Quantcast
Channel: VijayKarnataka
Viewing all articles
Browse latest Browse all 6795

ಮೆಮೊರಿ ಬಾಕ್ಸ್: ಯಾಣದ ಪ್ರಯಾಣದಲ್ಲಿ ಪ್ರಾಯಾಸ

$
0
0

ಉತ್ತರಕನ್ನಡದ ಯಾಣದ ಶಿಖರದ ತುದಿಯವರೆಗೆ ಹತ್ತಿ ಬಿಡುವ ಉತ್ಸಾಹದಲ್ಲೇ ಹೆಜ್ಜೆ ಹಾಕಿದ್ದು. ಅಚ್ಚ ಹಸಿರ ಸುಂದರ ಪರಿಸರದಲ್ಲಿ ನಿಸರ್ಗ ದೇಗುಲವೆನಿಸಿರುವ ಯಾಣದ ತಾಣಕ್ಕೆ ವಾಹನದಲ್ಲಿ ಹೋಗುವವರೆಗೂ ಇರುವ ಸ್ಥಳವನ್ನು ತಲುಪುವಲ್ಲಿ ಆಗಲೇ ಗಂಟೆ 12 ದಾಟಿತ್ತು. ಅಂದು ಅನಿರೀಕ್ಷಿತವಾಗಿ ಮುಂಜಾನೆ ಯಾರು ಉಪಹಾರವನ್ನು ಮಾಡಲಾಗಿರಲಿಲ್ಲ. ನಮ್ಮ ಕುಟುಂಬದ ಕೆಲವು ಸದಸ್ಯರು 60 ದಾಟಿದ್ದರು. ಇನ್ನು ಕೆಲವರಿಗೆ ಸಕ್ಕರೆ ಹಾಗೂ ರಕ್ತದೊತ್ತಡ ಬೇರೆ ಇತ್ತು. ಅಷ್ಟೆಲ್ಲ ಸಮಸ್ಯೆ ಇಟ್ಟುಕೊಂಡು ಯಾಣದ ಕಾನನದಲ್ಲಿ ಕಲ್ಲುಮುಳ್ಳುಗಳ ನಡುವೆ ನಡೆಯಲು ಸಾಧ್ಯವಾ? ಬೇಡ ಎಂದರೂ ತಿರುಗಿ ಹೆಜ್ಜೆ ಇಡಲಾಗದೆ ಯಾಣ ಯಾನ ಆರಂಭಿಸಿ ಬಿಟ್ಟೆವು.

ಅಚ್ಚಹಸಿರ ವನಸಿರಿ ನಡುವೆ ಝಳುಝಳು ಸದ್ದು ಮಾಡುತ್ತಾ ಹರಿಯುತಿಹ ಚಂಡಿಕಾ ನದಿಯ ಕಲರವ ಇಷ್ಟು ಬಿಟ್ಟರೆ ಇನ್ನೇನು ಇಲ್ಲ. ಇನ್ನೂ ಕೆಲವು ದೂರ ನಡೆಯಬೇಕು, ನೂರಾರು ಮೆಟ್ಟಿಲುಗಳನ್ನೇರಬೇಕು, ಆದರೂ ಹಸಿವಿದ್ದರೂ, ಕೈಲಾಗದಿದ್ದರೂ ಅದನ್ನು ವ್ಯಕ್ತಪಡಿಸಿದರೆ ನನಗೆಲ್ಲಿ ನೋವಾಗುವುದೋ ಎಂದು ಎಲ್ಲರೂ ಕಷ್ಟಪಟ್ಟು ಪಯಣಿಸುವ ಮೂಲಕ ದಶ್ಯಕಾವ್ಯದಂತೆ ಕಂಗೊಳಿಸುವ ಮೋಹಿನಿ ಶಿಖರ, ಭೈರವೇಶ್ವರ ಶಿಖರಗಳ ದರ್ಶನ ಪಡೆದು ಪುನೀತರಾದರು ನನ್ನ ಜತೆಗಿದ್ದವರು. ನಿಸರ್ಗ ದೇಗುಲಗಳ ಚೆಲುವನ್ನು ಕಂಡು ಮೂಕವಿಸ್ಮಿತರಾದರು. ದೇಹದೊಳಗಿದ್ದ ದಣಿವು, ಹಸಿವು ತಂತಾನೆ ಮಾಯವಾದಂತಿತ್ತು. ಎಲ್ಲರಲ್ಲೂ ಅಷ್ಟು ಕಷ್ಟಪಟ್ಟು ಬಂದುದ್ದಕ್ಕೆ ಸಾರ್ಥಕವಾಯಿತೆಂಬ ಮನೋಭಾವ ತಾಂಡವವಾಡುತ್ತಿತ್ತು. ಅದರಲ್ಲೂ ಮೊದಲು ನನ್ನಿಂದಾಗದೆಂದು ಒಬ್ಬರೇ ಕೆಳಗಡೆ ಕೂಳಿತು ನಂತರ ಅವರೊಬ್ಬರೇ ಅಲ್ಲಿಗೆ ಹತ್ತಿಬಂದು ನಮ್ಮನ್ನು ಕೂಡಿಕೊಂಡಿದ್ದು ಬಹಳ ವಿಶೇಷವೆನಿಸಿತ್ತು.

- ವಿ.ಎಸ್.ಕುಮಾರ್


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್