Quantcast
Channel: VijayKarnataka
Viewing all articles
Browse latest Browse all 6795

ಬಂಗಾರದ ಬೆಲೆ 400 ರೂ. ಏರಿಕೆ

$
0
0

ಹೊಸದಿಲ್ಲಿ: ಬಂಗಾರ ಮತ್ತು ಬೆಳ್ಳಿಯ ಬೆಲೆಯಲ್ಲಿ ಗುರುವಾರ ದಿಢೀರ್‌ ಏರಿಕೆಯಾಗಿದ್ದು, ಸ್ವರ್ಣ ದರ ಪ್ರತಿ 10 ಗ್ರಾಮ್‌ಗೆ 400 ರೂ. ಜಿಗಿದು 29,900 ರೂ.ಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ನಾಣ್ಯ ತಯಾರಕರು ಮತ್ತು ಉದ್ಯಮ ವಲಯದಿಂದ ಬೇಡಿಕೆಯ ಪರಿಣಾಮ ಬೆಳ್ಳಿಯ ದರ ಪ್ರತಿ ಕೆ.ಜಿಗೆ 2,400 ರೂ. ಹೆಚ್ಚಳವಾಗಿ 40,900 ರೂ.ಗೆ ವೃದ್ಧಿಸಿತು.

ಹೊಸದಿಲ್ಲಿಯಲ್ಲಿ 99.9 ಮತ್ತು 99.5 ಪರ್ಸೆಂಟ್‌ ಪರಿಶುದ್ಧ ಚಿನ್ನದ ದರದಲ್ಲಿ 400 ರೂ. ಏರಿದ್ದು, ಅನುಕ್ರಮವಾಗಿ 29,900 ರೂ. ಮತ್ತು 29,750 ರೂ.ನಷ್ಟಿತ್ತು.

ಜಾಗತಿಕ ಮಟ್ಟದಲ್ಲಿ ಸ್ವರ್ಣ ದರ ಶೇ.1.03ರಷ್ಟು ವೃದ್ಧಿಸಿದ್ದು, ಪ್ರತಿ ಔನ್ಸಿಗೆ 1,257.10 ಡಾಲರ್‌ನಷ್ಟು ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 40,000 ರೂ.ಗಳ ಮಟ್ಟವನ್ನು ದಾಟಿದ್ದು, 2,400 ರೂ. ವೃದ್ಧಿಸಿದೆ.

ಪ್ರತಿ 100 ಬೆಳ್ಳಿಯ ನಾಣ್ಯಗಳ ಖರೀದಿ ದರದಲ್ಲಿ 5,000 ರೂ. ಏರಿಕೆಯಾಗಿದ್ದು, 64 ಸಾವಿರ ರೂ.ಗೆ ಮತ್ತು ಮಾರಾಟ ಬೆಲೆ 65 ಸಾವಿರ ರೂ.ಗೆ ವೃದ್ಧಿಸಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>