Quantcast
Channel: VijayKarnataka
Viewing all articles
Browse latest Browse all 6795

ಸ್ಯಾಂಡಲ್‌ವುಡ್‌ನಲ್ಲಿ ಸೀಕ್ವಲ್ ಹಂಗಾಮಾ

$
0
0

ಕನ್ನಡದಲ್ಲೀಗ ಸೀಕ್ವಲ್‌ ಭರಾಟೆ. ಯಶಸ್ವಿ ಚಿತ್ರಗಳ ಮುಂದುವರಿದ ಭಾಗ ಸೆಟ್ಟೇರುವುದು ಹೆಚ್ಚಾಗುತ್ತಿದೆ. ಒಂದು ಚಿತ್ರ ಯಶಸ್ಸು ಗಳಿಸಿದ ತಕ್ಷಣ ಅದರ ಮುಂದುವರಿದ ಭಾಗವನ್ನು ತೆರೆಗೆ ತರುವ ಉತ್ಸಾಹ ಚಿತ್ರತಂಡದಲ್ಲಿ ಮೂಡುತ್ತದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸುಮಾರು ಒಂಬತ್ತು ಚಿತ್ರಗಳ ಪಾರ್ಟ್‌ - 2 ಚಿತ್ರೀಕರಣವಾಗುತ್ತಿದೆ. ಕೆಲವು 10 ವರ್ಷಗಳ ನಂತರ ಸೆಟ್ಟೇರಿದ್ದರೆ, ಇನ್ನು ಕೆಲವು ರಿಲೀಸ್‌ ಆಗುತ್ತಿದ್ದಂತೆ ಪಾರ್ಟ್‌ -2 ಪ್ರಕಟಗೊಂಡಿವೆ.

- ಪದ್ಮಾ ಶಿವಮೊಗ್ಗ

ಮುಂಗಾರು ಮಳೆ

ಮುಂಗಾರು ಮಳೆ 2006ರಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆದ ಚಿತ್ರ. ಯೋಗರಾಜ್‌ ಭಟ್‌ ನಿರ್ದೇಶನದ ಈ ಸಿನಿಮಾದಲ್ಲಿ ಗಣೇಶ್‌, ಪೂಜಾ ಗಾಂಧಿ ನಟಿಸಿದ್ದರು. ಲವ್‌ ಮತ್ತು ಸೆಂಟಿಮೆಂಟ್‌ ಇದ್ದ ಕತೆಯಲ್ಲಿ ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ನಾಯಕ ಲವ್‌ ಮಾಡುತ್ತಾನೆ. ಕೊನೆಗೆ ಅಪ್ಪನ ಆಸೆಯಂತೆ ನಾಯಕಿ ಬೇರೆಯವನನ್ನು ಮದುವೆಯಾಗುತ್ತಾಳೆ. 10 ವರ್ಷಗಳ ನಂತರ ಇದರ ಪಾರ್ಟ್‌ - 2 ಸೆಟ್ಟೇರಿದೆ.

ಮುಂಗಾರು ಮಳೆ ಪಾರ್ಟ್‌ - 2 ಅನ್ನು ಶಶಾಂಕ್‌ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್‌ ಇದರಲ್ಲೂ ನಾಯಕ. ಆದರೆ, ನಾಯಕಿಯರು ಬದಲಾಗಿದ್ದಾರೆ. ನೇಹಾ ಶೆಟ್ಟಿ ಸಿನಿಮಾದ ಹಿರೋಯಿನ್‌. ಈ ಚಿತ್ರ ಮೊದಲ ಭಾಗದ ಮುಂದುವರಿದ ಕತೆಯೋ ಅಲ್ಲವೋ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇದು ಈ ವರ್ಷವೇ ರಿಲೀಸ್‌ ಆಗುವ ನಿರೀಕ್ಷೆ ಇದೆ.

ಕಲ್ಪನಾ

ರಾಮ್‌ ನಾರಾಯಣನ್‌ ನಿರ್ದೇಶಿಸಿ, ಉಪೇಂದ್ರ, ಸಾಯಿ ಕುಮಾರ್‌, ರಾಯ್‌ಲಕ್ಷ್ಮಿ ನಟಿಸಿದ ಚಿತ್ರವಿದು.

