Quantcast
Channel: VijayKarnataka
Viewing all articles
Browse latest Browse all 6795

ಕಲ್ಲಿದ್ದಲ ಆಮದು ಸ್ಥಗಿತ; 40,000 ಕೋಟಿ ಉಳಿತಾಯ

$
0
0

ಮುಂಬಯಿ: ''ಇಂಧನದ ಉತ್ಪಾದನೆ ಹೆಚ್ಚುತ್ತಿದ್ದು, ಮುಂದಿನ 2-3 ವರ್ಷಗಳಲ್ಲಿ ಉಷ್ಣ ಕಲ್ಲಿದ್ದಲು(ಥರ್ಮಲ್‌ ಕೋಲ್‌) ಆಮದನ್ನು ಭಾರತ ಸಂಪೂರ್ಣ ನಿಲ್ಲಿಸಬಹುದು. ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 40,000 ಕೋಟಿ ರೂ. ಉಳಿತಾಯವಾಗುತ್ತದೆ,'' ಎಂದು ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಹೇಳಿದ್ದಾರೆ.

ಭಾರತೀಯ ಸಾಗರೋದ್ಯಮ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ''ಉಷ್ಟ ಸ್ಥಾವರಕ್ಕೆ ಅಗತ್ಯವಾದ ಕಲ್ಲಿದ್ದಲ ಆಮದನ್ನು ಮುಂದಿನ ವರ್ಷಗಳಲ್ಲಿ ಸ್ಥಗಿತಗೊಳಿಸಬಹುದು. ಅದರೆ, ಉರುವಲಿಗೆ ಬೇಕಾಗುವ ಕಲ್ಲಿದ್ದಲ ಆಮದು ದೇಶಕ್ಕೆ ಅಗತ್ಯವಾಗಲಿದೆ. ಹೀಗಾಗಿ ಭಾರತೀಯ ಕಂಪನಿಗಳ ಜತೆ ಈ ನಿಟ್ಟಿನಲ್ಲಿ ಒಡಂಪಡಿಕೆಗೆ ನಮ್ಮ ಸಚಿವಾಲಯ ಸಿದ್ಧವಿದೆ,'' ಎಂದರು.

''ಈ ಸಮಯವು ಹಡುಗುಗಳ ಖರೀದಿ ಸೇರಿದಂತೆ ಮೂಲಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾಗಿದೆ. ಉರುವಲು ಉದ್ದೇಶದ ಕಲ್ಲಿದ್ದಲ ಆಮದು ಸಂಬಂಧ ಸುದೀರ್ಘ ಅವಧಿಯ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲು ಸರಕಾರ ಸಿದ್ಧವಿದೆ,'' ಎಂದರು.

''ಈಗಾಗಲೇ ಉಷ್ಣ ಕಲ್ಲಿದ್ದಲಿನ ಆಮದನ್ನು ಕಡಿಮೆ ಮಾಡಿದ್ದು, ದೇಶಕ್ಕೆ 28,000 ಕೋಟಿ ರೂ. ಉಳಿಸಿದ್ದೇವೆ. ಮುಂದಿನ ವರ್ಷಗಳಲ್ಲಿ ಸಂಪೂರ್ಣ ಸ್ಥಗಿತಗೊಳಿಸಿ 40,000 ಕೋಟಿ ರೂ.ಗಳನ್ನು ಉಳಿತಾಯ ಮಾಡಲಿದ್ದೇವೆ,'' ಎಂದು ಗೋಯಲ್‌ ಹೇಳಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>