Quantcast
Channel: VijayKarnataka
Viewing all articles
Browse latest Browse all 6795

51ರಿಂದ 113 ಕೋಟಿಗೆ ಜಿಗಿದ ಜಯಾ ಆಸ್ತಿ ಮೌಲ್ಯ

$
0
0

ಚೆನ್ನೈ: ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಘೋಷಿಸಿದ್ದಾರೆ. ಅವರು ಹೊಂದಿರುವ ಆಸ್ತಿಯ ಮೌಲ್ಯ 113.58 ಕೋಟಿ ರೂ.ಗೆ ಏರಿಕೆ ಆಗಿದೆ.

2011ರ ಚುನಾವಣೆಗೆ ಹೋಲಿಸಿದರೆ ಜಯಾ ಆಸ್ತಿ ಮೌಲ್ಯದಲ್ಲಿ 121% ಏರಿಕೆ ಕಂಡಿದೆ. 2011ರಲ್ಲಿ ಶ್ರೀರಂಗಂ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲವು ಸಾಧಿಸಿದ್ದ ಜಯಲಲಿತಾ, ಆಗ 51.40 ಕೋಟಿ ರೂ. ಆಸ್ತಿ ಹೊಂದಿದ್ದರು. ಕಳೆದ ಐದು ವರ್ಷಗಳಲ್ಲಿ ರಿಯಲ್‌ ಎಸ್ಟೇಟ್‌ ಮೌಲ್ಯ ದುಪ್ಪಟ್ಟು ಕಂಡಿರುವುದೇ ಅವರ ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರಣ.

ಜಯಲಲಿತಾ ವಾಸಿಸುತ್ತಿರುವ ಪೋಯೆಸ್‌ ಗಾರ್ಡನ್‌ ಬಂಗಲೆಯನ್ನು 1967ರಲ್ಲಿ ಅವರ ತಾಯಿ ಸಂಧ್ಯಾ ಮತ್ತು ಜಯಲಲಿತಾ ಜಂಟಿಯಾಗಿ 1.32 ಲಕ್ಷರೂ.ಗೆ ಖರೀದಿಸಿದ್ದರಂತೆ. 2011ರಲ್ಲಿ ಈ ಬಂಗಲೆಯ ಮೌಲ್ಯ 20 ಕೋಟಿ ರೂ.ಗೆ ಏರಿಕೆ ಆಗಿತ್ತು. ಅದರ ಮೌಲ್ಯವೀಗ 44 ಕೋಟಿ ರೂ.ಗೆ ಜಿಗಿದಿದೆ.

ಕೊಡನಾಡ್‌ ಎಸ್ಟೇಟ್‌ನಲ್ಲಿ 3.1 ಕೋಟಿ ರೂ. ಮೌಲ್ಯದ ಪಾಲುದಾರಿಕೆ ಸೇರಿದಂತೆ ಎರಡು ಎಸ್ಟೇಟ್‌ಗಳಲ್ಲಿ ಪಾಲುದಾರಿಕೆ ವ್ಯವಹಾರ ಹೊಂದಿರುವ ಜಯಲಿಲತಾ, ಮತ್ತೆ 2 ಕಂಪನಿಗಳಲ್ಲಿ 60.53 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಅವರು ಹೊಂದಿರುವ ವಾಣಿಜ್ಯ ಕಟ್ಟಡಗಳ ಮೌಲ್ಯ ಇದೀಗ 6.91 ಕೋಟಿ ರೂ.ನಿಂದ 13.34 ಕೋಟಿ ರೂ.ಗೆ ಹೆಚ್ಚಳ ಕಂಡಿದೆ.

ವಿವಿಧ ಬ್ಯಾಂಕ್‌ಗಳಲ್ಲಿ ಹೊಂದಿರುವ ಠೇವಣಿ ಮೊತ್ತ 10.63 ಕೋಟಿ ರೂ. ಅದರಲ್ಲಿ 2.47 ಕೋಟಿ ರೂ. ಹಣವನ್ನು ಅಕ್ರಮ ಸಂಪತ್ತಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಶಕ್ಕೆ ತೆಗೆದುಕೊಂಡಿದೆ. ಜಯಲಲಿತಾ ಠೇವಣಿ ಮೇಲೆ 1.40 ಕೋಟಿ ರೂ. ಸಾಲ ಪಡೆದಿದ್ದಾರೆ.

