Quantcast
Channel: VijayKarnataka
Viewing all articles
Browse latest Browse all 6795

ಬೆಂಗಳೂರು-ಮೈಸೂರು ಟ್ವಿನ್‌ ಸಿಟಿ ರಿಲೇ ಇಂದು

$
0
0

120 ಕಿ.ಮೀ ರಿಲೇಯಲ್ಲಿ 30 ತಂಡಗಳ 300ಕ್ಕೂ ಅಧಿಕ ಓಟಗಾರರು ಭಾಗಿ

ಬೆಂಗಳೂರು: ಉದ್ಯಾನ ನಗರಿಯ ಉತ್ಸಾಹಿ ಓಟಗಾರರ ಸಾಮರ್ಥ್ಯ‌ ಪರೀಕ್ಷಿಸಲು ಅಣಿಯಾಗಿರುವ ಬೆಂಗಳೂರು ನಿಂದ ಮೈಸೂರು ವರೆಗಿನ 120 ಕಿ.ಮೀಗಳ ಟ್ವಿನ್‌ ಸಿಟಿ ರಿಲೇ ಶುಕ್ರವಾರ ಆರಂಭವಾಗಲಿದೆ.

ರಡು ನಗರಗಳ ನಡುವೆ ಸಾಗುವ ವಿನೂತನ ಮಾದರಿಯ ಟ್ವಿನ್‌ ಸಿಟಿ ರಿಲೇಯಲ್ಲಿ ಒಟ್ಟಾರೆ 30 ತಂಡಗಳು ಪಾಲ್ಗೊಳ್ಳುತ್ತಿದ್ದು, 300ಕ್ಕೂ ಅಧಿಕ ಓಟಗಾರರು ತಮ್ಮ ಸಾಮರ್ಥ್ಯ‌ವನ್ನು ಓರೆಗಚ್ಚಲಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆಯುವ ಈ ರಿಲೇ ಓಟವು ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಆರಂಭಗೊಂಡು ಮೈಸೂರಿನಲ್ಲಿ ಶನಿವಾರ ಬೆಳಗ್ಗೆ ಕೊನೆಗೊಳ್ಳಲಿದೆ.

ವೃತ್ತಿಪರ ಹಾಗೂ ಹವ್ಯಾಸಿ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿದ್ದು, ಒಂದು ಸಂಪೂರ್ಣ ಮಹಿಳೆಯರ ತಂಡವಾದ ''ವಂಡರ್‌ ವುಮನ್ಸ್‌'' ಚೊಚ್ಚಲ ಆವೃತ್ತಿಯ ಟ್ವಿನ್‌ ಸಿಟಿ ರಿಲೇ ಓಟದ ಪ್ರಮುಖ ಆಕರ್ಷಣೆಯಾಗಿದೆ.

ಇನ್ವೆಂಟರ್ಸ್‌ ಇಂಡಿಯಾ ರಿಸರ್ಚ್‌ ಪ್ರತಿಷ್ಠಾನವು ಸೋಸಿಯೋ ಫಿಟ್ನೆಸ್‌ ಸಹಯೋಗದಲ್ಲಿ ಆಯೋಜಿಸುತ್ತಿರುವ ಈ ರಿಲೇಯಲ್ಲಿ ವೃತ್ತಿಪರ ವಿಭಾಗದಲ್ಲಿ 8 ಓಟಗಾರರ ಒಂದು ತಂಡ ಪಾಲ್ಗೊಳ್ಳುತ್ತಿದ್ದು, ಓಪನ್‌ ಲೀಗ್‌ನಲ್ಲಿ 12 ಸದಸ್ಯರ ಒಂದು ತಂಡ ಟ್ವಿನ್‌ ಸಿಟಿ ರಿಲೇಯಲ್ಲಿ ಓಡಲಿದೆ. ವೃತ್ತಿಪರ ಹಾಗೂ ಓಪನ್‌ ಲೀಗ್‌ ಎರಡೂ ವಿಭಾಗದಲ್ಲಿ ಮಹಿಳೆ ಹಾಗೂ ಪುರುಷರ ಪ್ರತ್ಯೇಕ ತಂಡಗಳ ಜತೆಗೆ ಪುರುಷ-ಮಹಿಳೆ ಸಂಯೋಜನೆಯ ಮಿಶ್ರ ತಂಡಗಳೂ ಪಾಲ್ಗೊಳ್ಳಲಿವೆ.

ಹಂತ ಹಂತವಾಗಿ ಸಾಗುವ ರಿಲೇ

120 ಕಿ.ಮೀ ದೂರದ ರಿಲೇ ಇದಾಗಿರುವ ಕಾರಣ ಹಂತವ ಹಂತವಾಗಿ ವಿಂಗಡಿಸಲಾಗಿದ್ದು, ಹೆಚ್ಚು ದೂರ ಓಡುವಂಥ ಸಾಮರ್ಥ್ಯ‌ದ ಓಟಗಾರರನ್ನು ದೂರದ ಓಟಕ್ಕೆ ಹಾಗೂ ಕಡಿಮೆ ಸಾಮರ್ಥ್ಯ‌ದ ಓಟಗಾರರನ್ನು ಅಲ್ಪ ಅಂತರದ ಓಟಕ್ಕೆ ನಿಗದಿ ಪಡಿಸುವುದು ಆಯಾ ತಂಡದ ನಾಯಕನ ನಿರ್ಧಾರಕ್ಕೆ ಬಿಡಲಾಗಿದೆ. ವೃತ್ತಿಪರ ಲೀಗ್‌ನಲ್ಲಿ ಒಂದು ಲೆಗ್‌ ಕನಿಷ್ಠ 7.5 ಕಿ.ಮೀ ನಿಂದ ಗರಿಷ್ಠ 23 ಕಿ.ಮೀ ವರೆಗೆ ಇರುತ್ತದೆ. ಓಪನ್‌ ಲೀಗ್‌ನಲ್ಲಿ ಕನಿಷ್ಠ ಲೆಗ್‌ 7.5 ಕಿ.ಮೀ ಹಾಗೂ ಗರಿಷ್ಠ ಲೆಗ್‌ 12 ಕಿ.ಮೀ ಆಗಿದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಯಲ್ಲಿ ಅಗ್ರ 3 ತಂಡಗಳಿಗೆ ಬಹುಮಾನ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ವಿವಿಧ ವರ್ಗದಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡುವವರಿಗೆ ಪ್ರತ್ಯೇಕ ಬಹುಮಾನ ಲಭಿಸಲಿದೆ.

ಶುಕ್ರವಾರ ಸಂಜೆ 7ಕ್ಕೆ ಆರಂಭ

ಟ್ವಿನ್‌ ಸಿಟಿ ರಿಲೇ ಶುಕ್ರವಾರ ಸಂಜೆ 7 ಗಂಟೆಗೆ ಬೆಂಗಳೂರು ಸಮೀಪದ ಮೈಸೂರು ರಸ್ತೆಯಲ್ಲಿನ ಡೆಕಥ್ಲಾನ್‌ನಿಂದ ಆರಂಭವಾಗಲಿದ್ದು, ಶನಿವಾರ ಬೆಳಗ್ಗೆ 9 ಗಂಟೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಂತ್ಯಗೊಳ್ಳಲಿದೆ. ಅಲ್ಲೇ ಪ್ರದಾನ ಸಮಾರಂಭ ಕೂಡ ನಡೆಯಲಿದ್ದು, ಖ್ಯಾತ ಗಾಯಕ ರಘು ದೀಕ್ಷಿತ್‌ ತಂಡವು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>