ಆರ್.ಚಂದ್ರು ನಿರ್ದೇಶನದ ಲಕ್ಷ್ಮಣ ಸಿನಿಮಾ, ರಿಲೀಸ್ಗಿಂತ ಮುಂಚೆಯೇ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಂದ್ರು ಓಡುವ ಕುದುರೆ ಅನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ರಿಲೀಸ್ಗಿಂತ ಮುಂಚೆಯೇ ಚಿತ್ರಗಳು ವ್ಯಾಪಾರ ಮಾಡುವುದು ತೀರಾ ಕಡಿಮೆ. ಸ್ಟಾರ್ ಚಿತ್ರಗಳಿದ್ದರೆ ಮಾತ್ರ, ವಿತರಕರು ಕೊಂಡುಕೊಳ್ಳಲು ಮುಂದೆ ಬರುತ್ತಾರೆ. ಆದರೆ, ನಿರ್ದೇಶಕ ಆರ್.ಚಂದ್ರು ಚಿತ್ರಗಳು ಹಾಗಲ್ಲ. ಬಿಡುಗಡೆಯ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಇದೇ ಜೂ.24ರಂದು ರಿಲೀಸ್ ಆಗುತ್ತಿರುವ 'ಲಕ್ಷ್ಮಣ' ಚಿತ್ರ ಕೂಡ ರಿಲೀಸ್ಗೂ ಮುನ್ನ ಹಲವು ದಾಖಲೆಗಳನ್ನು ಕ್ರಿಯೇಟ್ ಮಾಡಿದೆ. ಹೀಗಾಗಿ ಚಂದ್ರು ಓಡುವ ಕುದುರೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಈ ಸಿನಿಮಾದ ಮೂಲಕ ಅನೂಪ್ ಎಂಬ ಹೊಸ ಹುಡುಗ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡುತ್ತಿದ್ದರೂ, ಸ್ಯಾಟ್ಲೈಟ್ ರೈಟ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಸ್ಟಾರ್ ನಟರಿಗೆ ಸಿಗುವ ಮೊತ್ತವೇ ಈ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡ ಬಿಕರಿಯಾಗಿದೆ. ಜತೆಗೆ ವಿತರಕ ಬಾಷಾ ಅವರು ಹೆಚ್ಚಿನ ಹಣ ಕೊಟ್ಟು ಲಕ್ಷ್ಮಣ ಸಿನಿಮಾವನ್ನು ಹಂಚಿಕೆ ಮಾಡುತ್ತಿದ್ದಾರೆ. ಈ ಕುರಿತು ಚಂದ್ರು ಹೇಳುವುದು ಹೀಗೆ. 'ನನ್ನ ಸಿನಿಮಾದ ಬಗ್ಗೆ ನಾನೇ ಮಾತಾಡುವುದು ಸರಿಯಲ್ಲ. ಹಲವರಿಗೆ ಈ ಚಿತ್ರವನ್ನು ತೋರಿಸಿದ್ದೇನೆ. ಅವರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಾಗೆಯೇ ಚಿತ್ರವನ್ನು ನೋಡಿದವರೆಲ್ಲ, ಡಬ್ಬಿಂಗ್ಸ್, ರೀಮೇಕ್ಸ್ ರೈಟ್ಸ್ ಕೇಳಿದ್ದಾರೆ. ನನ್ನ ಹಿಂದಿನ ಚಿತ್ರಗಳಿಗಿಂತ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹಾಗೆಯೇ ಪ್ರೇಕ್ಷಕ ಕೂಡ ಹೀಗಿಯೇ ಸಿನಿಮಾ ತಗೆದುಕೊಳ್ಳುತ್ತಾನೆ ಅನ್ನುವ ವಿಶ್ವಾಸ ನನ್ನದು' ಅಂತಾರೆ. ಹಲವು ಕಾರಣಗಳಿಂದಾಗಿ ಚಿತ್ರವು ನಿರೀಕ್ಷೆ ಮೂಡಿಸಿದೆ. ಚಂದ್ರು ಅವರ ಬಹುತೇಕ ಚಿತ್ರಗಳು ಹಿಟ್ ಆಗಿವೆ. ಶತದಿನ ಕಂಡಿವೆ. ಹೀಗಾಗಿ ಮತ್ತೊಂದು ಒಳ್ಳೆಯ ಚಿತ್ರವನ್ನು ಕೊಟ್ಟಿರುತ್ತಾರೆ ಅನ್ನುವ ನಂಬಿಕೆ ಪ್ರೇಕ್ಷಕರದ್ದು. ಜತೆಗೆ ಇದೇ ಮೊದಲ ಬಾರಿಗೆ ರವಿಚಂದ್ರನ್ ಜತೆ ನಿರ್ದೇಶಕರು ಕೆಲಸ ಮಾಡಿದ್ದಾರೆ. ಅನೂಪ್ ಎಂಬ ಹೊಸ ಹುಡುಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡುಗಳು ಹಿಟ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಟ್ರೈಲರ್ ವೈರಲ್ ಆಗಿದೆ. ತಮ್ಮ ಸಿನಿಮಾದ ನಾಯಕ ಅನೂಪ್ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ ನಿರ್ದೇಶಕರು. ಅನೂಪ್ ಕೂಡ ಆ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಚೊಚ್ಚಲು ಸಿನಿಮಾ ಇನ್ನೂ ಬಿಡುಗಡೆ ಆಗದೇ ಇದ್ದರೂ, ಇನ್ನೆರಡು ಚಿತ್ರಗಳಿಗೆ ಇವರು ಆಯ್ಕೆಯಾಗಿದ್ದಾರೆ.
↧
ಬಾಲಿವುಡ್ಗೆ ಹೊರಟ ಲಕ್ಷ್ಮಣ
↧