Quantcast
Channel: VijayKarnataka
Viewing all articles
Browse latest Browse all 6795

ವೀಕೆಂಡ್ ಹಾಲಿಡೇಗೆ ಐದು ಕೂಲ್ ಸ್ಪಾಟ್ಸ್

$
0
0

ಈ ಬಾರಿಯ ಹೋಳಿ ಹಬ್ಬದ ಜತೆಗೆ ಸಾಲು ಸಾಲು ರಜೆಗಳು ಬಂದಿವೆ. ಶುಕ್ರವಾರ ಗುಡ್ ಫ್ರೈಡೇ, ಶನಿವಾರ ಹಾಗೂ ಭಾನುವಾರ ವೀಕೆಂಡ್ ರಜೆ ಹೀಗೆ ಒಂದರ ನಂತರ ಒಂದು ಬಂದಿರುವ ಈ ಬಾರಿಯ ಹಾಲಿಡೇಸ್, ಪ್ರವಾಸ ಪ್ರಿಯರಿಗೆ ಔಟಿಂಗ್ ತೆರಳಲು ಅನುವು ಮಾಡಿಕೊಟ್ಟಿವೆ.
- ಶೀಲಾ ಸಿ. ಶೆಟ್ಟಿ

ಪ್ರತಿನಿತ್ಯದ ಜಂಜಾಟದಿಂದ ಕೊಂಚ ರಿಲಾಕ್ಸ್ ಆಗಲು, ರಿಫ್ರೆಶ್ ಆಗಲು ಇದೀಗ ಸದಾವಕಾಶ. ಕುಟುಂಬದೊಂದಿಗೆ ಇಲ್ಲವೇ ಸ್ನೇಹಿತರೊಂದಿಗೆ ಮೂರ‌್ನಾಲ್ಕು ದಿನದಲ್ಲಿ ಒಂದಿಷ್ಟು ಹೊತ್ತು ಹೊರಗಡೆ ಕಾಲ ಕಳೆಯುವ ಅವಕಾಶ. ಕೊಂಚ ಪ್ಲಾನಿಂಗ್ ಇದ್ದಲ್ಲಿ ಈ ಉರಿಬಿಸಿಲಲ್ಲೂ ಪ್ರವಾಸವನ್ನು ಎಂಜಾಯ್ ಮಾಡಬಹುದು. ಬೆಂಗಳೂರಿಗೆ ತೀರಾ ದೂರವೂ ಅಲ್ಲದ ಹೆಚ್ಚು ಪ್ರಯಾಸಕಾರವೂ ಆಗಿರದಂತಹ ಸ್ಥಳಗಳಿಗೆ ಹೋಗುವ ಪರ್ಫೆಕ್ಟ್ ಪ್ಲಾನ್ ಮಾಡಿದಲ್ಲಿ ರಜೆಯ ಮೋಜನ್ನು ಪ್ರವಾಸ ಮಾಡುತ್ತಾ ಖುಷಿ ಖುಷಿಯಾಗಿ ಕಳೆಯಬಹುದು. ಸುತ್ತಮುತ್ತಲಿರುವ ಒಂದೈದು ಕೂಲ್ ಸ್ಪಾಟ್‌ಗಳ ಸಂಕ್ಷಿಪ್ತ ವಿವರ ಇಲ್ಲಿದ್ದು, ಪ್ಲಾನ್ ಮಾಡಿ ಹೊರಡಿ.

ನಂದಿ ಬೆಟ್ಟ

ಬೆಂಗಳೂರಿಗೆ ತೀರಾ ಹತ್ತಿರದ ಸ್ಥಳವೆಂದರೆ ನಂದಿಬೆಟ್ಟ. ಸೆಖೆಯಿಂದ ಕೊಂಚ ದೂರ ಹೋಗಬೇಕೆನಿಸಿದಲ್ಲಿ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ತೆರಳಬಹುದು. ಪ್ರಕೃತಿಯನ್ನು ನೋಡುತ್ತಾ ಕಾಲಕಳೆಯಬಹುದು. ಪಕ್ಷಿಗಳ ಕಲರವ, ಏರಿಯಲ್ ವ್ಯೆ, ಟಿಪ್ಪು ಡ್ರಾಪ್ ಹೀಗೆ ನಿರಾಂತಕವಾಗಿ ಕಾಲ ಕಳೆಯಬಹುದು. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಅರಣ್ಯ ಇಲಾಖೆ ರಾತ್ರಿ 9ರ ನಂತರ ಪ್ರವೇಶ ನಿಷಿದ್ಧ ಮಾಡಿದೆ. ನಂದಿ ಬೆಟ್ಟ ಬೆಂಗಳೂರಿನಿಂದ 60 ಕಿ. ಮೀ ದೂರದಲ್ಲಿದೆ. ಪಿಕ್‌ನಿಕ್‌ಗೆ ಹೇಳಿಮಾಡಿಸಿದ ಜಾಗ.

