Quantcast
Channel: VijayKarnataka
Viewing all articles
Browse latest Browse all 6795

ಮತ್ತೆ ಕ್ರಿಕೆಟ್‌ ಆಡಲಿದ್ದಾರೆ ಸ್ಟಾರ್‌ ನಟರು

$
0
0

ಕನ್ನಡದ ಸ್ಟಾರ್‌ ಕ್ರಿಕೆಟ್‌ ಲೀಗ್‌ ಮತ್ತೆ ಬರಲಿದೆ. ಕಳೆದ ಬಾರಿ ಕನ್ನಡ ನೃತ್ಯ ನಿರ್ದೇಶಕರ ಸಂಘ ಡಾ. ರಾಜ್‌ಕುಮಾರ್‌ ಹೆಸರಿನಲ್ಲಿ ಟೂರ್ನಮೆಂಟ್‌ ಆಯೋಜಿಸಿದ್ದರೆ, ಈ ಬಾರಿ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ) ಸ್ಟಾರ್‌ ಕ್ರಿಕೆಟ್‌ ಲೀಗ್‌ ಆಯೋಜಿಸುತ್ತಿದೆ. ಇದರ ಇನ್ನೊಂದು ವಿಶೇಷವೆಂದರೆ, ಹೆಣ್ಣು ಮಗು ನಮ್ಮ ನಗು ಎಂಬ ವೀಡಿಯೋ ಸಾಂಗ್‌ ಸಿದ್ಧಪಡಿಸಲು ಆಲೋಚಿಸಿದೆ. ಇತ್ತೀಚೆಗೆ ಲೋಗೋ ಲಾಂಚ್‌ ಮಾಡಲಾಯಿತು.

ಈ ಬಾರಿಯ ಸ್ಟಾರ್‌ ಕ್ರಿಕೆಟ್‌ ಲೀಗ್‌ ವಿಶೇಷತೆಯಿಂದ ಕೂಡಿದೆ. 8 ತಂಡಗಳು ಆಡಲಿದ್ದು, ಜೂನ್‌ ಅಥವಾ ಜುಲೈನಲ್ಲಿ ಟೂರ್ನಮೆಂಟ್‌ ನಡೆಯಲಿದೆ. ಪ್ರತಿಯೊಂದು ತಂಡಕ್ಕೂ ಕನ್ನಡದ ಜನಪ್ರಿಯ ನಟರ ಹೆಸರನ್ನು ಇಟ್ಟಿರುವುದು ವಿಶೇಷ. ಈ ತಂಡಗಳಿಗೆ ಸೂಪರ್‌ ಸ್ಟಾರ್‌ಗಳು ಕ್ಯಾಪ್ಟರ್‌ ಆಗಿದ್ದಾರೆ. ಡಾ. ರಾಜ್‌ ಕುಮಾರ್‌, ಡಾ. ವಿಷ್ಣುವರ್ಧನ್‌, ವಜ್ರಮುನಿ, ಶಂಕರ್‌ನಾಗ್‌, ತೂಗುದೀಪ ಶ್ರಿನಿವಾಸ್‌, ಸುಂದರ್‌ ಕೃಷ್ಣ ಅರಸ್‌, ಶಕ್ತಿಪ್ರಸಾದ್‌, ಸುಧೀರ್‌ ಹೆಸರುಗಳನ್ನು ತಂಡಕ್ಕೆ ಇಡಲಾಗಿದೆ. ಡಾ. ರಾಜ್‌ ಕುಮಾರ್‌ ತಂಡಕ್ಕೆ ರಾಘವೇಂದ್ರ ರಾಜ್‌ಕುಮಾರ್‌ ಕ್ಯಾಪ್ಟನ್‌ ಆದರೆ, ವಿಷ್ಣುವರ್ಧನ್‌ ತಂಡಕ್ಕೆ ಶಿವರಾಜ್‌ಕುಮಾರ್‌ ಕ್ಯಾಪ್ಟನ್‌ ಆಗಿರುವುದು ವಿಶೇಷ. ಉಪೇಂದ್ರ ಶಂಕರ್‌ ನಾಗ್‌ ಟೀಮ್‌ ಲೀಡ್‌ ಮಾಡಲಿದ್ದಾರೆ. ಆಟೋ ಡ್ರೈವರ್ಸ್‌ ಶಂಕರ್‌ ನಾಗ್‌ ನಂತರ ಉಪೇಂದ್ರರಿಗೆ ಫ್ಯಾನ್‌ ಆಗಿರುವುದು ಗಮನಕ್ಕೆ ಬಂತು ಎಂದು ನಿರ್ದೇಶಕ ಪಿ. ಶೇಷಾದ್ರಿ ಹೇಳಿದ್ದಾರೆ.

ಚಿತ್ರರಂಗದ ಸುಮಾರು 120ಕ್ಕೂ ಹೆಚ್ಚು ನಟರು ಕ್ರಿಕೆಟ್‌ ಆಡಲಿದ್ದಾರೆ. ಪುನೀತ್‌ ರಾಜ್‌ಕುಮಾರ್‌, ಉಪೇಂದ್ರ, ದರ್ಶನ್‌, ಯಶ್‌, ಶಿವರಾಜ್‌ಕುಮಾರ್‌, ಸುದೀಪ್‌, ವಿಜಯ್‌, ಶ್ರೀಮುರಳಿ, ಗಣೇಶ್‌, ಪ್ರೇಮ್‌, ಪ್ರಜ್ವಲ್‌ ದೇವರಾಜ್‌, ಧನಂಜಯ್‌ ಮತ್ತಿತರರು ಈ ತಂಡಗಳಲ್ಲಿರುತ್ತಾರೆ. ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ಮ್ಯಾಚ್‌ ನಡೆಯಲಿದೆ. ಎಲ್ಲಕ್ಕಿಂತ ವಿಶೇಷವೆಂದರೆ ಫೈನಲ್‌ ಪಂದ್ಯ ದುಬೈನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್‌. ರಮೇಶ್‌ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>