Quantcast
Channel: VijayKarnataka
Viewing all articles
Browse latest Browse all 6795

2 ದಿನದಲ್ಲಿ ನೀರು, ಸ್ವಚ್ಛತೆ ಸಮಸ್ಯೆ ನಿವಾರಣೆಗೆ ಕ್ರಮ

$
0
0

* ಪುರಸಭೆ ಅಧ್ಯಕ್ಷ ರಿಂದ ವಾರ್ಡ್‌ ಭೇಟಿ, 2 ಗಂಟೆಯಲ್ಲೆ ರಿಪೇರಿ ಕಂಡ ಕೊಳವೆಬಾವಿ

ಬೇಲೂರು: ಕಳೆದ 6 ತಿಂಗಳಿನಿಂದ ಬಗೆಹರಿಯದೆ ಇದ್ದ ಕೊಳವೆ ಬಾವಿ ಸಮಸ್ಯೆಯನ್ನು ಕೇವಲ 2 ಗಂಟೆಯೊಳಗೆ ಬಗೆಹರಿಸುವುದರ ಜತೆಗೆ ಸ್ವಚ್ಛತೆ ಹಾಗೂ ಕುಡಿಯುವ ನೀರು ಸಮಸ್ಯೆಯನ್ನು ಕೇವಲ 48 ಗಂಟೆಯೊಳಗೆ ಬಗೆಹರಿಸಲು ಕ್ರಮ ಕೈಗೊಂಡಿರುವ ಪ್ರಕರಣ ಪುರಸಭೆಯಲ್ಲಿ ನಡೆದಿದೆ.

ಅಧ್ಯಕ್ಷ ಟಿ.ಎ.ಶ್ರೀನಿಧಿ ಸ್ವಚ್ಛತೆ, ನೀರಿಗೆ ಹೆಚ್ಚು ಗಮನ ಹರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗುರುವಾರ ಮುಖ್ಯಾಧಿಕಾರಿ ಬಸವರಾಜು, ಆರೋಗ್ಯಾಧಿಕಾರಿ ವೆಂಕಟೇಶ್‌, ಸ್ವಚ್ಛತಾ ಕಾರ್ಯದ ದಫೇದಾರ್‌ ನಾಗರಾಜ್‌ ಹಾಗೂ ಜೂನಿಯರ್‌ ಎಂಜಿನಿಯರ್‌ ಸತ್ಯನಾರಾಯಣ ಅವರೊಂದಿಗೆ ಪುರಸಭೆಯ 3 ಮತ್ತು 4ನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲಿಸಿದರು.

ಭೇಟಿ ಸಮಯದಲ್ಲಿ ಸ್ವಚ್ಛತೆ ಇಲ್ಲದಿರುವುದು ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಕಂಡುಬಂತು. 2 ದಿನದಲ್ಲಿ ನೀರಿನ ಹಾಗೂ ಸ್ವಚ್ಛತೆ ಸಮಸ್ಯೆ ನಿವಾರಿಸುವಂತೆ ಆರೋಗ್ಯಾಧಿಕಾರಿಗಳಿಗೆ ಹಾಗೂ ನಾಗರಾಜ್‌ಗೆ ಸೂಚಿಸಿದರು. 4ನೇ ವಾರ್ಡ್‌ನಲ್ಲಿ ಹಲವು ತಿಂಗಳಿನಿಂದ ದುರಸ್ತಿ ಆಗದೆ ಇದ್ದ ಕೊಳವೆ ಬಾವಿಯನ್ನು ಕೇವಲ 2 ಗಂಟೆಯೊಳಗೆ ದುರಸ್ತಿ ಮಾಡಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಶ್ರೀನಿಧಿ, ಕೇವಲ ಸಮಸ್ಯೆ ಆಲಿಸಿ ಬಂದರಷ್ಟೆ ಸಾಲದೆಂದು ನಿಗದಿತ ವೇಳೆಯೊಳಗೆ ಅಗತ್ಯ ಕೆಲಸ ಪೂರ್ಣವಾಗಬೇಕೆಂಬುದು ನಮ್ಮ ಉದ್ದೇಶ. 23 ವಾರ್ಡ್‌ಗಳಿಗೂ ಭೇಟಿ ನೀಡುತ್ತೇವೆ. 2 ದಿನದಲ್ಲಿ ನೀರಿನ ಹಾಗೂ ಸ್ವಚ್ಛತೆಯ ಕೆಲಸ ಪೂರೈಸಬೇಕು. ಅದು ಆಗದೆ ಮುಂದಿನ ವಾರ್ಡ್‌ನ ಭೇಟಿ ಮಾಡುವುದಿಲ್ಲ. 2 ದಿನದ ನಂತರ ಪುನಃ ಅದೇ ವಾರ್ಡ್‌ಗೆ ತೆರಳಿ ಪರಿಶೀಲಿಸಲಾಗುವುದು. ಇದೀಗ ಶಿವಜ್ಯೋತಿಫಣ ಬೀದಿಯಲ್ಲಿನ ಕೊಳವೆ ಬಾವಿ ದುರಸ್ತಿ ಕೆಲಸ ಹಲವು ತಿಂಗಳಿಂದ ನನೆಗುದಿಗೆ ಬಿದ್ದಿತ್ತು. ಅದನ್ನು ಕೇವಲ 2 ಗಂಟೆಯಲ್ಲಿ ದುರಸ್ತಿಗೊಳಿಸಲಾಗಿದೆ'' ಎಂದರು.

''ಪೌರಕಾರ್ಮಿಕರ, ನೀರು ಸರಬರಾಜು ಸಿಬ್ಬಂದಿ ಕೊರತೆಯಿಲ್ಲ. ಕೆಲವರ ಉದಾಸೀನತೆಯಿಂದ ಸಮಸ್ಯೆ ಉಳಿಯಲು ಕಾರಣವಾಗಿದೆ. ಇದೀಗ ಅದಕ್ಕೆ ಅವಕಾಶವಿಲ್ಲ. ಗುಂಡಿ ಬಿದ್ದು ರಸ್ತೆ, ಬಿದ್ದುಹೋದ ರಸ್ತೆ ಇನ್ನಿತರ ಸಮಸ್ಯೆಗಳು ಇದ್ದರೆ ಕ್ರಿಯಾಯೋಜನೆ ತಯಾರಿಸಿ ಅದರಂತೆ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು. ಭೇಟಿ ವೇಳೆ ವಾರ್ಡ್‌ನ ಜನತೆ ಹಲವು ಸಮಸ್ಯೆಗಳ ಬಗ್ಗೆ ಅಧ್ಯಕ್ಷ ಅಧಿಕಾರಿಗಳ ಗಮನ ಸೆಳೆದರು. ಇನ್ನೊಂದು ವಾರದಲ್ಲಿ ಪಟ್ಟಣದಲ್ಲಿ ಪ್ಲಾಸ್ಟಿಕ್‌ ಅನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲಾಗುವುದು. ನಾನೇ ಖುದ್ದಾಗಿ ತೆರಳಿ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳುತ್ತೇನೆಂದರು.

ಸಿಒ ಬಸವರಾಜು, ಆರೋಗ್ಯಾಧಿಕಾರಿ ವೆಂಕಟೇಶ್‌, ಜೆಇ ಸತ್ಯನಾರಾಯಣ, ದಫೇದಾರ್‌ ನಾಗರಾಜ್‌,


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>