ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ನಿರಾಕರಿಸಿದ್ದಾರೆ. ಈ ಸಂಬಂಧ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಶೀಲಾ ದೀಕ್ಷಿತ್, '' ನಾನು ಸಿಎಂ ಅಭ್ಯರ್ಥಿ ಅಲ್ಲ. ಅದರ ಆಕಾಂಕ್ಷೆಯೂ ನನಗಿಲ್ಲ. ಪಕ್ಷದ ಚುನಾವಣೆ ಉಸ್ತುವಾರಿಯನ್ನು ವರಿಷ್ಠರು ನನಗೆ ವಹಿಸಿದ್ದು, ಅಷ್ಟನ್ನೇ ನಾನು ನಿರ್ವಹಿಸುತ್ತೇನೆ,'' ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಇಲ್ಲವೇ ರಾಹುಲ್ ಗಾಂಧಿ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕು. ಅದು ಸಾಧ್ಯವಾಗದಿದ್ದರೆ, ಯಾರಾದರೂ ಬ್ರಾಹ್ಮಣ ಅಭ್ಯರ್ಥಿಯನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂದು ಪಕ್ಷದ ಚುನಾವಣೆ ತಂತ್ರಗಾರ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರು. ಅದರ ಅನ್ವಯ ಶೀಲಾ ದೀಕ್ಷಿತ್ ಅವರನ್ನು ಮುಂದೆ ಬಿಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವದಂತಿಗಳಿಗೆ ಸ್ವತಃ ದೀಕ್ಷಿತ್ ಅವರೇ ತೆರೆ ಎಳೆದಿದ್ದಾರೆ.
↧
ಸಿಎಂ ಅಭ್ಯರ್ಥಿಯಾಗಲು ಒಲ್ಲೆ ಎಂದ ಶೀಲಾ ದೀಕ್ಷಿತ್
↧