1980ರ ಮಾಡೆಲ್‌ ಅಂಬಾಸಿಡರ್‌ ಕಾರು ಈಗಲೂ ಜಯಾ ಬಳಿ ಇದೆ. ಆದರೆ ಕಳೆದ 2 ವರ್ಷಗಳಲ್ಲಿ ಅವರು ತಲಾ 20 ಲಕ್ಷ ರೂ. ಮೌಲ್ಯದ 2 ಟೊಯೊಟಾ ಪ್ರಾಡೊ ಕಾರುಗಳನ್ನು ಖರೀದಿಸಿದ್ದಾರೆ. ಕಾಂಟೆಸ್ಸಾ, ಮಹೀಂದ್ರಾ ಜೀಪ್‌, ಬೊಲೆರೊ, ಟೆಂಪೊ ಟ್ರಾವೆಲರ್‌, ಟೆಂಪೊ ಟ್ರಾಕ್ಸ್‌, ಸ್ವರಾಜ್‌ ಮಜ್ಡಾ ಮ್ಯಾಕ್ಸಿ ವಾಹನಗಳೂ ಅವರ ಸಂಗ್ರಹದಲ್ಲಿವೆ.

ಕರುಣಾ ಆಸ್ತಿ 13.42 ಕೋಟಿ ರೂ.!

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ವಿವರದ ಪ್ರಕಾರ, ಅವರ ಒಟ್ಟು ಆಸ್ತಿಯ ಮೌಲ್ಯ 13.42 ಕೋಟಿ ರೂ. ಮೇ 16ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಅವರು ತಿರುವಾವೂರು ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಕರುಣಾನಿಧಿ ಅವರ ಬಳಿ ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ಥಿರ ಆಸ್ತಿ ಇಲ್ಲವಂತೆ. ಅವರ ಪತ್ನಿ ಹೆಸರಿನಲ್ಲಿ 45.34 ಕೋಟಿ ರೂ. ಮೌಲ್ಯದ ಚರ ಆಸ್ತಿ ಇದೆ. 2014-15ನೇ ಸಾಲಿನಲ್ಲಿ ಕರುಣಾನಿಧಿ ಅವರ ಒಟ್ಟು ಆದಾಯ 1.21 ಕೋಟಿ ರೂ.

ಸ್ಪರ್ಧೆಯಿಂದ ವೈಕೊ ದೂರ

ಎಂಡಿಎಂಕೆ ವರಿಷ್ಠ ಹಾಗೂ ಡಿಎಂಡಿಕೆ, ಪಿಡಬ್ಲ್ಯುಎಫ್‌ ಮತ್ತು ಟಿಎಂಸಿ ಮೈತ್ರಿಕೂಟದ ಕೂವಾರಿ ವೈಕೊ ಈ ಬಾರಿ ಚುನಾವಣಾ ಸ್ಪರ್ಧೆಯಿಂದ ದೂರ ಉಳಿದು, ಪಕ್ಷದ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

ತೇವಾರ್‌ ಮತ್ತು ನೈಖರ್‌ ಸಮುದಾಯಗಳ ನಡುವೆ ಜಾತಿ ಹಿಂಸಾಚಾರ ಪ್ರಚೋದಿಸಲು ಡಿಎಂಕೆ ಯೋಜನೆ ರೂಪಿಸಿದೆ ಎಂದು ಆರೋಪಿಸಿರುವ ವೈಕೊ, ಮೈತ್ರಿಕೂಟ ಗೆಲುವಿಗೆ ಶ್ರಮ ವಹಿಸಿ, ಕೆಲಸ ಮಾಡುವುದಾಗಿ ಪ್ರಕಟಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>