ಕೂಲ್ ಕೂರ್ಗ್

ರಾಜಾ ಸೀಟ್, ಅಬ್ಬೆ ಫಾಲ್ಸ್, ತಲಕಾವೇರಿ ಭಾಗಮಂಡಲ, ಕಾವೇರಿ ನಿಸರ್ಗಧಾಮ, ಬೈಲುಕುಪ್ಪೆ ಟಿಬೇಟಿಯನ್ ಕ್ಯಾಂಪ್ ಸೇರಿದಂತೆ ಸಾಕಷ್ಟು ಟೂರಿಸ್ಟ್ ಸ್ಪಾಟ್‌ಗಳು ಕೂರ್ಗ್‌ನಲ್ಲಿವೆ. ಇಲ್ಲಿನ ತಂಪಾದ ಪರಿಸರ ಮೆಕಾನಿಕಲ್ ಲೈಫ್ ನಡೆಸುವವರಿಗೆ ನೆಮ್ಮದಿ ನೀಡುತ್ತದೆ. ಪ್ರೈವೆಟ್ ರೆಸಾರ್ಟ್‌ಗಳಲ್ಲಿ ನೇಚರ್ ಕ್ಯಾಂಪ್ ಹಾಗೂ ಔಟ್‌ಡೋರ್ ಆ್ಯಕ್ಟಿವಿಟೀಸ್ ಕೂಡ ಲಭ್ಯ. ಬೆಂಗಳೂರಿನಿಂದ ಸುಮಾರು 252 ಕಿ. ಮೀ. ದೂರವಿದೆ.

ಚಿಕ್ಕಮಗಳೂರು

ಪ್ರಕೃತಿಯ ಮಡಿಲಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಬೇಸಿಗೆಯಲ್ಲಿ ತಂಪಾಗಿರುತ್ತದೆ. ಎಲ್ಲಿ ನೋಡಿದರೂ ಹಸಿರು. ಸಮೀಪದಲ್ಲಿರುವ ಕಲ್ಲತ್‌ಗಿರಿ, ಮುತ್ತೋಡಿ ಫಾರೆಸ್ಟ್, ಕುದುರೆಮುಖ, ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿಗೂ ಭೇಟಿ ನೀಡಬಹುದು. ಸಮುದ್ರಮಟ್ಟದಿಂದ ಸುಮಾರು 3,400 ಅಡಿ ಎತ್ತರದಲ್ಲಿರುವ ಕಾಫಿ ಸಿಟಿ ಚಿಕ್ಕಮಗಳೂರು ರೊಮ್ಯಾಂಟಿಕ್ ಜಾಗ ಎಂದೇ ಖ್ಯಾತಿ. ಮುಳ್ಳಯ್ಯನಗಿರಿ ಸಮುದ್ರಮಟ್ಟದಿಂದ 6,332 ಅಡಿ ಎತ್ತರದಲ್ಲಿದೆ. ಅಂದಹಾಗೆ, ಇದು ಕರ್ನಾಟಕದ ಅತ್ಯಂತ ಎತ್ತರದ ಶಿಖರ ಕೂಡ. ಪಕ್ಕದಲ್ಲಿರುವ ಸೀತಾಳಯ್ಯನ ಗಿರಿಯಲ್ಲಿ ಮುಳ್ಳಯ್ಯಸ್ವಾಮಿಯ ಪುರಾತನ ದೇವಾಲಯವಿದ್ದು, ಅತ್ಯಂತ ಎತ್ತರದಲ್ಲಿದೆ. ಈ ತುದಿಯಲ್ಲಿ ನಿಂತು ಸುತ್ತಮುತ್ತಲ ಹಸಿರ ಸಿರಿಯನ್ನು ನೋಡುವುದೇ ಮಹಾದಾನಂದ. ಬಾಬಾಬುಡನ್‌ಗಿರಿಯಲ್ಲಿ ದತ್ತಾತ್ರೇಯ ಪೀಠವಿದೆ. ಹಿಂದೂ ಮುಸಲ್ಮಾನರ ಧಾರ್ಮಿಕ ಸ್ಥಳವಿದು. ಇನ್ನು ಹನಿಮೂನ್ ತಾಣವೆಂದೇ ಪ್ರಸಿದ್ಧಿಯಾಗಿರುವ ಕೆಮ್ಮಣ್ಣಗುಂಡಿ ಬೆಂಗಳೂರಿನಿಂದ 308 ಕಿ. ಮೀ. ದೂರದಲ್ಲಿದೆ.

