Quantcast
Channel: VijayKarnataka
Viewing all articles
Browse latest Browse all 6795

ಇಂದಿನಿಂದ 'ಲಕ್ಷ್ಮಣ' ರಾಜ್ಯ

$
0
0

* ಶರಣು ಹುಲ್ಲೂರು

ಕನ್ನಡ ಸಿನಿಮಾ ರಂಗದಲ್ಲೀಗ 'ಲಕ್ಷ್ಮಣ' ಚಿತ್ರದ್ದೇ ಮಾತು. ನಾನಾ ಕಾರಣಗಳಿಂದಾಗಿ ಚಿತ್ರ ನಿರೀಕ್ಷೆ ಮೂಡಿಸಿದೆ. ಅಲ್ಲದೇ ರಿಲೀಸ್‌ಗೂ ಒಂದು ದಿನ ಮುಂಚೆಯೇ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ಔಟ್‌ ಆಗಿವೆಯಂತೆ. ಹೀಗಾಗಿ ಸಿನಿಮಾ ತಂಡ ಗೆಲುವಿನ ನಗೆ ಬೀರಿದೆ.

ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಚಿತ್ರವಿದು. ಈ ಸಿನಿಮಾದ ಮೂಲಕ ಅನೂಪ್‌ ರೇವಣ್ಣ ಸ್ಯಾಂಡಲ್‌ವುಡ್‌ಗೆ ಪರಿಚಯಿಸಲ್ಪಡುತ್ತಿದ್ದಾರೆ. ಹೀಗಾಗಿ ಇವರನ್ನು ಹೊಸ ರೀತಿಯಲ್ಲೇ ನಿರ್ದೇಶಕ ಆರ್‌.ಚಂದ್ರು ಪರಿಚಯಿಸುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಕ್ಷ್ಮಣ ರಿಲೀಸ್‌ ಆಗುತ್ತಿದ್ದು, ಈ ಚಿತ್ರವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಅನ್ನುವುದಕ್ಕೆ ನಿರ್ದೇಶಕರು ಹಲವು ಕಾರಣಗಳನ್ನು ಕೊಟ್ಟಿದ್ದಾರೆ.

'ಪಕ್ಕಾ ಎಂಟರ್‌ಟೇನರ್‌ ಚಿತ್ರವಿದು. ಇಡೀ ಕುಟುಂಬ ಕೂತು ನೋಡುವಂತಹ ಸನ್ನಿವೇಶಗಳು ಸಿನಿಮಾದಲ್ಲಿವೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಆ್ಯಕ್ಷನ್‌ ಸ್ಟಾರ್‌ ಬರುತ್ತಿದ್ದಾನೆ. ಜತೆಗೆ ಅನುಭವಿ ಕಲಾವಿದರೇ ಸಿನಿಮಾದಲ್ಲಿದ್ದಾರೆ. ಹೀಗಾಗಿ ಚಿತ್ರ ಖಂಡಿತ ಪ್ರೇಕ್ಷಕರ ಮನ ಗೆಲ್ಲಲಿದೆ' ಅಂತಾರೆ ಚಂದ್ರು.

ತಾಜ್‌ಮಹಲ್‌, ಚಾರ್‌ಮಿನಾರ್‌, ಮೈಲಾರಿ ಹೀಗೆ ಈವರೆಗೂ ಹಿಟ್‌ ಚಿತ್ರಗಳನ್ನೇ ಕೊಟ್ಟಿರುವ ನಿರ್ದೇಶಕ ಚಂದ್ರು, ಇದೇ ಮೊದಲ ಬಾರಿಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಜತೆ ಕೆಲಸ ಮಾಡಿದ್ದಾರೆ. ತುಂಬಾ ವರ್ಷಗಳ ನಂತರ ರವಿಚಂದ್ರನ್‌, ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ 'ಬಾಹುಬಲಿ' ಸಿನಿಮಾದ ಕಾಲಕೇಯ ಪಾತ್ರಧಾರಿ ಪ್ರಭಾಕರ್‌ ಕೂಡ ಲಕ್ಷ್ಮಣ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ಹೀಗಾಗಿ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

'ಅನೂಪ್‌ ಹೊಸ ಹುಡುಗನಾದರೂ, ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ನೋಡಿದವರು ಅವರನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಮತ್ತೊಂದು ಚಿತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದಾರೆ. ಅನೂಪ್‌ ಕೂಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗಾಗಿ ಭರವಸೆಯ ನಟನಾಗಿ ಉಳಿಯುತ್ತಾರೆ. ನಾಯಕಿ ಮೇಘನಾ ರಾಜ್‌ ಕೂಡ ಚೆನ್ನಾಗಿ ನಟಿಸಿದ್ದಾರೆ. ಈ ಜೋಡಿ ಎಲ್ಲರ ಹೃದಯದಲ್ಲಿ ಉಳಿಯುತ್ತದೆ' ಅನ್ನುವುದು ನಿರ್ದೇಶಕರ ಮಾತು.

ವಿದೇಶದಲ್ಲೂ ಚಿತ್ರವನ್ನು ರಿಲೀಸ್‌ ಮಾಡುತ್ತಿದ್ದಾರೆ ನಿರ್ದೇಶಕರು. ಸಾಯಿರಂಗ ಎಂಟರ್‌ಪ್ರೈಸಸ್‌ ಲಾಂಛನದಲ್ಲಿ ಸಿನಿಮಾ ಮೂಡಿ ಬಂದಿದ್ದು, ವತ್ಸಲಾ ರೇವಣ್ಣ ನಿರ್ಮಾಪಕರು.

-----

ಈ ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಆ್ಯಕ್ಷನ್‌ ಸ್ಟಾರ್‌ ಬರುತ್ತಿದ್ದಾನೆ. ಜತೆಗೆ ಇಡೀ ಕುಟುಂಬ ಕೂತು ನೋಡುವಂತಹ ಸನ್ನಿವೇಶಗಳು ಸಿನಿಮಾದಲ್ಲಿವೆ. ಹೀಗಾಗಿ ಚಿತ್ರ ಖಂಡಿತ ಪ್ರೇಕ್ಷಕರ ಮನ ಗೆಲ್ಲಲಿದೆ.

-ಆರ್‌.ಚಂದ್ರು, ನಿರ್ದೇಶಕ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>