Quantcast
Channel: VijayKarnataka
Viewing all articles
Browse latest Browse all 6795

ಆಕ್ಷ ನ್‌ ಹೀರೋ ಇಮೇಜ್‌ನಲ್ಲಿ ಅನೂಪ್‌ ರೇವಣ್ಣ

$
0
0

ಆರ್‌.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ 'ಲಕ್ಷ್ಮಣ' ಸಿನಿಮಾ ಮೂಲಕ ನಾಯಕರಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ ಅನೂಪ್‌. ಈ ಚಿತ್ರದ ಪಾತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡ ರೀತಿಯೇ ತುಂಬಾ ಇಂಟ್ರಸ್ಟಿಂಗ್‌ ಆಗಿದೆ.

ಲಕ್ಷ್ಮಣ ಸಿನಿಮಾದ ಮೂಲಕ ಅನೂಪ್‌ ರೇವಣ್ಣ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಇವರ ಗ್ರ್ಯಾಂಡ್‌ ಎಂಟ್ರಿಗೆ ದಿನಗಣನೆ ಶುರುವಾಗಿದೆ. ಜೂ.24ರಂದು ತೆರೆ ಕಾಣುತ್ತಿರುವ ಲಕ್ಷ್ಮಣ ಸಿನಿಮಾ ಮತ್ತು ತಾವು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಹೀರೋ ಬಗ್ಗೆ ನಿರ್ದೇಶಕ ಆರ್‌.ಚಂದ್ರು ಮಾತಾಡಿದ್ದಾರೆ. ಜತೆಗೆ ತಮ್ಮ ಪಾತ್ರದ ಬಗ್ಗೆ ಅನೂಪ್‌ ಕೂಡ ಅನುಭವವನ್ನು ಹಂಚಿಕೊಂಡಿದ್ದಾರೆ.

ಅನೂಪ್‌ಗೆ ಇದು ಚೊಚ್ಚಲು ಚಿತ್ರ. ಆದರೆ, ಚಂದ್ರು ನಿರ್ದೇಶನದ ಸಿನಿಮಾ ಆಗಿದ್ದರಿಂದ ಸ್ಟಾರ್‌ ಚಿತ್ರಕ್ಕೆ ಇರಬಹುದಾದ ಎಲ್ಲ ವಿಶೇಷತೆಗಳನ್ನು ಲಕ್ಷ್ಮಣ ಚಿತ್ರ ಒಳಗೊಂಡಿದೆ. ಅನೂಪ್‌ ಕೂಡ ಸಕಲ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾರೆ. ತಮ್ಮ ಸಿನಿಮಾದ ನಾಯಕನ ತಯಾರಿ ಕುರಿತು ಚಂದ್ರು ಹೇಳಿದ್ದು ಹೀಗೆ, 'ಕ್ಯಾರೆಕ್ಟರ್‌ಗೆ ಏನು ಬೇಕೋ ಎಲ್ಲಾ ತರಬೇತಿಯನ್ನೂ ಅನೂಪ್‌ ಪಡೆದಿದ್ದಾರೆ. ಅಲ್ಲದೇ ಸಿನಿಮಾ ಸೆಟ್ಟೇರುವ ಎರಡು ತಿಂಗಳ ಮುಂಚೆಯೇ ಪಾತ್ರಕ್ಕೆ ಏನೆಲ್ಲ ಬೇಕಿತ್ತೋ, ಅವೆಲ್ಲವನ್ನೂ ನಾನೂ ಕೂಡ ಹೇಳಿದ್ದೆ. ಹೀಗಾಗಿ ಡ್ಯಾನ್ಸ್‌ , ಸ್ಟಂಟ್ಸ್‌ನಲ್ಲೂ ಅವರು ಸಲೀಸಾಗಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಪಾತ್ರ ಹೇಗಿರಬೇಕಿತ್ತು ಅಂದುಕೊಂಡಿದ್ದೇನೋ, ಅದಕ್ಕೆ ಅನೂಪ್‌ ನ್ಯಾಯ ಸಲ್ಲಿಸಿದ್ದಾರೆ' ಅಂತಾರೆ.

