ಕೋಟ್ಯಂತರ ರೂ.ಲೂಟಿ ಮಾಡುವ ಕೃತ್ಯದಲ್ಲಿ ಭಾಗಿಯಾಗುವುದಕ್ಕಾಗಿ ಕಮಾಂಡೊ ಘೇಲ ಭರ್ವದ್ ನಾಲ್ಕು ದಿನಗಳ ರಜೆ ತೆಗೆದುಕೊಂಡಿರುವುದು ಕೂಡ ಬಯಲಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಿಂದ ಸರಕು ಹೊತ್ತು ಬರುತ್ತಿದ್ದ ಟ್ರಕ್ಗಳನ್ನು ಗುರಿಯಾಗಿಸಿ ಐದು ಕೋಟಿ ರೂ.ಗಳಿಗೂ ಹೆಚ್ಚಿನ ಸರಕುಗಳನ್ನು 15 ಮಂದಿಯ ಗುಂಪು ದೋಚಿತ್ತು.
ಮರುದಿನ ಅಹಮದಾಬಾದ್ನಲ್ಲಿ ಲೂಟಿಕೋರ ಗುಂಪಿನ ಸುರಾ ಭರ್ವದ್ ಅವರನ್ನು ಬಂಧಿಸಿದ್ದರು. ಬಳಿಕ ಇನ್ನೂ ಕೆಲವರನ್ನು ಬಂಧಿಸಿ 3.5 ಕೋಟಿ ರೂ. ಮೌಲ್ಯದ ಸರಕುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘೇಲ ಭರ್ವದ್ ಅವರು ರಾಜ್ಯ ಮೀಸಲು ಪಡೆಯಲ್ಲಿ ಕಾನ್ಸ್ಟೇಬಲ್. ಅವರು ಸಮವಸ್ತ್ರ ಧರಿಸಿ ಟ್ರಕ್ಗಳನ್ನು ತಡೆದು ಸರಕು ಲೂಟಿ ಮಾಡಿದ್ದರು. ಲೂಟಿಕೋರರ ತಂಡವು ಮಾನೆಕ್ ಚೌಕ್ ಮತ್ತು ರಾಯ್ಪುರಗಳಲ್ಲಿ ಪರಿಶೀಲನೆ ನಡೆಸಿ ಟ್ರಕ್ಗಳು ಸಂಚರಿಸುವ ಮಾರ್ಗಗಳ ಮಾಹಿತಿ ಪಡೆದುಕೊಂಡು ಯಾವ ಸ್ಥಳದಲ್ಲಿ ದಾಳಿ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್: ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯಾಗಿ ಮುಖ್ಯಮಂತ್ರಿಗೆ ಭದ್ರತೆ ನೀಡುವ ಚೇತಕ್ ಕಮಾಂಡೊ ಘೇಲ ಭರ್ವದ್ ಭಾರಿ ಲೂಟಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬಹಿರಂಗಗೊಂಡಿದೆ.