Quantcast
Channel: VijayKarnataka
Viewing all articles
Browse latest Browse all 6795

ಕನ್ನಡದಲ್ಲೂ ಬಾಹುಬಲಿ ಕಾಲಕೇಯನ ಆರ್ಭಟ

$
0
0

* ಶರಣು ಹುಲ್ಲೂರು

ರಾಜಮೌಳಿ ಅವರ 'ಬಾಹುಬಲಿ' ಚಿತ್ರದಲ್ಲಿ ನಾಯಕನಿಗಿಂತಲೂ ಹೆಚ್ಚು ಫೇಮಸ್‌ ಆದವರು ಕಾಲಕೇಯ ಪಾತ್ರಧಾರಿ ಪ್ರಭಾಕರ್‌. ಕಿಲಿಕಿ ಭಾಷೆಯಲ್ಲಿ ತಮ್ಮ ಖದರ್‌ ತೋರಿಸಿದ್ದ ಇವರು, ಈಗ ಆರ್‌.ಚಂದ್ರು ನಿರ್ದೇಶನದ ಲಕ್ಷ್ಮಣ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್‌ ಪವರ್‌ಫುಲ್‌ ಪಾತ್ರ ನಿರ್ವಹಿಸಿದ್ದಾರೆ.

'ಆಗಿನ್ನೂ ನಾನು ಬಾಹುಬಲಿ ಸಿನಿಮಾದಲ್ಲಿ ನಟಿಸಿರಲಿಲ್ಲ. ನಿರ್ದೇಶಕ ಚಂದ್ರು 'ಕೋ ಕೋ' ಸಿನಿಮಾ ಮಾಡುತ್ತಿದ್ದರು. ಆಗ ನನಗೆ ಪಾತ್ರ ಕೊಟ್ಟು, ಕನ್ನಡ ಜನತೆಗೆ ಪರಿಚಯಿಸಿದರು. ಹೀಗಾಗಿ ನಾನು ರಾಜಮೌಳಿಯಷ್ಟೇ ಚಂದ್ರು ಅವರನ್ನೂ ಗೌರವಿಸುತ್ತೇನೆ' ಅನ್ನುವುದು ಪ್ರಭಾಕರ್‌ ಮಾತು.

ಲಕ್ಷ್ಮಣ ಸಿನಿಮಾದಲ್ಲಿ ಪ್ರಭಾಕರ್‌ ಅವರದ್ದು ನೆಗೆಟಿವ್‌ ರೋಲ್‌. ನಾಯಕನೆದುರಿಗೆ ಸಮರ್ಥವಾಗಿ ನಿಲ್ಲುವಂತಹ ಖಳನಾಯಕ ಬೇಕಾಗಿದ್ದರಿಂದ, ಬಾಹುಬಲಿಯ ಕಾಲಕೇಯನನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ಚಂದ್ರು.

'ಬಾಹುಬಲಿ ಶೂಟಿಂಗ್‌ ಟೈಮ್‌ನಲ್ಲೇ ಚಂದ್ರು ನನಗೆ ಕಾಲ್‌ ಮಾಡಿದರು. ಪಾತ್ರದ ಬಗ್ಗೆ ವಿವರಿಸಿದರು. ಬಾಹುಬಲಿ ಶೂಟಿಂಗ್‌ ಮಧ್ಯೆಯೂ ಬಿಡುವು ಮಾಡಿಕೊಂಡು ಲಕ್ಷ್ಮಣ ಚಿತ್ರಕ್ಕೆ ಡೇಟ್‌ ಕೊಟ್ಟೆ. ಪಾತ್ರ ತುಂಬಾ ಚೆನ್ನಾಗಿದೆ. ಖಂಡಿತಾ ಕನ್ನಡದ ಪ್ರೇಕ್ಷಕರಿಗೆ ಕ್ಯಾರೆಕ್ಟರ್‌ ಇಷ್ಟವಾಗಲಿದೆ' ಅಂತಾರೆ ಪ್ರಭಾಕರ್‌.

ಹೇಳಿ ಕೇಳಿ ಅದು ರೌಡಿಯೊಬ್ಬನ ಪಾತ್ರ. ಕೊರಳು ಮತ್ತು ಕೈ ತುಂಬಾ ಬಂಗಾರ ಧರಿಸಿ ಶೋಕಿ ಮಾಡುವ ಕ್ಯಾರೆಕ್ಟರ್‌ ಅದು. ಅಬ್ಬರಕ್ಕೆ ನಾಯಕನೇ ನಡುಗಿ ಹೋಗಬೇಕು. ಅಂತಹ ಪಾತ್ರವನ್ನು ಪ್ರಭಾಕರ್‌ ಇಲ್ಲಿ ಪೋಷಿಸಿದ್ದಾರೆ.

ಈ ಪಾತ್ರದ ಬಹುತೇಕ ಶೂಟಿಂಗ್‌ ಬೆಂಗಳೂರಿನಲ್ಲೇ ನಡೆದಿದೆ. ಪ್ರಭಾಕರ್‌ಗೆ ಬೆಂಗಳೂರು ಹೊಸತಲ್ಲವಾದರೂ, ಪ್ರತಿ ಬಾರಿಯೂ ಖುಷಿ ಕೊಡುತ್ತದೆಯಂತೆ. ಹೀಗಾಗಿ ಶೂಟಿಂಗ್‌ಗೆ ಅಂತ ಬೆಂಗಳೂರಿಗೆ ಬಂದಾಗ, ರೌಂಡ್‌ ಹೊಡೆಯದೇ ಹೋಗಲ್ಲವಂತೆ.

ಜೂ.24ರಂದು ಲಕ್ಷ್ಮಣ ಸಿನಿಮಾ ತೆರೆ ಕಾಣುತ್ತಿದೆ. ಅನೂಪ್‌ ರೇವಣ್ಣ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯ ಆಗುತ್ತಿದ್ದು, ರಿಲೀಸ್‌ಗೆ ಮುನ್ನವೇ ಚಿತ್ರ ಡಿಮಾಂಡ್‌ ಕ್ರಿಯೇಟ್‌ ಮಾಡಿದೆ. ಅಲ್ಲದೇ, ತುಂಬಾ ವರ್ಷಗಳ ನಂತರ ರವಿಚಂದ್ರನ್‌, ಈ ಚಿತ್ರದಲ್ಲಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

-----

ಬಾಹುಬಲಿ ಶೂಟಿಂಗ್‌ನಲ್ಲಿರುವಾಗಲೇ ಬಿಡುವು ಮಾಡಿಕೊಂಡು ಲಕ್ಷ್ಮಣ ಚಿತ್ರಕ್ಕೆ ಡೇಟ್‌ ಕೊಟ್ಟೆ. ಪಾತ್ರ ತುಂಬಾ ಚೆನ್ನಾಗಿದೆ. ಖಂಡಿತಾ ಕನ್ನಡದ ಪ್ರೇಕ್ಷಕರಿಗೆ ಕ್ಯಾರೆಕ್ಟರ್‌ ಇಷ್ಟವಾಗಲಿದೆ.

* ಪ್ರಭಾಕರ್


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>