Quantcast
Channel: VijayKarnataka
Viewing all articles
Browse latest Browse all 6795

ಜೆಸ್ಸಿ: ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ

$
0
0

ಚಿತ್ರ: ಜೆಸ್ಸಿ (ಕನ್ನಡ)

-ಪದ್ಮಾ ಶಿವಮೊಗ್ಗ

ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಬಹಳ ಕುತೂಹಲ ಕೆರಳಿಸಿತ್ತು. ಟ್ರೇಲರ್, ಹಾಡುಗಳು ಇದೊಂದು ಪ್ರೇಮ ಕತೆ ಅನ್ನೋದನ್ನು ಹೇಳುವಂತಿತ್ತು. ಆದರೆ, ನಿರ್ದೇಶಕ ಜಾಣ್ಮೆಯಿಂದ ಒಂದು ಸಂಗತಿಯನ್ನು ಗುಟ್ಟಾಗಿಟ್ಟು ಚಿತ್ರ ನೋಡುವ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಟ್ರಯಾಂಗಲ್ ಲವ್ ಸ್ಟೋರಿಯಲ್ಲಿ ಮನುಷ್ಯ ಪ್ರೀತಿಯನ್ನು ದಾಟಿ ಕತೆ ತೆಗೆದುಕೊಂಡು ಹೋಗಿದ್ದಾರೆ. ಇದು ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತದೆ. ಇಲ್ಲಿ ಮಧುರವಾದ ಪ್ರೇಮ ಕಾವ್ಯ ಮಾತ್ರ ಇಲ್ಲ. ಎದೆ ನಡುಗಿಸುವ ಪ್ರೀತಿಯೂ ಇದೆ. ಆತ್ಮ ಮತ್ತು ಪ್ರೇತಾತ್ಮಗಳ ಪ್ರೀತಿಯ ವೈಖರಿ ಚಿತ್ರದಲ್ಲಿದೆ.

ಆಗಷ್ಟೇ ಡಾಕ್ಟರ್ ಆಗಿ ಸೇವೆ ಪ್ರಾರಂಭಿಸಿದ ಡಾ. ನಂದಿನಿ (ಪಾರುಲ್) ಪ್ರೀತಿ ಎಂದರೆ ಆತ್ಮಗಳ ಮಿಲನ ಎಂದು ನಂಬಿದವಳು. ಒಬ್ಬರನ್ನು ಪ್ರೀತಿಸಿದ ನಂತರ ಇನ್ನೊಬ್ಬರನ್ನು ಪ್ರೀತಿಸುವುದು ಸಾಧ್ಯವಿಲ್ಲ ಎನ್ನುವವಳು. ಡಾಕ್ಟರ್ ಆದರೂ ದೇವರು, ದೆವ್ವ, ಭೂತಗಳೆಂದರೆ ಹೆದರುವವಳು. ಜೆಸ್ಸಿ (ಧನಂಜಯ್) ಇವಳ ರೂಪಕ್ಕೆ ಮಾರುಹೋಗಿ ಸತ್ತರೂ ಅವಳನ್ನು ಬಿಡಬಾರದು ಎಂದು ನಿರ್ಧರಿಸಿದವನು. ನಂದಿನಿ ಬಾಳಲ್ಲಿ ರಘು ಮುಖರ್ಜಿ ಬರುತ್ತಾನೆ. ಮನೆಯಲ್ಲಿ ತನ್ನ ಮದುವೆ ನಿರ್ಧರಿಸಲಿದ್ದಾರೆ ಎಂದು ಗೊತ್ತಾದ ನಂದಿನಿ ತಾನು ಪ್ರೀತಿಸಿದವನ ಅಮ್ಮನಿಗೆ ಪ್ರೀತಿಯ ವಿಚಾರವನ್ನು ಹೇಳಿಬಿಡಬೇಕು ಎಂದು ಮನೆಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಮಾತ್ರ ಅಲ್ಲ, ಪ್ರೇಕ್ಷಕನಿಗೂ ಒಂದು ಶಾಕ್ ಕಾದಿರುತ್ತೆ. ಕತೆಗೆ ಟ್ವಿಸ್ಟ್ ಇರೋದೇ ಇಲ್ಲಿ. ಮುಂದಿನದನ್ನು ಚಿತ್ರದಲ್ಲಿ ನೋಡಿ.

ಚಿತ್ರದಲ್ಲಿ ಹೊಸತನವಿದೆ. ಉತ್ತಮ ಸ್ಕ್ರಿಪ್ಟ್ ಮಾಡಿರುವ ಪವನ್ ಕುತೂಹಲ ಕೆರಳಿಸುವುದರಲ್ಲಿ, ನೋಡುಗರಿಗೆ ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದಿನಿಯನ್ನು ಇಬ್ಬರೂ ನಾಯಕರು ನೋಡಿದಾಕ್ಷಣ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಮಾತ್ರ ಸಹಜ ಅನ್ನಿಸುವುದಿಲ್ಲ. ಪ್ರೇತದೊಂದಿಗೆ ರೋಮಾನ್ಸ್ ಸಾಧ್ಯವೇ? ಸತ್ತ ಮೇಲೂ ಭಾವನೆಗಳಿರುತ್ತವೆಯೇ ಅನ್ನೋ ಪ್ರಶ್ನೆಬದಿಗಿಟ್ಟು ಫ್ಯಾಂಟಸಿ ಎಂದು ನೋಡೋದಾದ್ರೆ ನೀಟಾದ ಚಿತ್ರ ಇದು. ಸಿಲ್ಲಿ ವಿಷಯವನ್ನೂ ಸಿಲ್ಲಿ ಅನ್ನಿಸದ ಹಾಗೆ ತೋರಿಸಲಾಗಿದೆ. ಅರುಲ್ ಸೋಮಸುಂದರ್ ಛಾಯಾಗ್ರಹಣ, ಸುರೇಶ್ ಅರ್ಮುಗಂ ಸಂಕಲನ ಸುಂದರ. ಹಾರರ್ ಸಿನಿಮಾಗಳಲ್ಲಿ ಕಾಣುವ ವಿಕಾರ ಮತ್ತು ಅಬ್ಬರ ಇಲ್ಲಿಲ್ಲ. ಪ್ರೇತವನ್ನೂ ಡೀಸೆಂಟ್ ಆಗಿ ತೋರಿಸಲಾಗಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಧನಂಜಯ್ ಡಲ್ ಅನ್ನಿಸುತ್ತಾರೆ. ಪಾರೂಲ್ ನಟನೆ ಓಕೆ. ಮೆಚ್ಯೂರ್ಡ್ ಗಂಡನಾಗಿ ರಘು ಮುಖರ್ಜಿ ಅಭಿನಯ ಎಕ್ಸಲೆಂಟ್. ಚಿಕ್ಕ ಕಾಮಿಡಿ ದೃಶ್ಯಗಳಲ್ಲಿ ಚಿಕ್ಕಣ್ಣ ಮತ್ತು ಸಾಧು ಸಿಳ್ಳೆ ಗಿಟ್ಟಿಸುತ್ತಾರೆ. ಗೌತಮಿ ಸೇರಿದಂತೆ ಉಳಿದೆಲ್ಲಾ ನಟರ ಅಭಿನಯ ಗುಡ್.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>