Quantcast
Channel: VijayKarnataka
Viewing all articles
Browse latest Browse all 6795

ಸಾಲಬಾಧೆ: ರೈತ ಆತ್ಮಹತ್ಯೆ

$
0
0

ಹೊಳೆನರಸೀಪುರ: ಕಬ್ಬು ಬೆಳೆದು ನಷ್ಟ ಅನುಭವಿಸಿದ್ದ ಅವಿವಾಹಿತ ರೈತ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡರು.

ತಾಲೂಕಿನ ಬಾಗೀವಾಳು ಗ್ರಾಮದ ರೈತ ಗುರುಮಲ್ಲೇಶ(47) ಮೃತರು.

ಕಳೆದ ಎರಡು ಬಾರಿ ಕಬ್ಬು ಹಾಕಿದ್ದಾಗಲೂ ನಷ್ಟ ಹೊಂದಿದ್ದರು. ಒಮ್ಮೆ ಬೆಳೆ ನಷ್ಟವಾಗಿತ್ತು. ಕಳೆದ ಬಾರಿ ಉತ್ತಮ ಫಸಲು ಬಂದರೂ ಬೇಡಿಕೆ ಇಲ್ಲದೆ ಬೆಲೆ ಸಿಕ್ಕಿರಲಿಲ್ಲ. ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 48 ಸಾವಿರ ರೂ. ಸಾಲ ಬಾಕಿ ಉಳಿದಿದೆ. 2 ಲಕ್ಷ ದ ವರೆಗೂ ಕೈಸಾಲ ಮಾಡಿದ್ದರು. ತಾತನಿಂದ ಬಂದಿದ್ದ 5 ಎಕರೆ 18 ಗುಂಟೆ ಜಮೀನು ಮೃತ ಗುರುಮಲ್ಲೇಶ್‌ ಹೆಸರಿನಲ್ಲಿತ್ತು. ಇದಲ್ಲದೆ ತಂದೆ ಸಂಪಾದಿಸಿದ್ದ 5 ಎಕರೆ ಜಮೀನು ಸಹ ಇತ್ತು. ತಾಯಿ ಗೌರಮ್ಮ, ಒಬ್ಬ ಅಣ್ಣ ಮತ್ತು ತಮ್ಮ ಸೇರಿದಂತೆ ಅವಿಭಕ್ತ ಕುಟುಂಬದ ಸದಸ್ಯನಾಗಿದ್ದರು. ತಂದೆ ಸತ್ತ ನಂತರ ಮನೆಯ ಜವಾಬ್ದಾರಿ ಇವರ ಹೆಗಲಿಗೆ ಇತ್ತು ಎನ್ನುವುದು ಸಹೋದರ ಗುರುಬಸಪ್ಪ ವಿವರಣೆ.

ತಹಸೀಲ್ದಾರ್‌ ರೇಣುಕುಮಾರ್‌ ಭೇಟಿ ನೀಡಿದ್ದರು. ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ದೇವೇಂದ್ರಪ್ಪ ಸ್ಥಳ ಪರಿಶೀಲನೆ ನಡೆಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>