Quantcast
Channel: VijayKarnataka
Viewing all articles
Browse latest Browse all 6795

ಅಂಬಿ ಪರ ನಿಂತ ಸ್ಯಾಂಡಲ್‌ವುಡ್‌

$
0
0

- ಪದ್ಮಾ ಶಿವಮೊಗ್ಗ

ಬೆಂಗಳೂರು: ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ನಿರೀಕ್ಷೆಯಂತೆ ಚಿತ್ರರಂಗದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಡೆಯನ್ನು ಮಂಡ್ಯ ಜನರಂತೆ ಚಿತ್ರರಂಗವೂ ವಿರೋಧಿಸಿದೆ.

ಸ್ಯಾಂಡಲ್‌ವುಡ್‌‌ನ ಅನೇಕ ನಟ-ನಟಿಯರು, ಇತರೆ ಕಲಾವಿದರು ಸಂಪುಟದಿಂದ ಅಂಬಿಯನ್ನು ಕೈ ಬಿಟ್ಟ ಕಾಂಗ್ರೆಸ್‌ ನಿಲುವನ್ನು ಖಂಡಿಸಿದ್ದಾರೆ. ಜತೆಗೆ, ಇಡೀ ಚಿತ್ರರಂಗದಲ್ಲಿ ನೀರವ ಮೌನ ಆವರಿಸಿದ್ದು, ಅಂಬಿ ಪರವಾಗಿ ಗಾಂಧಿನಗರದ ಎಲ್ಲಾ ಚಟುವಟಿಕೆಗಳೂ ಸ್ತಬ್ಧವಾಗಿವೆ.

ಯಶ್‌ ಅಭಿನಯದ ಚಿತ್ರವೊಂದು ಸೇರಿ ಕೆಲವು ಚಿತ್ರಗಳ ಶೂಟಿಂಗ್‌ ಅನ್ನು ನಿಲ್ಲಿಸಲಾಗಿದೆ. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ', ನಟರಾದ ರಕ್ಷಿತ್‌ ಶೆಟ್ಟಿ, ಆದಿತ್ಯ, ನಿರ್ಮಾಪಕ ಕೆ. ಮಂಜು ಮತ್ತಿತರರು ಸೋಮವಾರ ಚಿತ್ರೀಕರಣವನ್ನು ಸ್ಥಗಿತಗೊಳಿಸಿದರು.

ಪಕ್ಷಬೇಧ ಮರೆತು ನಟಿ ತಾರಾ, ನಿರ್ಮಾಪಕಿ ರಕ್ಷಿತಾ, ನಟ ಪ್ರೇಮ್‌, ಜಗ್ಗೇಶ್‌ ಮುಖ್ಯಮಂತ್ರಿಯ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಬೇಧ ಮರೆತು ಇಡೀ ಸ್ಯಾಂಡಲ್‌ವುಡ್ ಅಂಬಿ ಬೆಂಬಲಕ್ಕೆ ನಿಂತಿದೆ.

ಸಂಚಲನ ಮೂಡಿಸಿದ ಜಗ್ಗೇಶ್ ಟ್ವೀಟ್

'ಅಂಬಿಯನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದರ ಹಿಂದೆ ಹೆಣ್ಣೊಬ್ಬರು ಕೈವಾಡವಿದೆ,' ಎಂದು ಜಗ್ಗೇಶ್‌ ಟ್ವೀಟ್‌ ಮಾಡಿರುವುದು ಗಾಂಧಿನಗರದಲ್ಲಿ ತೀವ್ರ ಸಂಚಲನ ಹುಟ್ಟು ಹಾಕಿದೆ. ಆಕ್ರೋಶಿತ ಅಂಬಿ ಅಭಿಮಾನಿಗಳು ಹೋರಾಟಕ್ಕಿಳಿದ ಬೆನ್ನಲ್ಲೇ ಜಗ್ಗೇಶ್‌ ಟ್ವೀಟ್‌ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ. ಆ ಹೆಣ್ಣು ಯಾರು ಎಂಬ ಬಗ್ಗೆ ಊಹಾಪೋಹಗಳ ಸುನಾಮಿಯೇ ಎದ್ದಿದೆ.

'ಆ ಹೆಣ್ಣಿನ ಬಗ್ಗೆ ಎಚ್ಚರವಾಗಿರಿ ಎಂದು 2015ರಲ್ಲೇ ನಾನು ಮೈಸೂರಿನ ಸಂದೇಶ್‌ ಹೋಟೆಲ್‌ನಲ್ಲಿ ಹೇಳಿದ್ದೆ. ಆವತ್ತು ಅಂಬಿ ನನ್ನ ಮಾತನ್ನು ಹಗುರವಾಗಿ ಪರಿಗಣಿಸಿದರು. ಇದೀಗ ಅದು ನಿಜವಾಗಿದೆ' ಎಂದು ಜಗ್ಗೇಶ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್‌ ಬಾಲಿಷವಾಗಿ ನಡೆದುಕೊಂಡಿದೆ ಎಂದು ಟೀಕಿಸಿದ್ದಾರೆ. ಈಗಾಗಲೇ ಚಿತ್ರರಂಗದ ಹಲವರು ಧರಣಿ ನಡೆಸುತ್ತಿದ್ದಾರೆ.

ಅಂಬಿ ಅವರನ್ನು ಕೈಬಿಟ್ಟ ಬಗ್ಗೆ ಬೇಸರವಿದೆ. ನಾನೊಬ್ಬ ಕಲಾವಿದೆಯಾಗಿ ಹೇಳುತ್ತಿಲ್ಲ. ನಾನು ಚಿತ್ರರಂಗಕ್ಕೆ ಬಂದಾಗ ಅವರು ನಮ್ಮ ಮನೆಗೆ ಬಂದಿದ್ದರು. ಆಗ ನನಗೆ ಸಾವಿರ ರೂಪಾಯಿ ನೋಟಿನ ಮೇಲೆ ಸಹಿ ಮಾಡಿ ಕೊಟ್ಟಿದ್ದರು. ಈಗಲೂ ನಾನು ಅದನ್ನು ಇಟ್ಟುಕೊಂಡಿದ್ದೇನೆ. ಅವರ ಆಶೀರ್ವಾದ ನನ್ನ ಮೇಲಿದೆ. ಅವರು ಮಂಡ್ಯದ ಜನರ ಪ್ರೀತಿಯನ್ನು ಗಳಿಸಿದ್ದಾರೆ.

- ರಕ್ಷಿತಾ, ನಟಿ, ನಿರ್ಮಾಪಕಿ

ಕಾಂಗ್ರೆಸ್‌ ಸರ್ಕಾರ ಚಿತ್ರರಂಗದ ಇಬ್ಬರಿಗೆ ತನ್ನ ಸಚಿವ ಸಂಪುಟದಲ್ಲಿ ಸ್ಥಾನ ನೀಡಿತ್ತು. ಇದು ಚಿತ್ರರಂಗದವಳಾಗಿ ನನಗೆ ಬಹಳ ಸಂತೋಷ ಕೊಟ್ಟ ವಿಚಾರ. ಇನ್ನು ಅವರನ್ನು ಉಳಿಸಿಕೊಳ್ಳುವುದು ಬಿಟ್ಟಿರುವುದು ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಸೇರಿದ್ದು.

-ತಾರಾ, ನಟಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>