Quantcast
Channel: VijayKarnataka
Viewing all articles
Browse latest Browse all 6795

ಮಂದೇಯಂಡ, ಕರಿನೆರವಂಡ ತಂಡಕ್ಕೆ ಗೆಲುವು

$
0
0

ಶಾಂತೆಯಂಡ ಕಪ್ ಕೊಡವ ಹಾಕಿ ಹಬ್ಬ
* ಐತಿಚಂಡ ರಮೇಶ್ ಉತ್ತಪ್ಪ, ಮಡಿಕೇರಿ
ಮಿಂಚಿನ ವೇಗದಲ್ಲಿ ಅಜಿತ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಮಂದೇಯಂಡ ತಂಡ ಜಯಗಳಿಸಿದರೆ, ಮತ್ತೊಂದು ಬಲಿಷ್ಠ ತಂಡ ಕರಿನೆರವಂಡ ಅರ್ಹ ಜಯ ದಾಖಲಿಸಿದೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 20ನೇ ವರ್ಷದ ಕೊಡವ ಹಾಕಿ ಹಬ್ಬ ಶಾಂತೆಯಂಡ ಕಪ್‌ನಲ್ಲಿ ಸೋಮವಾರ ನಡೆದ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿದ್ದವು.

ಮಂದೇಯಂಡ ತಂಡ 4-0 ಗೋಲುಗಳಿಂದ ಹರಿಹರ ಮುಕ್ಕಾಟಿರ ತಂಡವನ್ನು ಮಣಿಸಿತು. ಉಭಯ ತಂಡಗಳು ಗೋಲುಗಳಿಸಲು ತೀವ್ರ ಯತ್ನ ನಡೆಸಿದರೂ ಮಂದೇಯಂಡ ತಂಡದ ಮುನ್ನಡೆ ಆಟಗಾರರ ನಿಖರ ಹೊಡೆತಗಳಿಂದಾಗಿ ಗೋಲು ದಾಖಲಾಯಿತು. ಅಜಿತ್ ಹ್ಯಾಟ್ರಿಕ್ ಸಾಧನೆ ಮಾಡಿದರೆ, ಮತ್ತೊಂದು ಗೋಲನ್ನು ಯತೀಶ್ ಬಾರಿಸಿದರು.

ಕೊಡವ ಹಾಕಿ ಹಬ್ಬದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಕರಿನೆರವಂಡ ಕುಟುಂಬ ತಂಡ ಬಲಿಷ್ಠ ಕಾಂಡೆರ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ಅತ್ಯುತ್ತಮ ಹೋರಾಟದಿಂದ ಕೂಡಿದ ಪಂದ್ಯ ಪ್ರೇಕ್ಷಕರಿಗೆ ಮುದ ನೀಡಿತು. ಈ ತಂಡಗಳ ಆಟ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಕರಿನೆರವಂಡ ಚುರುಕಿನ ಮುನ್ನಡೆ ಆಟಗಾರರಾದ ಯತೀಶ್ ಸೋಮಣ್ಣ, ವಸಂತ್ ಪೊನ್ನಪ್ಪ ಹಾಗೂ ಬಿದ್ದಪ್ಪ ಗೋಲು ಬಾರಿಸಿದರು.

ಹಾಕಿ ಹಬ್ಬದಲ್ಲಿ ಪ್ರಶಸ್ತಿಯತ್ತ ಸಾಗುವ ಮತ್ತೊಂದು ಬಲಿಷ್ಠ ತಂಡವಾಗಿರವ ಮಂಡೇಟಿರ 4-0 ಗೋಲುಗಳ ಅಂತರದಿಂದ ಕುಟ್ಟೇಟಿರ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಮಂಡೇಟಿರ ವಿನಯ್ ಎರಡು ಗೋಲು ಬಾರಿಸಿದರೆ, ಭರತ್ ಹಾಗೂ ನಿಶಾಲ್ ಉಳಿದೆರಡು ಗೋಲುಗಳನ್ನು ತಮ್ಮ ಹೆಸರಿನಲ್ಲಿ ಜಮೆ ಮಾಡಿದರು.

ಬಲ್ಲಚಂಡ ತಂಡ ಚೆರುಮಂದಂಡ ತಂಡವನ್ನು 4-0 ಗೋಲುಗಳಿಂದ, ಸಣ್ಣುವಂಡ ತಂಡ 2-0 ಗೋಲುಗಳಿಂದ ಕಾಳೇಂಗಡ ತಂಡವನ್ನು, ಕೊಕ್ಕಂಡ 4-0 ಗೋಲಿನಿಂದ ದೇಯಂಡ ವಿರುದ್ಧ ಜಯ ದಾಖಲಿಸಿ ಮೂರನೇ ಹಂತಕ್ಕೆ ನೆಗೆಯಿತು.

ಅತ್ಯುತ್ತಮ ಆಟಗಾರರನ್ನು ಹೊಂದಿರುವ ಪೆಮ್ಮಂಡ ತಂಡ 6-0 ಗೋಲುಗಳ ಅಂತರದಿಂದ ಮೊಳ್ಳೆರ ತಂಡವನ್ನು ಮಣಿಸಿತು. ಮಚ್ಚಾರಂಡ 2-0 ಗೋಲುಗಳಿಂದ ಬಾರಿಯಂಡ, ಕೊಂಗೇಟಿರ 3-0 ಗೋಲುಗಳಿಂದ ಪುಳ್ಳಂಗಡ, ತೀತಮಾಡ ತಂಡ 1-0 ಗೋಲಿನಿಂದ ಚೇನಂಡ, ಕಾಳಿಮಾಡ ತಂಡ 2-0 ಗೋಲಿನಿಂದ ಪುಲ್ಲೆರ ತಂಡವನ್ನು ಮಣಿಸಿ ಮುಂದಿನ ಸುತ್ತನ್ನು ಖಾತರಿ ಪಡಿಸಿಕೊಂಡಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>