ತಮಿಳು ಚಿತ್ರ ಕಾಂಚನಾದ ಕನ್ನಡ ರಿಮೇಕ್‌ ಚಿತ್ರ ಕಲ್ಪನಾ. ಹಾರರ್‌ ಮತ್ತು ಥ್ರಿಲ್ಲರ್‌ನ ಈ ಚಿತ್ರ ಕನ್ನಡದಲ್ಲೂ ಯಶಸ್ಸನ್ನು ಗಳಿಸಿತು. ಚಿತ್ರದಲ್ಲಿ ನಾಯಕ ಉಪೇಂದ್ರ ಮೇಲೆ ಪ್ರೇತದ ಆವಾಹನೆ ಆಗುತ್ತದೆ. ಈ ಹಾರರ್‌ ಶೇಡ್‌ನಲ್ಲಿ ಉಪೇಂದ್ರ ಅಭಿನಯ ಮೆಚ್ಚುಗೆ ಗಳಿಸಿತ್ತು.

2012ರಲ್ಲಿ ತೆರೆಕಂಡ ಚಿತ್ರ ಕಲ್ಪನಾ - 2 ಶೂಟಿಂಗ್‌ ಈಗ ನಡೆದಿದೆ. ಇದು ಕೂಡ ತಮಿಳಿನಲ್ಲಿ ತೆರೆಕಂಡ ಕಾಂಚನಾ - 2 ಚಿತ್ರದ ರಿಮೇಕ್‌. ಕನ್ನಡದಲ್ಲಿ ಪ್ರಿಯಾ ಮಣಿ ಮತ್ತು ಅವಂತಿಕಾ ಶೆಟ್ಟಿ ಉಪೇಂದ್ರರಿಗೆ ನಾಯಕಿಯರು.

ದಂಡುಪಾಳ್ಯ

ಶ್ರೀನಿವಾಸ ರಾಜು ಇದನ್ನು ನಿರ್ದೇಶಿಸಿದ್ದು, ಪೂಜಾ ಗಾಂಧಿ, ಮಕರಂದ್‌ ದೇಶಪಾಂಡೆ ಹಾಗೂ ಇತರರು ನಟಿಸಿದ್ದಾರೆ. ದಂಡುಪಾಳ್ಯ ಹಂತಕರ ಕತೆಯನ್ನೇ ಸಿನಿಮಾ ಮಾಡಿದ್ದರು ನಿರ್ದೇಶಕ. ದಂಡುಪಾಳ್ಯ ಗ್ಯಾಂಗ್‌ನವರ ಅಮಾನುಷ ಕೃತ್ಯಗಳನ್ನು ಬೆಚ್ಚಿಬೀಳಿಸುವಂತೆ ಸೆರೆಹಿಡಿದಿದ್ದರು. ಈಗ ಇದರ ಮುಂದುವರಿದ ಭಾಗ ಸೆಟ್ಟೇರಿದೆ.

ಶ್ರೀನಿವಾಸ ರಾಜು ನಿರ್ದೇಶನದಲ್ಲೇ ಈ ಚಿತ್ರ ತೆರೆಗೆ ಬರಲಿದ್ದು, ಪೂಜಾ ಮತ್ತು ಮಕರಂದ್‌ ದೇಶಪಾಂಡೆ ಇದರಲ್ಲೂ ನಟಿಸುತ್ತಿದ್ದಾರೆ. ಮೊದಲ ಭಾಗದ ಮುಂದುವರಿದ ಭಾಗ ಅನ್ನುವುದಕ್ಕಿಂತ 1995ರಲ್ಲಿ ನಡೆದ ಘಟನೆಗಳನ್ನಾಧರಿಸಿದ ಇನ್ನೊಂದು ಕತೆ ಇದೆ ಎನ್ನುತ್ತಾರೆ ನಿರ್ದೇಶಕರು. ಇದೇ ವರ್ಷ ತೆರೆ ಕಾಣುವ ಸಾಧ್ಯತೆ ಇದೆ.