ಕನ್ನಡದಲ್ಲಿ ಆಕ್ಷನ್‌ ಹೀರೋಗಳು ಕಡಿಮೆ. ಆ ಕೊರತೆಯನ್ನು ಅನೂಪ್‌ ತುಂಬಲಿದ್ದಾರೆ ಅನ್ನುವುದು ಟ್ರೈಲರ್‌ ನೋಡಿದರೆ ಗೊತ್ತಾಗುತ್ತದೆ. ಮೈನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಇವರು ಲೀಲಾಜಾಲವಾಗಿ ಧುಮುಕಿದ್ದಾರೆ. ಸಾಮಾನ್ಯವಾಗಿ ಸಾಹಸ ಸನ್ನಿವೇಶಗಳಲ್ಲಿ ನಾಯಕರಿಗೆ ಡ್ಯೂಪ್‌ ಬಳಸಲಾಗುತ್ತದೆ. ಆದರೆ, ಅನೂಪ್‌ ಯಾವುದೇ ಡ್ಯೂಪ್‌ ಬಳಕೆ ಮಾಡಿಲ್ಲ. ಅದರಲ್ಲೂ ಕ್ಲೈಮ್ಯಾಕ್ಸ್‌ ಸನ್ನಿವೇಶದಲ್ಲಿ ಬೆನ್ನಿಗೆ ಬೆಂಕಿ ಹಚ್ಚಿಕೊಂಡು ಫೈಟ್‌ ಮಾಡಬೇಕಿತ್ತು. ಅಲ್ಲಿಯೂ ಸಹ ಅವರೇ ಆ ಕೆಲಸವನ್ನು ಮಾಡಿ ಅಚ್ಚರಿಗೆ ಕಾರಣವಾಗಿದ್ದಾರೆ.

ಕಠಿಣ ದೃಶ್ಯವೂ ಅನೂಪ್‌ಗೆ ಸಲೀಸಾಗಲು ಕಾರಣ, ನಿರ್ದೇಶಕ ಚಂದ್ರುವಂತೆ. 'ನನ್ನ ಚೊಚ್ಚಲು ಚಿತ್ರಕ್ಕೆ ಚಂದ್ರು ಅವರು ನಿರ್ದೇಶಕರಾಗಿ ಸಿಕ್ಕಿದ್ದು ಒಳ್ಳೆದೇ ಆಯಿತು. ಪ್ರತಿ ಸೀನ್‌ ಅನ್ನೂ ಅವರು ಅರ್ಥ ಮಾಡಿಸುತ್ತಿದ್ದರು. ಹೀಗಾಗಿ ಎಲ್ಲಿಯೂ ಸಮಸ್ಯೆ ಆಗಲಿಲ್ಲ. ಸಿನಿಮಾ ರಂಗಕ್ಕೆ ನಾನು ಹೊಸಬನಾದರೂ, ಸ್ಕ್ರೀನ್‌ ಮೇಲೆ ಅದು ಕಾಣದಂತೆ ನಟನೆ ತೆಗೆಸಿದ್ದಾರೆ. ಎಲ್ಲಿಯೂ ಲೋಪ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. ಸಿನಿಮಾ ರಿಲೀಸ್‌ ಆಗುವ ಮುನ್ನವೇ ನನಗೆ ಸಾಕಷ್ಟು ಆಫರ್‌ ಬರುತ್ತಿವೆ ಅಂದರೆ, ಅದಕ್ಕೆ ಕಾರಣ ನಿರ್ದೇಶಕರ ಶ್ರಮ. ಹೀಗಾಗಿ ನಾನು ಯಾವತ್ತೂ ಚಂದ್ರು ಅವರನ್ನು ಮರೆಯಲ್ಲ' ಅಂತಾರೆ ಅನೂಪ್‌.

ಈ ಕಾಂಬಿನೇಷನ್‌ ಸಖತ್‌ ವರ್ಕೌಟ್‌ ಆಗಿದ್ದರಿಂದ, ನಿರ್ದೇಶಕರು ಅನೂಪ್‌ಗೆ ಆಕ್ಷ ನ್‌ ಹೀರೋ ಇಮೇಜ... ನೀಡಿದ್ದಾರೆ. ಅನೂಪ್‌ ಕೂಡ ಭರ್ಜರಿ ಪರ್ಫಾಮೆನ್ಸ್‌ ಮಾಡಿದ್ದಾರೆ. ಸಾಹಸ ಸನ್ನಿವೇಶಗಳಲ್ಲಿ ಮಾತ್ರವಲ್ಲ, ಡಾನ್ಸ್‌ನಲ್ಲೂ ಅನೂಪ್‌ ಸಖತ್‌ ಹ್ಯಾಂಡ್‌ಸಮ್‌ ಆಗಿ ಕಂಡಿದ್ದಾರೆ. ಅದರಲ್ಲೂ 'ರಾವೇ ರಾವೇ ಸುಬ್ಬಲಕ್ಷ್ಮಿ ಸುಬ್ಬರಾವ್‌' ಸಾಂಗ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಹಿದೆ.

ಇದುವರೆಗೂ ಟ್ರೈಲರ್‌ ಮತ್ತು ಹಾಡುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ 7ನೇ ವಯಸ್ಸಿನಲ್ಲಿಯೆ ಸಿನಿಮಾದಲ್ಲಿ ನಟಿಸಬೇಕೆಂಬ ಅನೂಪ್‌ ಆಸೆ ಈಡೇರಿದಂತಾಗಿದೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>