Quantcast
Channel: VijayKarnataka
Viewing all articles
Browse latest Browse all 6795

ಐಂದ್ರಿತಾ ಧ್ವನಿಗೆ ಸಿಕ್ಕಿದೆ ಬೆಂಬಲ

$
0
0

- ಶರಣು ಹುಲ್ಲೂರು

ಚಿತ್ರರಂಗದಲ್ಲಿ ನಾಯಕಿಯರಿಗೆ ಸಂಭಾವನೆ ವಿಷಯದಲ್ಲಿ ಅನ್ಯಾಯ ಆಗುತ್ತಿರುವ ಕುರಿತು ಈಗಾಗಲೇ ಅನೇಕರು ಮಾತನಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ, ಬಾಲಿವುಡ್‌ ನಟಿ ಕಂಗನಾ ರಣಾವತ್‌ ಕೂಡ ಮೊನ್ನೆಯಷ್ಟೇ ಇಲ್ಲಿನ ಲಿಂಗ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ್ದರು. ಈ ಹಿಂದೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಕೂಡ ಈ ಕುರಿತು ಬಾಂಬ್‌ ಸಿಡಿಸಿ, ಚರ್ಚೆಗೆ ನಾಂದಿ ಹಾಡಿದ್ದರು. ಈಗ ಐಂದ್ರಿತಾ ರೇ ಕೂಡ ಹಿರೋಯಿನ್ಸ್‌ಗೆ ಆಗುತ್ತಿರುವ ಶೋಷಣೆಯ ಬಗ್ಗೆ ಬಾಯಿಬಿಟ್ಟಿದ್ದಾರೆ. ಕೇವಲ ಸಂಭಾವನೆಯ ವಿಚಾರ ಮಾತ್ರವಲ್ಲ, ನಾಯಕ ಮತ್ತು ನಾಯಕಿಯರಿಗೆ ಸಿಗುವ ಸವಲತ್ತುಗಳಲ್ಲಿನ ಅನ್ಯಾಯದ ಬಗ್ಗೆಯೂ ನಿಜಾಂಶ ತೆರೆದಿಟ್ಟಿದ್ದಾರೆ. ಐಂದ್ರಿತಾ ಮಾತು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವುಂಟು ಮಾಡಿದೆ. ಆತ್ಮಾವಲೋಕನಕ್ಕೂ ಕಾರಣವಾಗಿದೆ. ಹೀಗಾಗಿ ಐಂದ್ರಿತಾ ಮಾತಿನ ಮುಂದುವರಿಕೆಯಾಗಿ ಹಲವು ನಾಯಕಿಯರು ಮಾತಾಡಿದ್ದಾರೆ.

ಮಹಿಳಾ ಪರವಾಗಿ ಯಾವಾಗಲೂ ಧ್ವನಿಎತ್ತುವ ಶ್ವೇತಾ ಪಂಡಿತ್‌, ಸಿನಿಮಾ ರಂಗದಲ್ಲಿನ ಅಸಮಾನತೆಯನ್ನು ಬೇರು ಮಟ್ಟದಲ್ಲಿ ಗುರುತಿಸುತ್ತಾರೆ. 'ಸಿನಿಮಾಗೆ ಸ್ಕ್ರಿಪ್ಟ್‌ ಜೀವಾಳ. ಆ ಜೀವವೇ ಹೀರೋ ಪರವಾಗಿ ಇರುತ್ತದೆ. ಸಹಜವಾಗಿ ನಾಯಕರಿಗೆ ಹೈಪ್‌ ಕ್ರಿಯೇಟ್‌ ಆಗುತ್ತದೆ. ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಎಲ್ಲವೂ ನಡೆಯುವುದು ಮಾರುಕಟ್ಟೆಯ ಆಧಾರದಲ್ಲಿ. ಹೀಗಾಗಿ ನಾಯಕಿಗೆ ಅನ್ಯಾಯ ಆಗುವುದು ಸಹಜ. ಸಂಭಾವನೆ ವಿಚಾರದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೆ, ಸವಲತ್ತುಗಳಲ್ಲಿ ಅದರ ಅಂತರ ಇನ್ನೂ ದೊಡ್ಡದು. ನಾಯಕಿ ಪ್ರಧಾನ ಸಿನಿಮಾಗಳು ಬರುತ್ತಿದ್ದರೂ, ಅವುಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ನಾಯಕಿಯರಿಗೆ ಫೈಟ್‌ ಮಾಡೋಕೆ ಆಗುತ್ತಿಲ್ಲ. ಇದು ಸರಿ ಹೋಗಬೇಕು. ಅದನ್ನು ಸರಿದೂಗಿಸಲು ಎಲ್ಲರೂ ಪ್ರಯತ್ನಿಸಬೇಕು' ಅಂತಾರೆ.

