Quantcast
Channel: VijayKarnataka
Viewing all articles
Browse latest Browse all 6795

ನಾನಿ ಚಿತ್ರ ವಿಮರ್ಶೆ: ನಾನಿಯಲ್ಲಿ ಹೆದರುವುದೇನಿಲ್ಲ

$
0
0

ಚಿತ್ರ: ನಾನಿ (ಕನ್ನಡ)

-ಪದ್ಮಾ ಶಿವಮೊಗ್ಗ

ಗುಜರಾತ್‌ನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ್ದು ಎಂದು ಹೇಳಲಾಗಿರುವ ಚಿತ್ರ 'ನಾನಿ'. 1997ರಲ್ಲಿ ಟೆಸ್ಟ್‌ ಟ್ಯೂಬ್‌ ಬೇಬಿ ನಾನಿಯ ಸಾವಿನ ನಂತರ ಆ ದೊಡ್ಡ ಬಂಗಲೆಯಲ್ಲಿ ಆತ್ಮ ಸುಳಿದಾಡುತ್ತಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲು ಪ್ರಯತ್ನಿಸಿರುವ ನಿರ್ದೇಶಕ ಸುಮಂತ್‌ ಕ್ರಿಯೇಟ್‌ ಮಾಡಿದ್ದ ಹೈಪ್‌, ಟುಸ್‌ ಎಂದಿದೆ. ನೋಡುಗರನ್ನು ಡಿಸ್ಟರ್ಬ್‌ ಮಾಡುವ ಕರುಣಾಜನಕ ಕತೆಯನ್ನು ಸಮರ್ಥವಾಗಿ ತೆರೆಗೆ ತರುವಲ್ಲಿ ವಿಫಲರಾಗಿದ್ದಾರೆ.

ಚಿತ್ರದ ನಾಯಕ ಮನೀಶ್‌ ಭಾವುಕತೆಯ ಕಾರಣಕ್ಕೆ ತನ್ನ ಪೂರ್ವಜರು ಕಟ್ಟಿದ್ದ ಮನೆಯನ್ನು ಪುನಃ ಖರೀದಿಸಿ ಪತ್ನಿ ಮಂತ್ರ (ಪ್ರಿಯಾಂಕಾ ರಾವ್‌) ಜತೆ ವಾಸ ಮಾಡಲು ಪ್ರಾರಂಭಿಸುತ್ತಾನೆ. ಮನೆಯಲ್ಲಿ ವಿಚಿತ್ರ ಘಟನೆಗಳು ಅವರ ಅನುಭವಕ್ಕೆ ಬರುತ್ತವೆ. ಇದು ದೆವ್ವದ ಕಾಟ ಎಂದು ತಿಳಿದು ಶಾಂತಿ ಮಾಡಿಸಲು ಮಂತ್ರವಾದಿಯನ್ನು ಕರೆಸುತ್ತಾರೆ. ಆಗ ಆ ಮನೆಯಲ್ಲಿ ಮೊದಲು ಕೆಲಸ ಮಾಡಿಕೊಂಡಿದ್ದ ವ್ಯಕ್ತಿ, ದೆವ್ವ ಯಾರು? ಏನಾಗಿತ್ತು ಎನ್ನುವ ಕತೆಯನ್ನು ಹೇಳುತ್ತಾನೆ. ಫ್ಲಾಶ್‌ ಬ್ಯಾಕ್‌ನಲ್ಲಿ 17 ವರ್ಷಗಳ ಹಿಂದೆ ಆ ಮನೆಯಲ್ಲಿ ವಾಸವಿದ್ದ ಜೈಜಗದೀಶ್‌ ಮತ್ತು ಸುಹಾಸಿನಿ, ಬೇಬಿ ಸುಹಾಸಿನಿ ಕತೆ ಹೇಳಲಾಗುತ್ತದೆ. ಸುರಕ್ಷಾ (ಸುಹಾಸಿನಿ)ಮತ್ತು ಆಕೆಯ ಗಂಡ (ಜೈಜಗದೀಶ್‌)ಗೆ ಟೆಸ್ಟ್‌ ಟ್ಯೂಬ್‌ನಿಂದ ಹುಟ್ಟಿದ ಮಗಳು ನಾನಿ (ಬೇಬಿ ಸುಹಾಸಿನಿ). ಟೆಸ್ಟ್‌ಟ್ಯೂಬ್‌ ಬೇಬಿ ಎಂಬ ಕಾರಣಕ್ಕೇ ನಿರ್ಲಕ್ಷ್ಯಕ್ಕೊಳಗಾಗುವ ನಾನಿ ದಾರುಣವಾಗಿ ಸಾಯುತ್ತಾಳೆ. ಇದು ಹೇಗೆ ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬಹುದು. ಆದರೆ, ಮನಕಲಕುವ ಕತೆಯನ್ನು ಸರಿಯಾಗಿ ತೆರೆಯ ಮೇಲೆ ತರುವಲ್ಲಿ ನಿರ್ದೇಶಕರ ಅಸಾಮರ್ಥ್ಯ‌ ಎದ್ದುಕಾಣುತ್ತದೆ. ಮೊದಲರ್ಧ ದೆವ್ವದ ಕಾಟಗಳನ್ನು ತೋರಿಸುವುದರಲ್ಲೇ ಕಳೆದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ನಿಜವಾದ ಕತೆ ಪ್ರಾರಂಭವಾಗುವುದು. ಎಲ್ಲ ವಿಭಾಗಗಳಲ್ಲಿ ತಾಂತ್ರಿಕತೆ ದುರ್ಬಲವಾಗಿದೆ. ಹಾರರ್‌ ಅಂತ ಹೆದರಿಕೊಳ್ಳಲು ಚಿತ್ರದಲ್ಲಿ ಏನೂ ಇಲ್ಲ. ಅಬ್ಬರದ ಸಂಗೀತಕ್ಕೆ ಬೆಚ್ಚಿ ಬೀಳಬೇಕಷ್ಟೆ. ಎಷ್ಟೋ ಕಡೆ ಡೈಲಾಗ್‌ ಕೇಳಿಸುವುದೇ ಇಲ್ಲ. ಬೇಬಿ ಸುಹಾಸಿನಿ ನಟನೆಯನ್ನು ಹೊರತು ಪಡಿಸಿ ಉಳಿದವರ ಬಗ್ಗೆ ಹೇಳಲು ಏನೂ ಇಲ್ಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>