ಶಿವಲಿಂಗ

ಪಿ. ವಾಸು ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದು ಶಿವರಾಜ್‌ ಕುಮಾರ್‌, ವೇದಿಕಾ ನಟಿಸಿದ್ದಾರೆ.

ಕ್ರೈಮ್‌ ಮತ್ತು ಸಸ್ಪೆನ್ಸ್‌ ಇರುವ ಈ ಚಿತ್ರ ಹಿಟ್‌ ಲಿಸ್ಟಿಗೆ ಸೇರಿದೆ. ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾದ ಪ್ರಕರಣವನ್ನು ಭೇದಿಸುವ ಸಿಐಡಿ ಇನ್ವೆಸ್ಟಿಗೇಷನ್‌ ಆಫೀಸರ್‌ ಪಾತ್ರದಲ್ಲಿ ಶಿವರಾಜ್‌ ಕುಮಾರ್‌ ನಟಿಸಿದ್ದಾರೆ. ಚಿತ್ರದ ಕ್ಲೈಮಾಕ್ಸ್‌ ನಂತರದ ಕತೆ ಇನ್ನೊಂದು ಚಿತ್ರವಾಗಲಿದೆ.

ಶಿವಲಿಂಗ - 2 ಚಿತ್ರದ ಬಗ್ಗೆ ಬಹಳ ಬೇಗ ಪ್ರಕಟಿಸಲಾಯಿತು. ಇದರಲ್ಲೂ ಶಿವರಾಜ್‌ ಹೀರೋ. ನಾಯಕ ಇನ್ವೆಸ್ಟಿಗೇಷನ್‌ ಕೆಲಸದಿಂದ ಹೊರಬಂದು ಪತ್ನಿಯೊಂದಿಗೆ ಬಾಳಬೇಕೆಂದು ಬಯಸುತ್ತಾನೆ. ಆದರೆ, ಮತ್ತೆ ಪ್ರಕರಣ ಪತ್ತೆಯಲ್ಲಿ ತೊಡಗಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಉಗ್ರಂ

ಪ್ರಶಾಂತ್‌ ನೀಲ್‌ ನಿರ್ದೇಶಿಸಿ, ಶ್ರೀಮುರಳಿ, ಹರಿಪ್ರಿಯಾ, ತಿಲಕ್‌ ನಟಿಸಿದ ಚಿತ್ರವಿದು.

2014ರಲ್ಲಿ ತೆರೆಕಂಡ ಈ ಚಿತ್ರ ಬಾಕ್ಸ್‌ ಆಫೀಸ್‌ ಕೊಳ್ಳೆಹೊಡೆಯಿತು. ಶ್ರೀಮುರಳಿಗೆ ಬ್ರೇಕ್‌ ಕೊಟ್ಟ ಚಿತ್ರ. ಅಷ್ಟೇ ಅಲ್ಲ, ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲಾ ಉಗ್ರಂ ಹೆಸರಿನಿಂದ ಗುರುತಿಸಲ್ಪಟ್ಟರು. ಈಗ ಇದರ ಮುಂದುವರಿದ ಭಾಗ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ.

ಮೊದಲ ಭಾಗದಲ್ಲಿ ಸ್ನೇಹಿತರಾದ ಅಗಸ್ತ್ಯ ಮತ್ತು ಬಾಲಾ ನಡುವೆ ವೈರತ್ವ ಕಾಣಿಸಿಕೊಂಡಿದೆ. ಉಗ್ರಂ - 2 ಚಿತ್ರ ಮಾಡುವುದಕ್ಕೆ ಉತ್ತಮ ಫ್ಲಾಟ್‌ ಕ್ರಿಯೇಟ್‌ ಆಗಿದೆ. ಇದನ್ನೂ ಶ್ರೀಮುರಳಿ ಅಭಿನಯದಲ್ಲಿ, ಪ್ರಶಾಂತ್‌ ನೀಲ್‌ ನಿರ್ದೇಶಿಸಲಿದ್ದಾರೆ. ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

ಸೈನಿಕ

ಕೆ. ಮಹೇಶ್‌ ಸುಖಧರೆ ನಿರ್ದೇಶಿಸಿ, ಯೋಗೇಶ್ವರ್‌, ಸಾಕ್ಷಿ ಶಿವಾನಂದ್‌ ಬಣ್ಣ ಹಚ್ಚಿದ ಸಿನಿಮಾವಿದು.

