ಭದ್ರತಾಪಡೆಗಳ ಗುಂಡಿಗೆ ಮೂವರು ಮಂಗಳವಾರ ಬಲಿಯಾದ ಮಂಗಳವಾರದಿಂದ ಕಣಿವೆಯಲ್ಲಿ ನಿಷೇಧಾಜ್ಞೆ ರೀತಿಯಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಶ್ರೀನಗರದ ಕೆಲವು ಭಾಗ ಸೇರಿದಂತೆ ಹಲವೆಡೆ ಮೊಬೈಲ್, ಇಂಟರ್ನೆಟ್ ಸಂಪರ್ಕಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ.ಅಂಗಡಿ ಮುಂಗಟ್ಟು, ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕುಪ್ವಾರ, ಹಂದ್ವಾರಗಳಲ್ಲಿ ನಿರ್ಬಂಧ ಬಿಗಿಗೊಳಿಸಲಾಗಿದೆ. ಕೆಲವು ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ.
ಕುಪ್ವಾರದಲ್ಲಿ ಭದ್ರತಾಪಡೆಯ ವಿರುದ್ಧ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ನಡೆದ ಹಿಂಸಾಚಾರದಲ್ಲಿ ಶುಕ್ರವಾರ ಯುವಕನೊಬ್ಬ ಮೃತಪಟ್ಟಿದ್ದು, ಮಂಗಳವಾರದಿಂದ ಈವರೆಗೆ ಒಟ್ಟು ಐವರು ಬಲಿಯಾಗಿದ್ದಾರೆ. ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಮೂವರು ನಾಗರಿಕರು ಮತ್ತು ಭದ್ರತಾಪಡೆಯ 40 ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭದ್ರತಾಪಡೆ ಸಿಬ್ಬಂದಿ ಯುವತಿ ಜತೆ ಕೆಟ್ಟದಾಗಿ ನಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಆರಂಭಗೊಂಡಿರುವ ಘರ್ಷಣೆ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಭದ್ರತಾಪಡೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿಲ್ಲ ಎಂದು ಯುವತಿ ಸ್ಪಷ್ಟನೆ ಕೂಡ ನೀಡಿದ್ದಾರೆ.
ಕಮರಿದ ಕ್ರಿಕೆಟ್ ಪಟು
ಯೋಧ ಯುವತಿ ಜತೆ ಕೆಟ್ಟದಾಗಿ ನಡೆದುಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳೀಯರು ಮತ್ತು ಭದ್ರತಾಪಡೆ ಮಧ್ಯೆ ನಡೆದ ಸಂಘರ್ಷದ ವೇಳೆ ಮೃತಪಟ್ಟಿದ್ದ ಮೂವರಲ್ಲಿ ಒಬ್ಬನಾಗಿರುವ ನಯೀಂ ಖಾದಿರ್ ಭಟ್ ಕ್ರಿಕೆಟ್ ಪಟು. ಆತನ ಜೀವನ ಕ್ರಿಕೆಟ್ ಸುತ್ತ ಸುತ್ತುತ್ತಲೇ ಇತ್ತು, ಆತನ ರೂಂ ತುಂಬಾ ಕ್ರಿಕೆಟ್ ಆಟಗಾರರ ಪೋಟೊಗಳು. ಮನೆಯವರೆಲ್ಲ ಆತನನ್ನು ಗವಾಸ್ಕರ್ ಎಂದೇ ಮನೆಯವರು ಕರೆಯುತ್ತಿದ್ದರು.
ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರ ಪರ ಆಡುವುದು ಆತನ ಕನಸಾಗಿತ್ತು. 2004ರಿಂದ ಅವನು ಮಾಡಿರುವ ಫೇಸ್ಬುಕ್ ಪೋಸ್ಟ್ಗಳು ಅವನಿಗೆ ಕ್ರಿಕೆಟ್ ಮೇಲಿದ್ದ ಅಭಿಮಾನವನ್ನು ಸಾರುತ್ತಿವೆ. ' ಒಂದು ವೇಳೆ ನಾನು ಸತ್ತು ಸ್ವರ್ಗ ಸೇರಿದರೆ ಸ್ಟಾರ್ ಇಲೆವೆನ್ನಲ್ಲಿ ಗೋಲ್ಡನ್ ಸ್ಟಾರ್ ಆಗಿ ಮಿಂಚುವೆ,'ಎಂದೂ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದ ಎಂದು ಕ್ರಿಕೆಟ್ ವೆಬ್ಸೈಟ್ ಹೇಳಿದೆ.
ಹೊಸದಿಲ್ಲಿ/ಶ್ರೀನಗರ: ಕಾಶ್ಮೀರದಲ್ಲಿ ಪ್ರತಿಭಟನೆ ಮುಂದುವರಿಯುತ್ತಿರುವ ಕಾರಣ ಕೇಂದ್ರ ಸರಕಾರವು ಅಲ್ಲಿಗೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲು ನಿರ್ಧರಿಸಿದೆ.