ಕಬಿನಿ-ನಾಗರಹೊಳೆ ವೈಲ್ಡ್‌ಲೈಫ್ ಟೂರ್

ಇಲ್ಲಿನ ಹಿನ್ನಿರು ಹಾಗೂ ಸುತ್ತಲೂ ಆವರಿಸಿದ ಕಾಡು, ಕಾಡುಪ್ರಾಣಿಗಳು, ಪಕ್ಷಿಗಳ ಕಲರವ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ವೈಲ್ಡ್‌ಲೈಫ್ ಟೂರ್, ಜಂಗಲ್ ಸಫಾರಿ ಸೇರಿದಂತೆ ಕಾಡಿನಲ್ಲಿ ಕಳೆವ ಕ್ಷಣಗಳು ಸದಾ ಗಿಜಿಗುಡುವ ಮೆಕಾನಿಕಲ್ ಲೈಫ್‌ನಿಂದ ಒಂದಿಷ್ಟು ಹೊತ್ತು ದೂರ ಕರೆದುಕೊಂಡು ಹೋಗುತ್ತವೆ. ಮಕ್ಕಳು ದೊಡ್ಡವರೊಂದಿಗೆ ಕಾಲ ಕಳೆಯಲು ಉತ್ತಮ ಜಾಗ. ಉದ್ಯಾನನಗರಿಯಿಂದ ಸುಮಾರು 224 ಕಿ. ಮೀ ದೂರದಲ್ಲಿದೆ.

ತಂಪಾದ ಊಟಿ

ಈ ಬೇಸಿಗೆಯಲ್ಲಿ ಊಟಿಗೆ ಹೋದಲ್ಲಿ ಬಿಸಿಲ ಝಳದಿಂದ ಪಾರಾಗಬಹುದು. ಬೆಟ್ಟಗಳ ಸಾಲು, ಟೀ ಪ್ಲಾಂಟೇಷನ್‌ನ ಸುಂದರ ವಾತಾವರಣ, ಅವುಗಳ ಮಧ್ಯೆ ಎದ್ದು ಕಾಣುವ ಪುಟ್ಟ ಪುಟ್ಟ ಮನೆಗಳು ಹೀಗೆ ಪ್ರಕೃತಿಯ ಮಡಿಲಲ್ಲಿ ರಜೆಯ ಮಜಾ ಅನುಭವಿಸಬಹುದು. ಊಟಿ ಲೇಕ್, ಫೆರ್ನ್ ಹಿಲ್ ಪ್ಯಾಲೇಸ್, ಪೈಕರಾ ವಾಟರ್‌ಫಾಲ್ಸ್, ಟೀ ಮ್ಯೂಸಿಯಮ್, ರೋಸ್ ಹಾಗೂ ಬಾಟಾನಿಕಲ್ ಗಾರ್ಡನ್‌ನಲ್ಲಿ ಸುತ್ತಾಡಬಹುದು. ಟೂರಿಸಂ ಇಲಾಖೆ ಆಯೋಜಿಸಿರುವ ಸಮರ್ ಫೆಸ್ಟಿವಲ್‌ನಲ್ಲಿ ಬೋಟ್ ರೇಸ್, ಫ್ಲವರ್ ಡೆಕೋರೇಷನ್ ವೀಕ್ಷಿಸಬಹುದು. ಉದ್ಯಾನನಗರಿಯಿಂದ ಊಟಿ 270 ಕಿ. ಮೀ. ಅಂತರದಲ್ಲಿದೆ.

* ಟೂರ್ ಪ್ಲಾನಿಂಗ್ ಪರ್ಫೆಕ್ಟಾಗಿರಲಿ.

* ನೀರಿನ ಬಾಟಲ್ ಸದಾ ನಿಮ್ಮ ಜೊತೆಗಿರಲಿ.

* ಬಿಸಿಲಲ್ಲಿ ಸಮರ್ ಪ್ರೂಟ್ಸ್ ಸೇವಿಸಿ.
* ಸನ್ ಗ್ಲಾಸ್ ಜತೆಯಲ್ಲಿರಲಿ.

* ಟ್ಯಾನಿಂಗ್‌ನಿಂದ ಬಚಾವಾಗಲು ಸನ್‌ಸ್ಕ್ರೀನ್ ಬಳಸಿ.




Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>