ಈ ಹಿಂದೆ ರಚಿತಾ ರಾಮ್‌ ಕೂಡ ಈ ಕುರಿತು ಮಾತಾಡಿದ್ದರು. 'ನಾಯಕರಷ್ಟೇ ಎಫರ್ಟ್‌ ಹಾಕುವ ನಮಗೂ ಅವಕಾಶಗಳು ಸಿಗಬೇಕು' ಅಂದಿದ್ದರು. ಅಲ್ಲದೇ ಸಂಭಾವನೆಯ ವಿಚಾರದಲ್ಲೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಲಿಂಗ ತಾರತಮ್ಯದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಧ್ವನಿ ಎತ್ತಿದ್ದು ರಮ್ಯಾ. ಐದು ವರ್ಷಗಳಿಂದ ಅವರು ನಿರಂತರವಾಗಿ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಸಂಭಾವನೆಯ ವಿಚಾರವಾಗಿ ಅನೇಕ ಸಿನಿಮಾಗಳನ್ನು ಇವರು ಕೈಬಿಟ್ಟಿದ್ದಾರೆ. 'ನಾಯಕಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಾನಾ ಸಂದರ್ಭಗಳಲ್ಲಿ ನಾನು ಮಾತನಾಡಿದ್ದೇನೆ. ಸ್ಟಾರ್‌ ನಟರ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿದ್ದರೂ ಬಿಟ್ಟಿದ್ದೇನೆ. ನಾವೂ ಅವರಷ್ಟೇ ಕಷ್ಟಪಡುತ್ತೇವೆ. ಯಾವ ನಾಯಕಿಯರೂ ಥಿಯೇಟರ್‌ ತುಂಬಿಸುವುದಿಲ್ಲ ಅಂತ ಕೆಲವರು ಮಾತಾಡುತ್ತಾರೆ. ನಾಯಕಿಯರೇ ಇಲ್ಲದೆ ಸಿನಿಮಾ ಮಾಡಲಿ. ಇಂತಹ ವಿಚಾರಗಳಲ್ಲಿ ನಾನಂತೂ ಸುಮ್ಮನೆ ಇರಲಾರೆ. ಈ ಹೋರಾಟ ನಿರಂತರವಾಗಿ ಇದ್ದೇ ಇರುತ್ತದೆ' ಅನ್ನುವುದು ರಮ್ಯಾ ಮಾತು.

ಸಿನಿಮಾರಂಗದ ಈ ನಡೆಗೆ ಮಾಸ್ಟರ್‌ ಪೀಸ್‌ ಖ್ಯಾತಿಯ ಶಾನ್ವಿ ಶ್ರೀವಾತ್ಸವ್‌, ಪರೂಲ್‌ ಯಾದವ್‌ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. 'ಒಂದೊಂದು ಸಲ ಈ ಕುರಿತು ಬೇಸರವಾಗುತ್ತದೆ. ಇದನ್ನು ಸರಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಮ್ಮನ್ನು ನಾವು ಪ್ರೂವ್‌ ಮಾಡಿಕೊಂಡು, ನಾವೇ ಸರಿ ಮಾಡಿಕೊಳ್ಳಬೇಕು' ಅಂತಾರೆ ಪರೂಲ್‌. ಈ ಕುರಿತು ಶಾಸಕಿ ಮತ್ತು ನಟಿ ತಾರಾ ಪ್ರತಿಕ್ರಿಯಿಸಿದ್ದು ಹೀಗೆ, 'ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಎಲ್ಲಾ ರಂಗದಲ್ಲೂ ಮಹಿಳೆಯರಿಗೆ ಅನ್ಯಾಯ ಆಗುತ್ತಲೇ ಇದೆ. ಹೋರಾಟದಿಂದಲೇ ನಮ್ಮ ಹಕ್ಕು ಪಡೆಯುವ ವಾತಾವರಣ ಉಂಟಾಗಿದೆ. ಅದು ಸರಿ ಹೋಗಲು, ನಿರ್ಣಾಯಕ ಸ್ಥಾನದಲ್ಲಿ ಮಹಿಳೆಯರೇ ಬರಬೇಕು. ಅದರತ್ತ ನಾವು ಯೋಚಿಸಬೇಕು'.

---

ಸಂಭಾವನೆ ವಿಚಾರದಲ್ಲಿ ಧ್ವನಿ ಎತ್ತಿದ್ದಾಗ ನನ್ನ ಬಗ್ಗೆಯೂ ಮಾತಾಡಿಕೊಂಡರು. ನಾನು ಅದಕ್ಕೆ ಕೇರ್‌ ಮಾಡಲಿಲ್ಲ. ನಾಯಕರಷ್ಟೇ ನಾವೂ ಕಷ್ಟ ಪಡುತ್ತೇವೆ. ಸವಲತ್ತುಗಳನ್ನು ಕೇಳುವುದರಲ್ಲಿ ತಪ್ಪೇನಿದೆ?

- ರಮ್ಯಾ, ನಟಿ ಮತ್ತು ಮಾಜಿ ಸಂಸದೆ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>