Quantcast
Channel: VijayKarnataka
Viewing all articles
Browse latest Browse all 6795

ಸಿಎಂ ಭದ್ರತಾ ಕಮಾಂಡೊ ಲೂಟಿಯ ಸಂಚುಕೋರ

$
0
0

ಅಹಮದಾಬಾದ್: ರಾಜ್ಯ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿಯಾಗಿ ಮುಖ್ಯಮಂತ್ರಿಗೆ ಭದ್ರತೆ ನೀಡುವ ಚೇತಕ್‌ ಕಮಾಂಡೊ ಘೇಲ ಭರ್ವದ್ ಭಾರಿ ಲೂಟಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬಹಿರಂಗಗೊಂಡಿದೆ.

ಕೋಟ್ಯಂತರ ರೂ.ಲೂಟಿ ಮಾಡುವ ಕೃತ್ಯದಲ್ಲಿ ಭಾಗಿಯಾಗುವುದಕ್ಕಾಗಿ ಕಮಾಂಡೊ ಘೇಲ ಭರ್ವದ್ ನಾಲ್ಕು ದಿನಗಳ ರಜೆ ತೆಗೆದುಕೊಂಡಿರುವುದು ಕೂಡ ಬಯಲಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಿಂದ ಸರಕು ಹೊತ್ತು ಬರುತ್ತಿದ್ದ ಟ್ರಕ್‌ಗಳನ್ನು ಗುರಿಯಾಗಿಸಿ ಐದು ಕೋಟಿ ರೂ.ಗಳಿಗೂ ಹೆಚ್ಚಿನ ಸರಕುಗಳನ್ನು 15 ಮಂದಿಯ ಗುಂಪು ದೋಚಿತ್ತು.

ಮರುದಿನ ಅಹಮದಾಬಾದ್‌ನಲ್ಲಿ ಲೂಟಿಕೋರ ಗುಂಪಿನ ಸುರಾ ಭರ್ವದ್‌ ಅವರನ್ನು ಬಂಧಿಸಿದ್ದರು. ಬಳಿಕ ಇನ್ನೂ ಕೆಲವರನ್ನು ಬಂಧಿಸಿ 3.5 ಕೋಟಿ ರೂ. ಮೌಲ್ಯದ ಸರಕುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಘೇಲ ಭರ್ವದ್ ಅವರು ರಾಜ್ಯ ಮೀಸಲು ಪಡೆಯಲ್ಲಿ ಕಾನ್ಸ್‌ಟೇಬಲ್. ಅವರು ಸಮವಸ್ತ್ರ ಧರಿಸಿ ಟ್ರಕ್‌ಗಳನ್ನು ತಡೆದು ಸರಕು ಲೂಟಿ ಮಾಡಿದ್ದರು. ಲೂಟಿಕೋರರ ತಂಡವು ಮಾನೆಕ್‌ ಚೌಕ್‌ ಮತ್ತು ರಾಯ್‌ಪುರಗಳಲ್ಲಿ ಪರಿಶೀಲನೆ ನಡೆಸಿ ಟ್ರಕ್‌ಗಳು ಸಂಚರಿಸುವ ಮಾರ್ಗಗಳ ಮಾಹಿತಿ ಪಡೆದುಕೊಂಡು ಯಾವ ಸ್ಥಳದಲ್ಲಿ ದಾಳಿ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>