Quantcast
Channel: VijayKarnataka
Viewing all articles
Browse latest Browse all 6795

ನಿತ್ಯ ಜೊತೆ ಸತ್ಯ: ನಿತ್ಯದ ಕತೆಯಲ್ಲಿ ಹಾರರ್ ಸತ್ಯ

$
0
0

ಕನ್ನಡ : ನಿತ್ಯ ಜೊತೆ ಸತ್ಯ

- ಶರಣು ಹುಲ್ಲೂರು

ಪಟ್ರೆ ಲವ್ಸ್ ಪದ್ಮಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಶೀರ್ಷಿಕೆ ಕೇಳಿದವರು, ಈ ಚಿತ್ರಗಳ ಟೈಟಲ್‌ನಂತೆಯೇ ಧ್ವನಿಸುವ ಕಾರಣಕ್ಕೆ 'ನಿತ್ಯ ಜೊತೆ ಸತ್ಯ' ಚಿತ್ರವನ್ನೂ ಆ ಪಟ್ಟಿಗೆ ಸೇರಿಸಿರಬಹುದು. ಆದರೆ, ಈ ಚಿತ್ರ ಅವುಗಳಂತಿಲ್ಲ. ಕ್ಯೂಟ್ ಲವ್‌ಸ್ಟೋರಿಯ ಜೊತೆಗೆ ಹಾರರ್ ಕತೆ ಮಿಕ್ಸ್ ಮಾಡಿದ್ದಾರೆ ನಿರ್ದೇಶಕ ಶ್ರೀನಾಗ್. ಹೀಗಾಗಿ ಹಾರರ್ ಫೀಲ್‌ನಲ್ಲಿ ಪ್ರೇಮಕತೆ ನೋಡಬಯಸುವವರು ನಿತ್ಯ ಜೊತೆ ಸತ್ಯ ಚಿತ್ರಕ್ಕೆ ಹೋಗಬಹುದು.

ಸತ್ಯ (ಮನೀಶ್ ಬಾಬು) ಮತ್ತು ನಿತ್ಯ (ತೇಜಸ್ವಿನಿ) ಪ್ರೇಮಿಗಳು. ಬದುಕನ್ನೂ ಕೂಡ ಅಷ್ಟೇ ಗಾಢವಾಗಿ ಪ್ರೀತಿಸುವಂತವರು. ಯಾರ ಹಂಗಿಲ್ಲದೇ ಹಾರಾಡುವ ಈ ಹಕ್ಕಿಗಳ ಜೀವನದಲ್ಲಿ ಘಟನೆಯೊಂದು ನಡೆಯುತ್ತದೆ. ಅದು ಈ ಜೋಡಿಗಳ ತಲ್ಲಣಕ್ಕೆ ಕಾರಣವಾಗುತ್ತದೆ. ಆ ಘಟನೆ ಯಾವುದು? ಅದರಿಂದ ಅವರು ಪಾರಾಗುತ್ತಾರಾ? ಕೊನೆವರೆಗೂ ಜೋಡಿಯಾಗಿಯೇ ಉಳಿದುಕೊಳ್ಳುತ್ತಾರಾ ಅನ್ನುವ ಕತೆ ಸಿನಿಮಾದಲ್ಲಿದೆ.

ನಿತ್ಯಳ ಪಾತ್ರದಲ್ಲಿ ತೇಜಸ್ವಿನಿ ಲೀಲಾಜಾಲವಾಗಿ ನಟಿಸಿದ್ದಾರೆ. ಅಲ್ಲದೇ ಸಖತ್ ಗ್ಲಾಮರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಮನೀಶ್ ಬಾಬು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಕಷ್ಟ ಪಟ್ಟಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಕಾಣಿಸಿಕೊಳ್ಳುವ ದೇವರಾಜ್, ಕತೆಗೆ ಮತ್ತೊಂದು ತಿರುವು ನೀಡುವಲ್ಲಿ ಯಶಸ್ವಿ ಆಗಿದ್ದಾರೆ. ಕುರಿ ರಂಗ, ಮಿತ್ರ ನಗಿಸುವುದಕ್ಕೆ ಹರಸಾಹಸ ಪಟ್ಟಿದ್ದಾರೆ. ಈ ಚಿತ್ರವು ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಿರುವುದರಿಂದ, ಅಲ್ಲಲ್ಲಿ ಯಾವ ಭಾಷೆಯ ಚಿತ್ರ ಎಂಬ ಗೊಂದಲ ಮೂಡುತ್ತದೆ.

ಲೊಕೇಶನ್ ಸೌಂದರ‌್ಯದಿಂದಾಗಿ ಹಾಡುಗಳು ಕಲರ್‌ಫುಲ್ ಆಗಿ ಕಾಣಿಸುತ್ತವೆ. ರಘು ರಾಮ್ ಸಂಗೀತದಲ್ಲಿ ಮೂಡಿ ಬಂದ ಹಾಡುಗಳಲ್ಲಿ ಸಾಹಿತ್ಯಕ್ಕಿಂತ ಸಂಗೀತದ ಅಬ್ಬರವೇ ಜಾಸ್ತಿ ಅನಿಸುತ್ತದೆ.

ಇತ್ತೀಚೆಗೆ ಕನ್ನಡದಲ್ಲಿ ಹಾರರ್ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಚಿತ್ರದ ನಿರ್ದೇಶಕರು ಅದೇ ಹಾದಿಯಲ್ಲಿ ಸಾಗದೇ, ಹಾರರ್ ಜತೆ ಒಂಚೂರು ರೊಮ್ಯಾನ್ಸ್ ಬೆರೆಸಿ ವಿಭಿನ್ನ ಅನುಭವ ಕಟ್ಟಿಕೊಟ್ಟಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>