ಹೊಸದಿಲ್ಲಿ: ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ದುಷ್ಟ ಶಕ್ತಿಗಳ ನಿವಾರಣೆಯಾಗಲಿ ಎಂದು ಹಿಂದು ಸೇನೆಯ ವಿದ್ಯಾರ್ಥಿ ಘಟಕ ದೇಶದ ಪ್ರತಿಷ್ಠಿತ ಜವಾಹರ್ ನೆಹರು ವಿಶ್ವವಿದ್ಯಾಲಯ ಆವರಣದಲ್ಲಿ ಎರಡು ವಿಶೇಷ ಪೂಜೆಗಳನ್ನು ನೆರವೇರಿಸಿದೆ.
ಬಹುತೇಕ ಹಿಂದು ವಿದ್ಯಾರ್ಥಿ ಸೇನಾ ಸದಸ್ಯರನ್ನು ಹೊಂದಿರುವ ಮಹಿ ಮಾಂಡವಿ ಹಾಸ್ಟೆಲ್ನಲ್ಲಿ ಶುಕ್ರವಾರ ರಾತ್ರಿ ರಾಮ ನವಮಿ ಮತ್ತು ಭಗವತಿ ಪೂಜೆಗಳನ್ನು ಹಮ್ಮಿಕೊಂಡಿತ್ತು.
'ಶ್ರೀ ರಾಮ ಮತ್ತು ಮಾ ಭಗವತಿ ಭಾರತದಲ್ಲಿರುವ ಎಲ್ಲ ರಾಷ್ಟ್ರ ವಿರೋಧಿಗಳನ್ನು ನಿವಾರಿಸಿ, ದೇಶ ಹಾಗೂ ವಿವಿಯನ್ನು ಕೊಳಕು ಚಿಂತನೆಗಳುಳ್ಳ ಜನರಿಂದ ಮುಕ್ತಗೊಳಿಸಲಿ ಎಂದು ಪ್ರಾರ್ಥಿಸುತ್ತೇವೆ,' ಎಂದು ಅಭಿಯಾನದ ಆಹ್ವಾನ ಪತ್ರಿಕೆಯಲ್ಲಿ ಹೇಳಲಾಗಿತ್ತು.
ಹಿಂದು ಸೇನೆಯ ವಿಷ್ಣು ಗುಪ್ತಾ ಮತ್ತು ಹಿಂದು ಜಾಗರಣ್ ಅಭಿಯಾನದ ಜಿತೇಂದರ್ ಖುರಾನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.
↧
ದುಷ್ಟ ಶಕ್ತಿ ನಿವಾರಣೆಗೆ ಜೆಎನ್ಯುನಲ್ಲಿ ವಿಶೇಷ ಪೂಜೆ
↧