Quantcast
Channel: VijayKarnataka
Viewing all articles
Browse latest Browse all 6795

ದಿಕ್ಕುಗಳ ಫಲಾಫಲ

$
0
0

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳನ್ನು ಸರಳವಾಗಿ ಎಂಟು ದಿಕ್ಕುಗಳೆಂದು ಗುರುತಿಸಿ ಒಂದೊಂದು ದಿಕ್ಕಿಗೂ ಅಧಿಪತಿಗಳನ್ನು ನೇಮಿಸಲಾಗಿದೆ. ಆಯಾಯಾ ದಿಕ್ಕಿನ ಅಧಿಪತಿಗಳ ಗುಣ-ಲಕ್ಷಣಗಳನ್ನು ಆಧರಿಸಿ ವಾಸಿತರ ಮೇಲೆ ಅವರು ತಮ್ಮ ಪ್ರಭಾವ ಬೀರುತ್ತಾರೆ.

ಉದಾಹರಣೆಗೆ ಈಶಾನ್ಯ ದಿಕ್ಕಿನ ಒಡೆಯ ಈಶ್ವರ. ಆತ ವಾಸಿತನಿಗೆ ಆಯುಷ್ಯ ಕರುಣಿಸುತ್ತಾನೆ. ವಂಶದ ಅಭಿವೃದ್ಧಿಗೆ ಸಹಕರಿಸುತ್ತಾನೆ. ಆರ್ಥಿಕ ಅಭಿವೃದ್ಧಿಗೂ ನೆರವು ನೀಡುತ್ತಾನೆ. ವಾಸ್ತು ಪ್ರಕಾರ ಈಶಾನ್ಯ ದಿಕ್ಕನ್ನು ಕಾಪಾಡಿಕೊಮಡಾಗ ವಾಸಿತನಿಗೆ ಮೇಲೆ ಹೇಳಿದ ಈ ಮೂರು ಲಾಭಗಳು ದೊರೆಯುತ್ತವೆ.

ಈಶಾನ್ಯ ದಿಕ್ಕಿನಲ್ಲಿ ದೋಷವಿದ್ದಲ್ಲಿ ವಾಸಿತ ಮತ್ತು ಆತನ ಕುಟುಂಬಕ್ಕೆ ಆಯುಷ್ಯ ಕುಂಠಿತ, ಸಂತಾನ ನಾಶ ಹಾಗೂ ಆರ್ಥಿಕ ನಷ್ಟ ತಲೆದೋರುತ್ತದೆ.

ಕುಬೇರ, ಇಂದ್ರ, ಈಶ್ವರ ಈ ಮೂರು ಮಂದಿ ಶುಭವನ್ನು ತರುವುದರಿಂದ ಸಾಮಾನ್ಯವಾಗಿ ಎಲ್ಲರೂ ನಿವೇಶನ ಖರೀದಿಸುವಾಗ ರಸ್ತೆ ಉತ್ತರ, ಪೂರ್ವ ಇಲ್ಲವೇ ಈಶಾನ್ಯ ದಿಕ್ಕಿನಲ್ಲಿರುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಅದೇ ಯಮ, ಅಗ್ನಿ ಮತ್ತು ಅಶುಭ ಉಂಟು ಮಾಡುವುದರಿಂದ ವಾಸ್ತುವಿನಲ್ಲಿ ದಕ್ಷಿಣ, ಆಗ್ನೇಯ, ನೈಋತ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಏನನ್ನು ಮಾಡಬೇಕಾದರೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮನೆಯ ಆವರಣದಲ್ಲಿ ತಾಳೆ ಮರವಿದ್ದರೆ ಅಲ್ಲಿ ಕಲ್ಪವೇದ ದೋಷ ಉಂಟಾಗಿ ಸದಾ ಭೂತ-ಪ್ರೇತದ ಕಾಟ ಇರುತ್ತದೆ. ಅದೇ ಪ್ರಕಾರ ಮನೆ ಬಾಗಿಲಿನ ಎದುರಿಗೆ ಕಂಬಗಳಿದ್ದರೆ ಸ್ತಂಭವೇದ ದೋಷ ಉಂಟಾಗುತ್ತದೆ. ಮನೆಯ ಉತ್ತರ, ಈಶಾನ್ಯ, ಪೂರ್ವ ದಿಕ್ಕಿನಲ್ಲಿ ಅಶೌಚವಿದ್ದಲ್ಲಿ 'ನೀಚವೇದ' ದೋಷ ಉಂಟಾಗಿ ಮನೆಯ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ. ಮನೆಯಿಂದ ಹೊರಹೋಗುವ ನೀರು ಉತ್ತರ, ಪೂರ್ವ ಅಥವಾ ಈಶಾನ್ಯದಿಂದ ಹೊರಹೋಗದಿದ್ದಲ್ಲಿ 'ಸ್ವಜಲವೇಧ' ಎಂಬ ದೋಷ ಉಂಟಾಗಿ ಧನ ಹಾನಿಗೆ ಕಾರಣವಾಗುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>