Quantcast
Channel: VijayKarnataka
Viewing all articles
Browse latest Browse all 6795

'ತಿಥಿ' ಕನ್ನಡದ ಅತ್ಯುತ್ತಮ ಚಿತ್ರ

$
0
0

ಹೊಸದಿಲ್ಲಿ: 63ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಾಮ್‌ ರೆಡ್ಡಿ ಅವರ ಚೊಚ್ಚಲ ನಿರ್ದೇಶನದ 'ತಿಥಿ' ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಎಸ್.ಎಸ್‌.ರಾಜಮೌಳಿ ಅವರ 'ಬಾಹುಬಲಿ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈಗಾಗಲೇ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ 'ತಿಥಿ'ಚಿತ್ರದಲ್ಲಿ ವೃತ್ತಿಪರ ಕಲಾವಿದರು ಯಾರೂ ನಟಿಸಿಲ್ಲ ಎನ್ನುವುದು ವಿಶೇಷ.

ಸೆಂಚುರಿ ಗೌಡ 101 ವರ್ಷದ ವೃದ್ಧ ನಿಧನ ಹೊಂದಿದಾಗ ಅವರ ಮೂರು ಪೀಳಿಗೆಯವರು ಯಾವ ರೀತಿ ವರ್ತಿಸುತ್ತಾರೆ ಹಾಗೂ 'ತಿಥಿ' ಸಂದರ್ಭದಲ್ಲಿ ಯಾವ ರೀತಿ ಒಟ್ಟಾಗುತ್ತಾರೆ ಎಂಬುದನ್ನು ಚಿತ್ರದಲ್ಲಿ ಬಹಳ ಕಾಮಿಡಿಯಾಗಿ ತೋರಿಸಲಾಗಿದೆ.

ಪ್ರಶಸ್ತಿ ಪಟ್ಟಿ:

ಅತ್ಯುತ್ತಮ ಚಿತ್ರ: ಬಾಹುಬಲಿ

ಅತ್ಯುತ್ತಮ ನಟ: ಅಮಿತಾಭ್‌ ಬಚ್ಚನ್‌ (ಪೀಕು)

ಅತ್ಯುತ್ತಮ ನಟಿ: ಕಂಗನಾ ರನಾವತ್‌ (ತನು ವೆಡ್ಸ್ ಮನು ರಿಟರ್ನ್ಸ್‌ )

ಅತ್ಯುತ್ತಮ ನಿರ್ದೇಶಕ: ಸಂಜಯ್‌ ಲೀಲಾ ಬನ್ಸಾಲಿ (ಬಾಜೀರಾವ್‌ ಮಸ್ತಾನಿ)

ಅತ್ಯುತ್ತಮ ಪೋಷಕ ನಟ: ಸಮುದಿರಕಾನಿ (ವಿಸಾರನೈ)

ಅತ್ಯುತ್ತಮ ಪೋಷಕ ನಟಿ: ತಾನ್ವಿ ಅಜ್ಮಿ (ಬಾಜೀರಾವ್‌ ಮಸ್ತಾನಿ)

ಅತ್ಯುತ್ತಮ ಹಿಂದಿ ಚಿತ್ರ: ದಮ್‌ ಲಗಾ ಕೇ ಹೈಸಾ

ಅತ್ಯುತ್ತಮ ಮನರಂಜನೆ ಚಿತ್ರ: ಭಜರಂಗಿ ಭಾಯ್‌ಜಾನ್‌

ಅತ್ಯುತ್ತಮ ನೃತ್ಯ ಸಂಯೋಜನೆ: ರೇಮೋ ಡಿಸೋಜಾ, ದೀವಾನಿ ಮಸ್ತಾನಿ ಹಾಡು (ಬಾಜೀರಾವ್‌ ಮಸ್ತಾನಿ)

ಅತ್ಯುತ್ತಮ ಹಿನ್ನೆಲೆ ಗಾಯಕರು: ಮೊನಾಲಿ ಠಾಕೂರ್‌, ಮೊಹ್‌ ಮೊಹ್‌ ಕೆ ದಾಗೆ

ಅತ್ಯುತ್ತಮ ಛಾಯಾಗ್ರಹಣ: ಸುದೀಪ್‌ ಚಾಟರ್ಜಿ (ಬಾಜೀರಾವ್‌ ಮಸ್ತಾನಿ)

ರಾಷ್ಟ್ರೀಯ ಏಕತೆ ಚಿತ್ರ: ನಾನಕ್‌ ಶಾ ಫಕೀರ್‌

ಅತ್ಯುತ್ತಮ ಚಿತ್ರಕತೆ (ಮೂಲ): ಜೂಹಿ ಚತುರ್ವೇದಿ( ಪೀಕು) ಹಾಗೂ ಹಿಮಾಂಶು ಶರ್ಮ (ತನು ವೆಡ್ಸ್‌ ಮನು ರಿಟರ್ನ್ಸ್‌)

ಅತ್ಯುತ್ತಮ ಸಂಭಾಷಣೆ: ಜೂಹಿ ಚತುರ್ವೇದಿ( ಪೀಕು) ಹಾಗೂ ಹಿಮಾಂಶು ಶರ್ಮ (ತನು ವೆಡ್ಸ್‌ ಮನು ರಿಟರ್ನ್ಸ್‌)

ಸಾಮಾಜಿಕ ಕಳಕಳಿ ಚಿತ್ರ: ನಿರ್ಣಾಣಯಕಂ

ಅತ್ಯುತ್ತಮ ಸಂಗೀತ ನಿರ್ದೇಶನ: ಎಂ ಜಯಚಂದ್ರನ್‌, ಕಾತಿರುನ್ನು ಕಾತಿರುನ್ನು (ಎನ್ನು ನಿಂತೆ ಮೊಯಿದ್ದೀನ್‌)

ಅತ್ಯುತ್ತಮ ಹಿನ್ನೆಲೆ ಸಂಗೀತ: ಇಳಿಯರಾಜಾ (ತಾರೈ ತಪಟ್ಟೈ)

ಪರಿಸರ ಸಂರಕ್ಷಣೆ ಚಿತ್ರ: ವಲಿಯಾ ಚಿರಕುಲ್ಲ ಪಕ್ಷಿಕಲ್‌

ಅತ್ಯುತ್ತಮ ಮಕ್ಕಳ ಚಿತ್ರ: ತುರೊಂತೊ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>