು ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್‌ ನಾಯ್ಕ್‌ ಭಾಷಣಗಳಿಂದ ಪ್ರೇರಿತರಾಗಿದ್ದರು ಎಂಬ ವರದಿ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಜಾಕೀರ್‌ ಭಾಷಣಗಳು ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹವಾಗಿದೆ. ಈ ಬಗ್ಗೆ ಗೃಹ ಸಚಿವಾಲಯ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಧರ್ಮ ಪ್ರಚಾರಕರ ಕಚೇರಿಗೆ ಪೊಲೀಸ್‌ ಕಾವಲು

ಈ ಮಧ್ಯೆ ಜಾಕೀರ್‌ ನಾಯ್ಕ್‌ ಅವರ ಮುಂಬಯಿ ಸಂಸ್ಥೆ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಹಿರಿಯ ಮುಂಬಯಿ ಪೊಲೀಸ್‌ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಡೋಂಗ್ರಿ ಪ್ರದೇಶದಲ್ಲಿರುವ ನಾಯ್ಕ್‌ನ 'ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಶನ್‌'ಗೆ ಭದ್ರತೆ ಒದಗಿಸಲಾಗಿದೆ.

''ನಮಗೆ ಯಾವುದೇ ಬೆದರಿಕೆ ಇರುವ ಬಗ್ಗೆ ಮಾಹಿತಿ ದೊರೆತಿಲ್ಲ. ಕೇಂದ್ರ ಇಲ್ಲವೇ ರಾಜ್ಯ ಸರಕಾರಗಳೂ ಈ ಬಗ್ಗೆ ಸೂಚನೆ ನೀಡಿಲ್ಲ. ಆದರೆ, ಸಂಭಾವ್ಯ ದುರ್ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ,'' ಎಂದು ಅವರು ತಿಳಿಸಿದ್ದಾರೆ.

ಬುಧವಾರವಷ್ಟೇ ಜಾಕೀರ್‌ ಮೇಲೆ ಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಕಿರಣ್‌ ರಿಜಿಜು ಸೂಚನೆ ನೀಡಿದ್ದರು. ಇದು ಕಾನೂನಿನ ವಿಷಯವಾಗಿದ್ದು, ಸಂಬಂಧಿಸಿದ ಏಜೆನ್ಸಿಗಳು ಕ್ರಮ ಕೈಗೊಳ್ಳುತ್ತವೆ ಎಂದಿದ್ದರು.

ಅಲ್ಲದೆ, ಶಿವಸೇನೆಯ ಸಂಸದ ಅರವಿಂದ್‌ ಸಾವಂತ್‌ ಕೂಡಾ ತಾವು ಗೃಹ ಸಚಿವಾಲಯಕ್ಕೆ ಪತ್ರ ಬರೆದು, ದೇಶದ ಹಿತದೃಷ್ಟಿಯಿಂದ ಜಾಕೀರ್‌ ಹಾಗೂ ಆತನ ಸಂಸ್ಥೆಯ ಮೇಲೆ ನಿಷೇಧ ಹೇರಬೇಕೆಂದು ಕೋರಿದ್ದಾಗಿ ಹೇಳಿದ್ದರು.

ಬಾಂಗ್ಲಾದಲ್ಲಿ ಪೀಸ್‌ ಟಿವಿಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ಜಾಕೀರ್‌ರ ಭಾಷಣ ಇಸ್ಲಾಂ ಹೊರತುಪಡಿಸಿ ಅನ್ಯಧರ್ಮಗಳ ಮೇಲೆ ಸದಾ ವಿಷ ಕಾರುವಂತಿರುತ್ತದೆ. ಒಮ್ಮೆ ಧರ್ಮರಕ್ಷ ಣೆಗಾಗಿ ''ಎಲ್ಲ ಮುಸ್ಲಿಮರೂ ಉಗ್ರವಾದದ ದಾರಿ ಹಿಡಿಯಬೇಕು,'' ಎಂದು ಅವರು ಕರೆ ನೀಡಿದ್ದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>