ಹುಡುಗಿಯೊಬ್ಬಳನ್ನು ಪ್ರೀತಿಸುವ ಸೈನಿಕನ ಕತೆ ಇದರಲ್ಲಿದೆ. ಇದು 2002ರಲ್ಲಿ ತೆರೆಕಂಡಿತ್ತು.ಇದರ ಮುಂದುವರಿದ ಭಾಗ 12 ವರ್ಷಗಳ ನಂತರ ಸೆಟ್ಟೇರಿದೆ.

ಸೈನಿಕ -2 ಎಂದೇ ಹೆಸರಿನಿಂದ ತೆರೆಗೆ ಬರಲಿರುವ ಚಿತ್ರದ ಬಗ್ಗೆ ಪ್ರಕಟಿಸಲಾಗಿದೆ. ಇದರಲ್ಲಿ ಯುದ್ಧ ಮತ್ತು ಲವ್‌ ಸ್ಟೋರಿ ಎರಡನ್ನೂ ಒಳಗೊಂಡ ಕತೆ ಇದೆ. ಈ ಚಿತ್ರದಲ್ಲಿ ನಾಯಕಿಯಾಗಿ ಅವರ ಮಗಳು ನಿಶಾ ನಟಿಸಲಿದ್ದಾರೆ. ಯೋಗೇಶ್ವರ್‌ ಕೂಡಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಇದೆ.

ಕೆಂಡಸಂಪಿಗೆ

ದುನಿಯಾ ಸೂರಿ ನಿರ್ದೇಶಿಸಿ, ಸುನಿ, ಮಾನ್ವಿತಾ, ಸಿದ್ಧಿ ನಟಿಸಿದ ಚಿತ್ರವಿದು. ಸೂರಿ ಮೊದಲು ಚಿತ್ರದ ಭಾಗ ಎರಡನ್ನು ತೆರೆಗೆ ತಂದು, ನಂತರ ಅದರ ಮೊದಲ ಭಾಗ ಮತ್ತು ಮೂರನೇ ಭಾಗವನ್ನು ರಿಲೀಸ್‌ ಮಾಡಲು ನಿರ್ಧರಿಸಿದ್ದರು. ಹಾಗಾಗಿ ತೆರೆ ಕಂಡ ಕೆಂಡಸಂಪಿಗೆ ಚಿತ್ರದ ಕೊನೆಯಲ್ಲಿ ಕೆಂಡಸಂಪಿಗೆ-'ಗಿಣಿಮರಿ ಕೇಸ್‌ ಪಾರ್ಟ್‌ 2' ಎಂಬ ಟ್ಯಾಗ್‌ ಲೈನ್‌ ಕೊಟ್ಟಿದ್ದರು. ತೆರೆಕಂಡಿರುವ ಕೆಂಡಸಂಪಿಗೆಯಲ್ಲಿ ಇಬ್ಬರು ಲವರ್ಸ್‌ ಮತ್ತು ಪೊಲೀಸರ ನಡುವಿನ ಚೇಸಿಂಗ್‌ ಸ್ಟೋರಿ ಇತ್ತು. ಸೂರಿ ಪ್ರಕಾರ ಕೆಂಡಸಂಪಿಗೆ ಚಿತ್ರದ ಮೊದಲ ಭಾಗ 'ಕಾಗೆ ಬಂಗಾರ' ಎನ್ನುವ ಚಿತ್ರವಾಗಿ, ಮುಂದುವರಿದ ಭಾಗ 'ಬ್ಲಾಕ್‌ ಮ್ಯಾಜಿಕ್‌' ಹೆಸರಿನಲ್ಲಿ ತೆರೆಗೆ ಬರಲಿದೆ. ಈ ವರ್ಷ ಒಂದು ಚಿತ್ರ ರಿಲೀಸ್‌ ಆಗುವ ಸಾಧ್ಯತೆ ಇದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>