Quantcast
Channel: VijayKarnataka
Viewing all articles
Browse latest Browse all 6795

ಅಡುಗೆ ಮನೆಗೆ ವಾಸ್ತು ನಿಯಮ

$
0
0

ಮನೆಯ ಶಕ್ತಿ ಕೇಂದ್ರ, ಆರೋಗ್ಯಧಾಮ ಅಡುಗೆ ಮನೆ. ಇದು ಶುಚಿಯಾಗಿರುವುದರ ಜೊತೆಗೆ ವಾಸ್ತು ನಿಯಮಕ್ಕೆ ಅನುಗುಣವಾಗಿರಬೇಕು. ಅಲ್ಲಿರುವ ಪ್ರತಿಯೊಂದು ಸಾಮಗ್ರಿಗೂ ವಾಸ್ತುವಿನಲ್ಲಿ ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ. ಅವುಗಳ ಕುರಿತು ಒಂದಿಷ್ಟು ವಿವರ ಇಲ್ಲಿದೆ.

- ಯಾವಾಗಲೂ ಆಗ್ನೇಯ ಅಡುಗೆ ಮನೆಗೆ ಅತ್ಯಂತ ಪ್ರಾಶಸ್ತ್ಯ ದಿಕ್ಕು. ಅಗ್ನಿಯ ದಿಕ್ಕು ಇದಾಗಿರುವುದರಿಂದ ಅದರ ಸಂಪೂರ್ಣ ಲಾಭ ಪಡೆಯಲು ಆ ಭಾಗದಲ್ಲೇ ಕಿಚನ್ ಇರಲಿ.

- ಆಗ್ನೇಯ ಭಾಗದಲ್ಲಿ ಅವಕಾಶವಿಲ್ಲದವರು ಅಡುಗೆ ಮನೆಗೆ ಎರಡನೇ ಆದ್ಯತೆಯಾಗಿ ವಾಯವ್ಯ ದಿಕ್ಕನ್ನು ಆಯ್ದುಕೊಳ್ಳಬಹುದು.

- ಅಡುಗೆ ಮನೆಯ ಬಾಗಿಲು ಉತ್ತರ, ಪೂರ್ವ ಅಥವಾ ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಗಡಿಯಾರದ ಮುಳ್ಳು ಓಡುವ ರೀತಿ ಬಾಗಿಲು ತೆರೆಯುವಂತಿರಬೇಕು.

- ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿಕೊಂಡಿರಬೇಕು. ಇದರಿಂದ ನಿವಾಸಿಗಳಿಗೆ ಆರೋಗ್ಯ ಭಾಗ್ಯ ಸಿಗುತ್ತದೆ.

- ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದರೆ ಅಂತಹ ಪುರುಷ ಅಥವಾ ಮಹಿಳೆಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

- ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಅಡುಗೆ ಮಾಡಿದರೆ ಹಣಕಾಸು ಬಿಕ್ಕಟ್ಟು ಮತ್ತು ಕೌಟುಂಬಿಕ ಸಮಸ್ಯೆಗಲು ಎದುರಾಗುತ್ತವೆ.

- ಮನೆಯ ನೈರುತ್ಯ, ಮನೆಯ ಕೇಂದ್ರ ಭಾಗ ಮತ್ತು ಈಶಾನ್ಯ ಭಾಗದಲ್ಲಿ ಅಡುಗೆ ಮನೆ ಇರಲೇಬಾರದು.

- ಯಾವಾಗಲೂ ಅಡುಗೆ ಮನೆಯ ಬಾಗಿಲಿಗೆ ಸರಿ ಎದುರಾಗಿ ಗ್ಯಾಸ್ ಸ್ಟೌವ್ ಇರದಂತೆ ನೋಡಿಕೊಳ್ಳಬೇಕು.

- ನೀರಿನ ಸಿಂಕ್ ಗ್ಯಾಸ್ ಸ್ಟೌವ್‌ನಿಂದ ಸಾಧ್ಯವಾದಷ್ಟು ದೂರದಲ್ಲಿ ಈಶಾನ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.

- ಕುಡಿಯುವ ನೀರಿನ ಟ್ಯಾಪ್ ಮತ್ತು ನೀರು ಸಂಗ್ರಹಿಸಿಡುವ ಯಾವುದೇ ಸಾಮಗ್ರಿ ಈಶಾನ್ಯ ದಿಕ್ಕಿನಲ್ಲೇ ಇರಬೇಕು.

- ಡೈನಿಂಗ್ ಟೇಬಲ್ ಅಡುಗೆ ಮನೆಯ ವಾಯವ್ಯ ಭಾಗದಲ್ಲಿ ಇರಲಿ.

- ಗ್ಯಾಸ್ ಸಿಲಿಂಡರ್‌ನ್ನು ಅಡುಗೆ ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು.

- ಅಡುಗೆ ಮನೆ ಬಾಗಿಲು ಮತ್ತು ಶೌಚಾಲಯದ ಬಾಗಿಲು ಎದುರುಬದುರಾಗಿ ಇರಬಾರದು.

- ಸ್ನಾನ ಗೃಹ ಮತ್ತು ಶೌಚಾಲಯದಿಂದ ಕೆಳಗೆ ಅಥವಾ ಮೇಲ್ಭಾಗದಲ್ಲಿ ಅಡುಗೆ ಮನೆ ಇರಬಾರದು.

- ಅಡುಗೆ ಮನೆಯ ಮೇಲ್ಭಾಗದಲ್ಲಿ ದೇವರ ಕೋಣೆ ಇದ್ದರೆ ದುರಾದೃಷ್ಟ ಕಾಡುತ್ತದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>